ತುಂತುರು ಮಳೆಯ ನಡುವೆಯೂ, ನೂರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಗುಹೆಯಲ್ಲಿನ ಟೀಕಾರಾಯರ ದರ್ಶನ ಪಡೆದರು.
ಆರಾಧನೆಗೆ ಆಗಮಿಸಿದ ಭಕ್ತರಿಗೆ ಜಾಮೂನು, ಪೂರಿ, ಅನ್ನ, ಸಾಂಬಾರು, ಮಜ್ಜಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕಲಬುರಗಿ ನಗರದ ಶ್ರೀ ಲಕ್ಷ್ಮಿ ನಾರಾಯಣ ಮತ್ತು ಹಂಸನಾಮಕ ಮತ್ತು ಶ್ರೀ ಪ್ರಶಾಂತ ಹನುಮಾನ ಪಾರಾಯಣ ಸಂಘದ ವತಿಯಿಂದ ಟೀಕಾಚಾರ್ಯಾರ ಗ್ರಂಥಾಲಯ ರಚನೆ ಸ್ಥಳವಾದ ಯರಗೋಳ ಬೆಟ್ಟದಲ್ಲಿ ಟೀಕಾಚಾರ್ಯಾರ ಪೂರ್ವಾರಾಧನೆಯ ನಿಮಿತ್ಯ ವಿಷ್ಣು ಸಹಸ್ರನಾಮ, ಸುಂದರಕಾಂಡ, ಶ್ರೀ ಜಯತೀರ್ಥ ಸುತ್ತಿ ಪಾರಾಯಣ ನಡೆಯಿತು.
ಪಾರಾಯಣ ಸಂಘದ ಸಂಚಾಲಕ ರವಿ ಲಾತೂರಕರ, ಅರ್ಚಕರ ಸಂಘದ ಅಧ್ಯಕ್ಷ ಗುಂಡಚಾರ್ಯ ನರಬೊಳಿ, ಶೇಷಮೂರ್ತಿ ಅವಧಾನಿ, ಜಗನ್ನಾಥ ಸಗರ, ಸಿ.ಎಂ. ಜೋಶಿ, ಪ್ರಾಣೇಶ್ ಆಚಾರ್ ಹುಣಸಗಿ, ಗೋಪಾಲಚಾರ್ ತೆಂಗಳಿ ಅನಿಲ್ ಕುಲಕರ್ಣಿ, ವಿನುತಾ ಎಸ್ ಜೋಶಿ ಇದ್ದರು.