ಈಗಾಗಲೇ ಭತ್ತದ ಕಟಾವು ಮುಗಿದಿರುವವರು ಭತ್ತದ ರಾಶಿಯನ್ನು ಹೊಲ ಮತ್ತು ರಸ್ತೆಯ ಬದಿಗಳಲ್ಲಿ ಮಾಡಿದ್ದರು. ರಾತ್ರಿ ಸುರಿದ ಮಳೆಯಿಂದಾಗಿ ತಾಡಪಾಲು ಹೊದಿಕೆಯಾಗದ ಭತ್ತವೂ ನೆನೆದಿದೆ. ತಾಡಪಾಲು ಹೊದಿಕೆ ಮಾಡಿದ್ದವರ ಭತ್ತ ಸುರಕ್ಷಿತವಾಗಿದೆ. ದೇವಾಪುರ, ಆಲ್ದಾಳ, ಹಂದ್ರಾಳ, ನಾಗರಾಳ, ವಾಗಣಗೇರಿ, ಬಾಚಿಮಟ್ಟಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿರುವ ಭತ್ತದ ರಾಶಿಗಳು ನನೆದಿವೆ.