‘ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಆಚರಿಸುವುದರ ಜೊತೆಗೆ ಮಸೀದಿಗಳಲ್ಲಿ ಕೊರೊನಾ ನಿವಾರಣೆಗೆ ನಮಾಜ್ ಸಲ್ಲಿಸಿದ್ದಾರೆ. ಇದಕ್ಕಾಗಿಯೇ ಸಮಯ ಮೀಸಲಿಟ್ಟು, ಈ ವೈರಸ್ಗೆ ಸಂಬಂಧಿಸಿದಂತೆ ಔಷಧಿ ಶೀಘ್ರ ಲಭ್ಯವಾಗಲಿ. ಜನತೆ ಸುಖ, ಸಮಾಧಾನದಿಂದ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಮೌಲ್ವಿ ಮೌಲಾಲ ನಿಜಾಮುದ್ದೀನ್ ಬರ್ಕಾತಿ ತಿಳಿಸಿದರು.