<p><strong>ಸುರಪುರ:</strong> ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಹುಣಸಿಹೊಳೆ ಕಣ್ವಮಠದಲ್ಲಿ ಕೃಷ್ಣದ್ವೈಪಾಯನ ತೀರ್ಥರ ಆರಾಧನೆಯನ್ನು ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.</p>.<p>ಬೆಳಿಗ್ಗೆ ಪ್ರಭೋದೋತ್ಸವ, ಅಷ್ಠೋತ್ತರ ಪಠಣದ ನಂತರ ಅಭಿಷೇಕ ನಡೆಯಿತು. ವೃಂದಾವನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಮಂಗಳಾರುತಿ ಮಂತ್ರಪುಷ್ಪ ಜರುಗಿದವು.</p>.<p>ಕಾತ್ಯಾಯನಿ ಭಜನಾ ಮಂಡಳಿಯವರು ಸುಶ್ರಾವ್ಯ ಭಜನೆ ಮಾಡಿ ಗಮನ ಸೆಳೆದರು. ಮಠಕ್ಕೆ ಅಡುಗೆ ಸಾಮಾನುಗಳನ್ನು ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.</p>.<p>ಮಠಾಧಿಕಾರಿ ರಾಘವೇಂದ್ರಾಚಾರ್ಯ ರಾಜಪುರೋಹಿತ ಮಾತನಾಡಿ, ‘ಕೃಷ್ಣದ್ವೈಪಾಯನ ತೀರ್ಥರು ಕಣ್ವಮಠದ ಬಿಡಿ ಸನ್ಯಾಸಿಗಳು. ಮೋಕ್ಷ ಪ್ರಾಪ್ತಿಗಾಗಿ ಸನ್ಯಾಸ ಸ್ವೀಕರಿಸಿ ತಪಸ್ಸು, ಅನುಷ್ಠಾನಗಳಿಂದ ಅಗಾಧ ಸಾಧನೆ ಮಾಡಿದರು’ ಎಂದರು.</p>.<p>‘ಮೂಲತಃ ಸುರಪುರದವರೇ ಆದ ಅವರು ತಮ್ಮ ವೃಂದಾವನವನ್ನು ಸುರಪುರದಲ್ಲೆ ಸ್ಥಾಪಿಸಬೇಕು ಎಂದು ಬಯಸಿದ್ದರು. ಅಪರೋಕ್ಷ ಜ್ಞಾನಿಗಳಾದ ಅವರು ಇಂದಿಗೂ ಭಕ್ತರನ್ನು ಹರಸುತ್ತಿದ್ದಾರೆ’ ಎಂದರು.</p>.<p>‘ಕೃಷ್ಣದ್ವೈಪಾಯನ ತೀರ್ಥರು ಬೇಡಿದ್ದನ್ನು ಕೊಡುವ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ. ಅವರನ್ನು ಭಕ್ತಿಯಿಂದ ಪೂಜಿಸಿ, ಸೇವೆ ಸಲ್ಲಿಸಿದರೆ ಖಂಡಿತ ಇಷ್ಟಾರ್ಥಗಳು ಸಿದ್ಧಿಸುತ್ತವೆ’ ಎಂದರು.</p>.<p>ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೆ, ಮಹಾ ಮಂಗಳಾರುತಿಯೊಂದಿಗೆ ಆರಾಧನೆ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಹುಣಸಿಹೊಳೆ ಕಣ್ವಮಠದಲ್ಲಿ ಕೃಷ್ಣದ್ವೈಪಾಯನ ತೀರ್ಥರ ಆರಾಧನೆಯನ್ನು ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.</p>.<p>ಬೆಳಿಗ್ಗೆ ಪ್ರಭೋದೋತ್ಸವ, ಅಷ್ಠೋತ್ತರ ಪಠಣದ ನಂತರ ಅಭಿಷೇಕ ನಡೆಯಿತು. ವೃಂದಾವನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಮಂಗಳಾರುತಿ ಮಂತ್ರಪುಷ್ಪ ಜರುಗಿದವು.</p>.<p>ಕಾತ್ಯಾಯನಿ ಭಜನಾ ಮಂಡಳಿಯವರು ಸುಶ್ರಾವ್ಯ ಭಜನೆ ಮಾಡಿ ಗಮನ ಸೆಳೆದರು. ಮಠಕ್ಕೆ ಅಡುಗೆ ಸಾಮಾನುಗಳನ್ನು ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.</p>.<p>ಮಠಾಧಿಕಾರಿ ರಾಘವೇಂದ್ರಾಚಾರ್ಯ ರಾಜಪುರೋಹಿತ ಮಾತನಾಡಿ, ‘ಕೃಷ್ಣದ್ವೈಪಾಯನ ತೀರ್ಥರು ಕಣ್ವಮಠದ ಬಿಡಿ ಸನ್ಯಾಸಿಗಳು. ಮೋಕ್ಷ ಪ್ರಾಪ್ತಿಗಾಗಿ ಸನ್ಯಾಸ ಸ್ವೀಕರಿಸಿ ತಪಸ್ಸು, ಅನುಷ್ಠಾನಗಳಿಂದ ಅಗಾಧ ಸಾಧನೆ ಮಾಡಿದರು’ ಎಂದರು.</p>.<p>‘ಮೂಲತಃ ಸುರಪುರದವರೇ ಆದ ಅವರು ತಮ್ಮ ವೃಂದಾವನವನ್ನು ಸುರಪುರದಲ್ಲೆ ಸ್ಥಾಪಿಸಬೇಕು ಎಂದು ಬಯಸಿದ್ದರು. ಅಪರೋಕ್ಷ ಜ್ಞಾನಿಗಳಾದ ಅವರು ಇಂದಿಗೂ ಭಕ್ತರನ್ನು ಹರಸುತ್ತಿದ್ದಾರೆ’ ಎಂದರು.</p>.<p>‘ಕೃಷ್ಣದ್ವೈಪಾಯನ ತೀರ್ಥರು ಬೇಡಿದ್ದನ್ನು ಕೊಡುವ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ. ಅವರನ್ನು ಭಕ್ತಿಯಿಂದ ಪೂಜಿಸಿ, ಸೇವೆ ಸಲ್ಲಿಸಿದರೆ ಖಂಡಿತ ಇಷ್ಟಾರ್ಥಗಳು ಸಿದ್ಧಿಸುತ್ತವೆ’ ಎಂದರು.</p>.<p>ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೆ, ಮಹಾ ಮಂಗಳಾರುತಿಯೊಂದಿಗೆ ಆರಾಧನೆ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>