<p><strong>ಸುರಪುರ:</strong> ‘ನಗರಸಭೆ ವ್ಯಾಪ್ತಿಯ 27ನೇ ವಾರ್ಡ್ ಮಹಿಬೂಬ ನಗರ ದರ್ಗಾ ಏರಿಯಾ ಗಬ್ಬೆದ್ದು ನಾರುತ್ತಿದೆ. ತಿಂಗಳುಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ವಾರ್ಡ್ ನಿವಾಸಿ ಮಲ್ಲು ವಿಷ್ಣುಸೇನಾ ತಿಳಿಸಿದ್ದಾರೆ.</p>.<p>‘ನಗರಸಭೆ ಸದಸ್ಯರ ಆಡಳಿತ ಈಗ ಇಲ್ಲ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾರೆ. ನಿವಾಸಿಗಳಿಗೆ ಜಿಲ್ಲಾಧಿಕಾರಿ ಹತ್ತಿರ ಹೋಗಲು ಆಗುವುದಿಲ್ಲ. ನಗರಸಭೆ ಪೌರಾಯುಕ್ತರಿಗೆ ನೀಡಿದ ಮನವಿಗಳು ಕಸದಬುಟ್ಟಿ ಸೇರಿವೆ’ ಎಂದು ಆರೋಪಿಸಿದ್ದಾರೆ.</p>.<p>ಚರಂಡಿಗಳು ತುಂಬಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿದೆ. ಪೌರಕಾರ್ಮಿಕರು ಕಸ ಗುಡಿಸದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಸಂಗ್ರಹವಾಗಿದೆ. ಅಲ್ಲಲ್ಲಿ ಜಾಲಿ ಗಿಡಗಳು ಬೆಳೆದಿವೆ. ನಾಗರಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.</p>.<p>ಮಾರ್ಕಂಡೇಶ್ವರ ಗುಡಿಗೆ ನಿತ್ಯ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಗುಡಿಯ ಸುತ್ತಮುತ್ತ ನೈರ್ಮಲ್ಯ ಮರೀಚಿಕೆಯಾಗಿದೆ. ರಸ್ತೆಗಳು ಹದಗೆಟ್ಟಿದ್ದು ಮಕ್ಕಳು, ವೃದ್ಧರು ಬಿದ್ದ ನಿದರ್ಶನಗಳಿವೆ.</p>.<p>ವಾರ್ಡ್ ನಿವಾಸಿಗಳು ಮನೆ ಕರ, ನೀರಿನ ಕರ, ತ್ಯಾಜ್ಯದ ಕರ ಕಟ್ಟಿದರೂ ಮೂಲಸೌಕರ್ಯ ಒದಗಿಸುತ್ತಿಲ್ಲ. ದ್ವಿತೀಯ ದರ್ಜೆಯ ನಾಗರಿಕರಾಗಿ ಬಾಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ತಾಣಗಳಾಗಿವೆ.</p>.<p>ಈಗ ಮದುವೆ ಸುಗ್ಗಿ. ಬೀಗರು, ನೆಂಟರು ಮನೆಗೆ ಬರುತ್ತಾರೆ. ಹಲವರು ಮನೆಯ ಮುಂದೆಯೇ ಮದುವೆ ಇಟ್ಟುಕೊಂಡಿದ್ದಾರೆ. ಸ್ವಚ್ಛತೆ ಇರದಿರುವುದರಿಂದ ಮದುವೆಗೆ ಹಾಜರಾಗಲು ನೆಂಟರು, ಸ್ನೇಹಿತರು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.</p>.<p>ನಗರಸಭೆಗೆ ಮನವಿ ನೀಡಿ ಬೇಸತ್ತ ನಾಗರಿಕರು ಒಂದು ನಿರ್ಧಾರಕ್ಕೆ ಬಂದರು. ಪ್ರತಿ ಮನೆಯ ಯುವಕರು ಪಿಕಾಸಿ, ಬುಟ್ಟಿ ತೆಗೆದುಕೊಂಡು ತಾವೇ ಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ. ಚರಂಡಿಯ ತ್ಯಾಜ್ಯ ತೆಗೆದು ಬುಟ್ಟಿಯಲ್ಲಿ ಹೊತ್ತುಕೊಂಡು ದೂರದಲ್ಲಿ ಹಾಕಿ ಬರುತ್ತಿದ್ದಾರೆ.</p>.<p>ಈ ದೃಶ್ಯಗಳನ್ನು ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ನೂರಾರು ಕಾಮೆಂಟ್ಗಳು ಬಂದಿದ್ದು ಎಲ್ಲರೂ ನಗರಸಭೆಗೆ ಹಿಡಿಶಾಪ ಹಾಕಿದ್ದಾರೆ.</p>.<p>ಈಗಲಾದರೂ ನಗರಸಭೆ ಎಚ್ಚೆತ್ತುಕೊಂಡು ಇಡೀ ವಾರ್ಡ್ನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಿ, ಫಾಗಿಂಗ್ ಮಾಡಿಸಬೇಕೆಂದು ಮಲ್ಲು ವಿಷ್ಣುಸೇನಾ ಸೇರಿದಂತೆ ವಾರ್ಡ್ನ ನಾಗರಿಕರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-30-1826810486</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ‘ನಗರಸಭೆ ವ್ಯಾಪ್ತಿಯ 27ನೇ ವಾರ್ಡ್ ಮಹಿಬೂಬ ನಗರ ದರ್ಗಾ ಏರಿಯಾ ಗಬ್ಬೆದ್ದು ನಾರುತ್ತಿದೆ. ತಿಂಗಳುಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ’ ಎಂದು ವಾರ್ಡ್ ನಿವಾಸಿ ಮಲ್ಲು ವಿಷ್ಣುಸೇನಾ ತಿಳಿಸಿದ್ದಾರೆ.</p>.<p>‘ನಗರಸಭೆ ಸದಸ್ಯರ ಆಡಳಿತ ಈಗ ಇಲ್ಲ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾರೆ. ನಿವಾಸಿಗಳಿಗೆ ಜಿಲ್ಲಾಧಿಕಾರಿ ಹತ್ತಿರ ಹೋಗಲು ಆಗುವುದಿಲ್ಲ. ನಗರಸಭೆ ಪೌರಾಯುಕ್ತರಿಗೆ ನೀಡಿದ ಮನವಿಗಳು ಕಸದಬುಟ್ಟಿ ಸೇರಿವೆ’ ಎಂದು ಆರೋಪಿಸಿದ್ದಾರೆ.</p>.<p>ಚರಂಡಿಗಳು ತುಂಬಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿದೆ. ಪೌರಕಾರ್ಮಿಕರು ಕಸ ಗುಡಿಸದಿರುವುದರಿಂದ ತ್ಯಾಜ್ಯ ಎಲ್ಲೆಂದರಲ್ಲಿ ಸಂಗ್ರಹವಾಗಿದೆ. ಅಲ್ಲಲ್ಲಿ ಜಾಲಿ ಗಿಡಗಳು ಬೆಳೆದಿವೆ. ನಾಗರಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.</p>.<p>ಮಾರ್ಕಂಡೇಶ್ವರ ಗುಡಿಗೆ ನಿತ್ಯ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಗುಡಿಯ ಸುತ್ತಮುತ್ತ ನೈರ್ಮಲ್ಯ ಮರೀಚಿಕೆಯಾಗಿದೆ. ರಸ್ತೆಗಳು ಹದಗೆಟ್ಟಿದ್ದು ಮಕ್ಕಳು, ವೃದ್ಧರು ಬಿದ್ದ ನಿದರ್ಶನಗಳಿವೆ.</p>.<p>ವಾರ್ಡ್ ನಿವಾಸಿಗಳು ಮನೆ ಕರ, ನೀರಿನ ಕರ, ತ್ಯಾಜ್ಯದ ಕರ ಕಟ್ಟಿದರೂ ಮೂಲಸೌಕರ್ಯ ಒದಗಿಸುತ್ತಿಲ್ಲ. ದ್ವಿತೀಯ ದರ್ಜೆಯ ನಾಗರಿಕರಾಗಿ ಬಾಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಸೊಳ್ಳೆ ಉತ್ಪತ್ತಿಯಾಗಿ ರೋಗ ಹರಡುವ ತಾಣಗಳಾಗಿವೆ.</p>.<p>ಈಗ ಮದುವೆ ಸುಗ್ಗಿ. ಬೀಗರು, ನೆಂಟರು ಮನೆಗೆ ಬರುತ್ತಾರೆ. ಹಲವರು ಮನೆಯ ಮುಂದೆಯೇ ಮದುವೆ ಇಟ್ಟುಕೊಂಡಿದ್ದಾರೆ. ಸ್ವಚ್ಛತೆ ಇರದಿರುವುದರಿಂದ ಮದುವೆಗೆ ಹಾಜರಾಗಲು ನೆಂಟರು, ಸ್ನೇಹಿತರು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.</p>.<p>ನಗರಸಭೆಗೆ ಮನವಿ ನೀಡಿ ಬೇಸತ್ತ ನಾಗರಿಕರು ಒಂದು ನಿರ್ಧಾರಕ್ಕೆ ಬಂದರು. ಪ್ರತಿ ಮನೆಯ ಯುವಕರು ಪಿಕಾಸಿ, ಬುಟ್ಟಿ ತೆಗೆದುಕೊಂಡು ತಾವೇ ಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ. ಚರಂಡಿಯ ತ್ಯಾಜ್ಯ ತೆಗೆದು ಬುಟ್ಟಿಯಲ್ಲಿ ಹೊತ್ತುಕೊಂಡು ದೂರದಲ್ಲಿ ಹಾಕಿ ಬರುತ್ತಿದ್ದಾರೆ.</p>.<p>ಈ ದೃಶ್ಯಗಳನ್ನು ಯುವಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ನೂರಾರು ಕಾಮೆಂಟ್ಗಳು ಬಂದಿದ್ದು ಎಲ್ಲರೂ ನಗರಸಭೆಗೆ ಹಿಡಿಶಾಪ ಹಾಕಿದ್ದಾರೆ.</p>.<p>ಈಗಲಾದರೂ ನಗರಸಭೆ ಎಚ್ಚೆತ್ತುಕೊಂಡು ಇಡೀ ವಾರ್ಡ್ನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಿ, ಫಾಗಿಂಗ್ ಮಾಡಿಸಬೇಕೆಂದು ಮಲ್ಲು ವಿಷ್ಣುಸೇನಾ ಸೇರಿದಂತೆ ವಾರ್ಡ್ನ ನಾಗರಿಕರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-30-1826810486</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>