<p><strong>ಯಾದಗಿರಿ: ‘</strong>ಭಾರತೀಯ ವೈದ್ಯರಲ್ಲಿನ ಕಠಿಣ ಶ್ರಮ, ಉತ್ತಮ ಕೌಶಲ, ಸಮರ್ಪಣೆ ಮನೋಭಾವದ ವೈದ್ಯಕೀಯ ಸೇವೆಯಿಂದಾಗಿ ಅವರಿಗೆ ವಿಶ್ವದಾದ್ಯಂತ ಮನ್ನಣೆ, ಗೌರವ ಸಿಗುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಯಿಮ್ಸ್) ಆವರಣದಲ್ಲಿ ಸೋಮವಾರ ಕೆಕೆಆರ್ಡಿಬಿ ಅನುದಾನದಲ್ಲಿ (₹ 9.86 ಕೋಟಿ) ಅನುಮೋದನೆಯಾದ ನರ್ಸಿಂಗ್ ಕಾಲೇಜು ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಯಾದಗಿರಿ ಮೆಡಿಕಲ್ ಕಾಲೇಜು ಕೇವಲ ಜಿಲ್ಲೆ, ಕರ್ನಾಟಕ, ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ವೈದ್ಯರನ್ನು ನೀಡುತ್ತಿದೆ. ಭಾರತೀಯ ವೈದ್ಯರಿಗೆ ಯುರೋಪ್, ಮಧ್ಯಪ್ರಾಚ್ಯ, ಅಮೆರಿಕಾದಲ್ಲಿ ಬಹುದೊಡ್ಡ ಗೌರವ ಸಿಗುತ್ತಿದೆ. ಹೀಗಾಗಿ, ವೈದ್ಯಕೀಯ ಶಿಕ್ಷಣಕ್ಕೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡಿ, ವೈದ್ಯಕೀಯ ಸೀಟು ಹಾಗೂ ಕಾಲೇಜುಗಳನ್ನು ಹೆಚ್ಚಳ ಮಾಡುತ್ತಿದೆ’ ಎಂದರು.</p>.<p>‘2013ರಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಘೋಷಣೆ ಮಾಡಿ, ಅದನ್ನು ಆರಂಭವೂ ಮಾಡಿತ್ತು. ಅದನ್ನೇ ನಕಲು ಮಾಡಿದ ಕೇಂದ್ರ ಸರ್ಕಾರ, ಈಗ ಪ್ರಧಾನಿ ಮೋದಿ ಅವರು ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯುವುದಾಗಿ ಹೇಳುತ್ತಿದ್ದಾರೆ. ನಾವೂ ವರ್ಷಗಳ ಹಿಂದೆಯೇ ದೂರದೃಷ್ಟಿ ಇರಿಸಿಕೊಂಡು ಮೆಡಿಕಲ್ ಕಾಲೇಜು ತೆರೆದಿದ್ದೇವೆ’ ಎಂದು ಹೇಳಿದರು.</p>.<p>‘ಜಪಾನ್, ಜರ್ಮನ್, ಇಟಲಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಾಜ್ಯದ ಶುಶ್ರೂಷಕರಿಗೆ ದೊಡ್ಡ ಬೇಡಿಕೆ ಇದೆ. 50 ಸಾವಿರದಿಂದ ಒಂದು ಲಕ್ಷದ ವರೆಗೆ ಶುಶ್ರೂಷಕರನ್ನು ಕಳುಹಿಸುವಂತೆ ಕೋರುತ್ತಿದ್ದಾರೆ. ಆಯಾ ರಾಷ್ಟ್ರಗಳ ಭಾಷೆಗಳ ಅರಿವು, ಉತ್ತಮ ಚಿಕಿತ್ಸಾ ಕೌಶಲವಿದ್ದರೆ ಮಾಸಿಕ ₹ 1.50 ಲಕ್ಷದಿಂದ ₹ 2 ಲಕ್ಷವರೆಗೆ ವೇತನ ಪಡೆಯಬಹುದು’ ಎಂದರು.</p>.<p>‘ನರ್ಸಿಂಗ್ ವಿದ್ಯಾರ್ಥಿಗಳು ಈಗಿನಿಂದಲೇ ಭಾಷಾಜ್ಞಾನ, ಕೌಶಲ ಅಭಿವೃದ್ಧಿ, ಉತ್ತಮ ಸಂವಹನ ಹಾಗೂ ರೋಗಿಗಳೊಂದಿಗೆ ಉತ್ತಮ ವರ್ತನೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ವೈದ್ಯರ ನಿರ್ದೇಶನಗಳನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ, ಶಿಸ್ತುಬದ್ಧತೆ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುವಂತೆ ಬಜೆಟ್ನಲ್ಲಿ ಬೇಡಿಕೆ ಇರಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದು, ಬಜೆಟ್ನಲ್ಲಿ ಘೋಷಣೆಯಾಗುವ ನಿರೀಕ್ಷೆಯೂ ಇರಿಸಿಕೊಂಡಿದ್ದೇವೆ’ ಎಂದರು.</p>.<p>‘ಯಿಮ್ಸ್’ ಮುಖ್ಯಸ್ಥ ಡಾ.ಸಂದೀಪ್ ಹರಸಂಗಿ ಮಾತನಾಡಿ, ‘ಸಚಿವರ ಮಾರ್ಗದರ್ಶನದಂತೆ ಕಾರ್ಯೋನ್ಮುಖ ಆಗುತ್ತಿರುವುದರಿಂದ ಸಂಸ್ಥೆಗೆ ಹೊಸ ಸೌಕರ್ಯಗಳು ಲಭ್ಯವಾಗುತ್ತಿವೆ. ನರ್ಸಿಂಗ್ ಕಾಲೇಜು ಬಂದರೆ ಸಂಸ್ಥೆಗೆ ವಿದ್ಯಾರ್ಥಿಗಳು ಬರುತ್ತಾರೆ. ಅದರಿಂದ ರೋಗಿಗಳ ಚಿಕಿತ್ಸೆಯಲ್ಲಿ ಸುಧಾರಣೆಯೂ ಆಗಲಿದೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.</p>.<h2>‘ಹೊಸ ಎಂಆರ್ಐ ಸ್ಕ್ಯಾನಿಂಗ್ ಮಂಜೂರು’ </h2><p>‘ಹೊಸ ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಮಂಜೂರಾಗಿದ್ದು ಈಗಾಗಲೇ ಟೆಂಡರ್ ಸಹ ಆಗಿದೆ. ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಬಹುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಹೊಸ ಎಂಆರ್ಐ ಸ್ಕ್ಯಾನಿಂಗ್ಗೆ ಕನಿಷ್ಠ ಶುಲ್ಕ ಇರಲಿದ್ದು ಬಿಪಿಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಸ್ಕ್ಯಾನಿಂಗ್ ಮಾಡಿಕೊಳ್ಳಬಹುದು. ಖಾಲಿ ಇರುವ ಹುದ್ದೆಗಳ ಭರ್ತಿಯೂ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: ‘</strong>ಭಾರತೀಯ ವೈದ್ಯರಲ್ಲಿನ ಕಠಿಣ ಶ್ರಮ, ಉತ್ತಮ ಕೌಶಲ, ಸಮರ್ಪಣೆ ಮನೋಭಾವದ ವೈದ್ಯಕೀಯ ಸೇವೆಯಿಂದಾಗಿ ಅವರಿಗೆ ವಿಶ್ವದಾದ್ಯಂತ ಮನ್ನಣೆ, ಗೌರವ ಸಿಗುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.</p>.<p>ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಯಿಮ್ಸ್) ಆವರಣದಲ್ಲಿ ಸೋಮವಾರ ಕೆಕೆಆರ್ಡಿಬಿ ಅನುದಾನದಲ್ಲಿ (₹ 9.86 ಕೋಟಿ) ಅನುಮೋದನೆಯಾದ ನರ್ಸಿಂಗ್ ಕಾಲೇಜು ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಯಾದಗಿರಿ ಮೆಡಿಕಲ್ ಕಾಲೇಜು ಕೇವಲ ಜಿಲ್ಲೆ, ಕರ್ನಾಟಕ, ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ವೈದ್ಯರನ್ನು ನೀಡುತ್ತಿದೆ. ಭಾರತೀಯ ವೈದ್ಯರಿಗೆ ಯುರೋಪ್, ಮಧ್ಯಪ್ರಾಚ್ಯ, ಅಮೆರಿಕಾದಲ್ಲಿ ಬಹುದೊಡ್ಡ ಗೌರವ ಸಿಗುತ್ತಿದೆ. ಹೀಗಾಗಿ, ವೈದ್ಯಕೀಯ ಶಿಕ್ಷಣಕ್ಕೆ ನಮ್ಮ ಸರ್ಕಾರ ವಿಶೇಷ ಒತ್ತು ನೀಡಿ, ವೈದ್ಯಕೀಯ ಸೀಟು ಹಾಗೂ ಕಾಲೇಜುಗಳನ್ನು ಹೆಚ್ಚಳ ಮಾಡುತ್ತಿದೆ’ ಎಂದರು.</p>.<p>‘2013ರಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಘೋಷಣೆ ಮಾಡಿ, ಅದನ್ನು ಆರಂಭವೂ ಮಾಡಿತ್ತು. ಅದನ್ನೇ ನಕಲು ಮಾಡಿದ ಕೇಂದ್ರ ಸರ್ಕಾರ, ಈಗ ಪ್ರಧಾನಿ ಮೋದಿ ಅವರು ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತೆರೆಯುವುದಾಗಿ ಹೇಳುತ್ತಿದ್ದಾರೆ. ನಾವೂ ವರ್ಷಗಳ ಹಿಂದೆಯೇ ದೂರದೃಷ್ಟಿ ಇರಿಸಿಕೊಂಡು ಮೆಡಿಕಲ್ ಕಾಲೇಜು ತೆರೆದಿದ್ದೇವೆ’ ಎಂದು ಹೇಳಿದರು.</p>.<p>‘ಜಪಾನ್, ಜರ್ಮನ್, ಇಟಲಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಾಜ್ಯದ ಶುಶ್ರೂಷಕರಿಗೆ ದೊಡ್ಡ ಬೇಡಿಕೆ ಇದೆ. 50 ಸಾವಿರದಿಂದ ಒಂದು ಲಕ್ಷದ ವರೆಗೆ ಶುಶ್ರೂಷಕರನ್ನು ಕಳುಹಿಸುವಂತೆ ಕೋರುತ್ತಿದ್ದಾರೆ. ಆಯಾ ರಾಷ್ಟ್ರಗಳ ಭಾಷೆಗಳ ಅರಿವು, ಉತ್ತಮ ಚಿಕಿತ್ಸಾ ಕೌಶಲವಿದ್ದರೆ ಮಾಸಿಕ ₹ 1.50 ಲಕ್ಷದಿಂದ ₹ 2 ಲಕ್ಷವರೆಗೆ ವೇತನ ಪಡೆಯಬಹುದು’ ಎಂದರು.</p>.<p>‘ನರ್ಸಿಂಗ್ ವಿದ್ಯಾರ್ಥಿಗಳು ಈಗಿನಿಂದಲೇ ಭಾಷಾಜ್ಞಾನ, ಕೌಶಲ ಅಭಿವೃದ್ಧಿ, ಉತ್ತಮ ಸಂವಹನ ಹಾಗೂ ರೋಗಿಗಳೊಂದಿಗೆ ಉತ್ತಮ ವರ್ತನೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ವೈದ್ಯರ ನಿರ್ದೇಶನಗಳನ್ನು ಸಮಯಕ್ಕೆ ಸರಿಯಾಗಿ ಪಾಲಿಸಿ, ಶಿಸ್ತುಬದ್ಧತೆ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುವಂತೆ ಬಜೆಟ್ನಲ್ಲಿ ಬೇಡಿಕೆ ಇರಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದು, ಬಜೆಟ್ನಲ್ಲಿ ಘೋಷಣೆಯಾಗುವ ನಿರೀಕ್ಷೆಯೂ ಇರಿಸಿಕೊಂಡಿದ್ದೇವೆ’ ಎಂದರು.</p>.<p>‘ಯಿಮ್ಸ್’ ಮುಖ್ಯಸ್ಥ ಡಾ.ಸಂದೀಪ್ ಹರಸಂಗಿ ಮಾತನಾಡಿ, ‘ಸಚಿವರ ಮಾರ್ಗದರ್ಶನದಂತೆ ಕಾರ್ಯೋನ್ಮುಖ ಆಗುತ್ತಿರುವುದರಿಂದ ಸಂಸ್ಥೆಗೆ ಹೊಸ ಸೌಕರ್ಯಗಳು ಲಭ್ಯವಾಗುತ್ತಿವೆ. ನರ್ಸಿಂಗ್ ಕಾಲೇಜು ಬಂದರೆ ಸಂಸ್ಥೆಗೆ ವಿದ್ಯಾರ್ಥಿಗಳು ಬರುತ್ತಾರೆ. ಅದರಿಂದ ರೋಗಿಗಳ ಚಿಕಿತ್ಸೆಯಲ್ಲಿ ಸುಧಾರಣೆಯೂ ಆಗಲಿದೆ’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.</p>.<h2>‘ಹೊಸ ಎಂಆರ್ಐ ಸ್ಕ್ಯಾನಿಂಗ್ ಮಂಜೂರು’ </h2><p>‘ಹೊಸ ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಮಂಜೂರಾಗಿದ್ದು ಈಗಾಗಲೇ ಟೆಂಡರ್ ಸಹ ಆಗಿದೆ. ಒಂದು ತಿಂಗಳಲ್ಲಿ ಕಾರ್ಯಾರಂಭ ಮಾಡಬಹುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಹೊಸ ಎಂಆರ್ಐ ಸ್ಕ್ಯಾನಿಂಗ್ಗೆ ಕನಿಷ್ಠ ಶುಲ್ಕ ಇರಲಿದ್ದು ಬಿಪಿಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಸ್ಕ್ಯಾನಿಂಗ್ ಮಾಡಿಕೊಳ್ಳಬಹುದು. ಖಾಲಿ ಇರುವ ಹುದ್ದೆಗಳ ಭರ್ತಿಯೂ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>