<p><em>ಅಶೋಕ ಸಾಲವಾಡಗಿ</em></p>.<p>ಸುರಪುರ: ಪಕ್ಕದಲ್ಲೆ ಕೃಷ್ಣೆ ಹರಿಯುತ್ತಿದ್ದರೂ ಒಂದು ಕಾಲದಲ್ಲಿ ಅವಿಭಜಿತ ಸುರಪುರ ತಾಲ್ಲೂಕು ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಅದರಲ್ಲೂ ಕುಡಿಯುವ ನೀರಿಗೆ ಬೇಸಿಗೆ ಕಾಲದಲ್ಲಿ ತತ್ವಾರ ಉಂಟಾಗುತ್ತಿತ್ತು. ಪರ್ಜನ್ಯ ಜಪವೇ ಗತಿ ಎನ್ನುವಷ್ಟರ ಮಟ್ಟಿಗೆ ಭೀಕರವಾಗಿತ್ತು.</p>.<p>ಸದ್ಯ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ತಾಪುರ, ಆಲಾಳ (ಈ ಎರಡು ಗ್ರಾಮಗಳಲ್ಲಿ ಈಗ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.) ತಳ್ಳಳ್ಳಿ ಬಿ, ಐನಾಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿದೆ.</p>.<p>ಕೋನ್ಹಾಳ, ರತ್ತಾಳ, ಚಂದಲಾಪುರ, ವಾಗಣಗೇರಿ ಇತರ ಕೆಲ ಗ್ರಾಮಗಳಲ್ಲಿ ಆಗಾಗ ಸ್ವಲ್ಪ ನೀರಿನ ಸಮಸ್ಯೆ ಕಂಡು ಬರುತ್ತದೆ. ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೆಡುವುದು, ಮೋಟಾರು ಸುಡುವುದು ಇತರ ಸಮಸ್ಯೆಗಳು ಇರುತ್ತವೆ. ಅವೆಲ್ಲವೂ ತಾತ್ಕಾಲಿಕವಾಗಿದ್ದು ಸಂಬಂಧಿಸಿದ ಸಿಬ್ಬಂದಿ ದುರಸ್ತಿ ಮಾಡಿ ವ್ಯವಸ್ಥೆ ಸರಿಪಡಿಸುತ್ತಾರೆ.</p>.<p>ಸುರಪುರ ವಿಭಜನೆಯಾಗಿ ಹುಣಸಗಿ ತಾಲ್ಲೂಕು ಪ್ರತ್ಯೇಕವಾದ ಮೇಲೆ ಸುರಪುರ ತಾಲ್ಲೂಕಿನಲ್ಲಿ 110 ಗ್ರಾಮಗಳು ಒಳಗೊಂಡಿವೆ. ಎಲ್ಲ ತಾಲ್ಲೂಕುಗಳಲ್ಲಿ ಜೆಜೆಎಂ ಕಾಮಗಾರಿ ನಡೆದಿದೆ. ಅವುಗಳಲ್ಲಿ 90 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಗ್ರಾಮಗಳಲ್ಲಿ ಪ್ರಗತಿಯಲ್ಲಿದೆ.</p>.<p>70 ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 16 ದುರಸ್ತಿಯಲ್ಲಿವೆ. ಕೆಲವು ಸಂಪೂರ್ಣ ಹದಗೆಟ್ಟಿದ್ದು ಹೊಸ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿದೆ. ಆದರೂ ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದೆ. ಬಿಲ್ ಸಂಪೂರ್ಣ ಎತ್ತಲಾಗಿದೆ ಎಂಬ ದೂರುಗಳು ಇವೆ.</p>.<p>ಗುತ್ತಿಬಸವೇಶ್ವರದಲ್ಲಿ ಪ್ರಸ್ತುತ ಸಾಲಿನಲ್ಲಿ ಕೆಕೆಆರ್ಡಿಬಿ ಅನುದಾನ ₹65 ಲಕ್ಷ ವೆಚ್ಚದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗಿದೆ. ರತ್ತಾಳ ಗ್ರಾಮದಲ್ಲಿ ನೀರಿನ ಟ್ಯಾಂಕ್ ಅನುಪಯುಕ್ತವಾಗಿದ್ದು ಬೀಳುವ ಹಂತದಲ್ಲಿದೆ. ವಾಗಣಗೇರಿ ಗ್ರಾಮದಲ್ಲಿ ಸಮರ್ಪಕ ನೀರು ಸರಬರಾಜು ಮಾಡದಿರುವುದರಿಂದ ನೀರಿನ ಟ್ಯಾಂಕ್ ಮುಂದೆ ಯಾವಾಗಲು ಖಾಲಿ ಕೊಡಗಳ ಸಾಲು ಕಂಡು ಬರುತ್ತದೆ.</p>.<p>ಒಟ್ಟಾರೆ ತಾಲ್ಲೂಕಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಪರಿಣಾಮ ತಾಲ್ಲೂಕು ಸಂಪೂರ್ಣ ದಾಹ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-30-983203124</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಅಶೋಕ ಸಾಲವಾಡಗಿ</em></p>.<p>ಸುರಪುರ: ಪಕ್ಕದಲ್ಲೆ ಕೃಷ್ಣೆ ಹರಿಯುತ್ತಿದ್ದರೂ ಒಂದು ಕಾಲದಲ್ಲಿ ಅವಿಭಜಿತ ಸುರಪುರ ತಾಲ್ಲೂಕು ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಅದರಲ್ಲೂ ಕುಡಿಯುವ ನೀರಿಗೆ ಬೇಸಿಗೆ ಕಾಲದಲ್ಲಿ ತತ್ವಾರ ಉಂಟಾಗುತ್ತಿತ್ತು. ಪರ್ಜನ್ಯ ಜಪವೇ ಗತಿ ಎನ್ನುವಷ್ಟರ ಮಟ್ಟಿಗೆ ಭೀಕರವಾಗಿತ್ತು.</p>.<p>ಸದ್ಯ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಕ್ತಾಪುರ, ಆಲಾಳ (ಈ ಎರಡು ಗ್ರಾಮಗಳಲ್ಲಿ ಈಗ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.) ತಳ್ಳಳ್ಳಿ ಬಿ, ಐನಾಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಯುತ್ತಿದೆ.</p>.<p>ಕೋನ್ಹಾಳ, ರತ್ತಾಳ, ಚಂದಲಾಪುರ, ವಾಗಣಗೇರಿ ಇತರ ಕೆಲ ಗ್ರಾಮಗಳಲ್ಲಿ ಆಗಾಗ ಸ್ವಲ್ಪ ನೀರಿನ ಸಮಸ್ಯೆ ಕಂಡು ಬರುತ್ತದೆ. ಕೆಲ ಗ್ರಾಮಗಳಲ್ಲಿ ಕೊಳವೆಬಾವಿ ಕೆಡುವುದು, ಮೋಟಾರು ಸುಡುವುದು ಇತರ ಸಮಸ್ಯೆಗಳು ಇರುತ್ತವೆ. ಅವೆಲ್ಲವೂ ತಾತ್ಕಾಲಿಕವಾಗಿದ್ದು ಸಂಬಂಧಿಸಿದ ಸಿಬ್ಬಂದಿ ದುರಸ್ತಿ ಮಾಡಿ ವ್ಯವಸ್ಥೆ ಸರಿಪಡಿಸುತ್ತಾರೆ.</p>.<p>ಸುರಪುರ ವಿಭಜನೆಯಾಗಿ ಹುಣಸಗಿ ತಾಲ್ಲೂಕು ಪ್ರತ್ಯೇಕವಾದ ಮೇಲೆ ಸುರಪುರ ತಾಲ್ಲೂಕಿನಲ್ಲಿ 110 ಗ್ರಾಮಗಳು ಒಳಗೊಂಡಿವೆ. ಎಲ್ಲ ತಾಲ್ಲೂಕುಗಳಲ್ಲಿ ಜೆಜೆಎಂ ಕಾಮಗಾರಿ ನಡೆದಿದೆ. ಅವುಗಳಲ್ಲಿ 90 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಉಳಿದ ಗ್ರಾಮಗಳಲ್ಲಿ ಪ್ರಗತಿಯಲ್ಲಿದೆ.</p>.<p>70 ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 16 ದುರಸ್ತಿಯಲ್ಲಿವೆ. ಕೆಲವು ಸಂಪೂರ್ಣ ಹದಗೆಟ್ಟಿದ್ದು ಹೊಸ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿದೆ. ಆದರೂ ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದೆ. ಬಿಲ್ ಸಂಪೂರ್ಣ ಎತ್ತಲಾಗಿದೆ ಎಂಬ ದೂರುಗಳು ಇವೆ.</p>.<p>ಗುತ್ತಿಬಸವೇಶ್ವರದಲ್ಲಿ ಪ್ರಸ್ತುತ ಸಾಲಿನಲ್ಲಿ ಕೆಕೆಆರ್ಡಿಬಿ ಅನುದಾನ ₹65 ಲಕ್ಷ ವೆಚ್ಚದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗಿದೆ. ರತ್ತಾಳ ಗ್ರಾಮದಲ್ಲಿ ನೀರಿನ ಟ್ಯಾಂಕ್ ಅನುಪಯುಕ್ತವಾಗಿದ್ದು ಬೀಳುವ ಹಂತದಲ್ಲಿದೆ. ವಾಗಣಗೇರಿ ಗ್ರಾಮದಲ್ಲಿ ಸಮರ್ಪಕ ನೀರು ಸರಬರಾಜು ಮಾಡದಿರುವುದರಿಂದ ನೀರಿನ ಟ್ಯಾಂಕ್ ಮುಂದೆ ಯಾವಾಗಲು ಖಾಲಿ ಕೊಡಗಳ ಸಾಲು ಕಂಡು ಬರುತ್ತದೆ.</p>.<p>ಒಟ್ಟಾರೆ ತಾಲ್ಲೂಕಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಶ್ರಮವಹಿಸಿದ್ದಾರೆ. ಪರಿಣಾಮ ತಾಲ್ಲೂಕು ಸಂಪೂರ್ಣ ದಾಹ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-30-983203124</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>