<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ ₹4.25 ಕೋಟಿ ಮೌಲ್ಯದ 50 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡು ಜಮೀನುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ತಿಮ್ಮವ್ವ ಭೀಮಪ್ಪ, ಯಂಕಮ್ಮ ರಂಗಯ್ಯ, ನಾಗರಾಜ ಹನುಮಂತ, ಶರಣಮ್ಮ ಸೇರಿ 9 ಮಂದಿ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹೇಮನೂರ ಸೀಮಾಂತರದ ತಿಮ್ಮವ್ವ ಜಮೀನಿನಲ್ಲಿ ₹31.18 ಲಕ್ಷ ಮೌಲ್ಯದ 3,669 ಮೆ.ಟನ್ ಮರಳು, ಯಂಕಮ್ಮ ಜಮೀನಿನಲ್ಲಿ ₹21.98 ಲಕ್ಷ ಮೌಲ್ಯದ 2,587 ಮೆ.ಟನ್, ನಾಗರಾಜ ಜಮೀನಿನಲ್ಲಿ ₹46.94 ಲಕ್ಷ ಮೌಲ್ಯದ 5,523 ಮೆ.ಟನ್ ಮರಳು, ಶರಣಮ್ಮ ಜಮೀನಿನಲ್ಲಿ ₹17.39 ಲಕ್ಷದ 2046 ಮೆ.ಟನ್ ಮರಳು ಹಾಗೂ ಉಮಾದೇವಿ ಜಮೀನಿನಲ್ಲಿ ₹43.41 ಲಕ್ಷ ಮೌಲ್ಯದ 5,108 ಮೆ.ಟನ್ ಮರಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.</p>.<p>ಕರ್ನಾಳ ಸೀಮಾಂತರದಲ್ಲಿನ ಯಂಕಣ್ಣ, ಮಹಾದೇವಪ್ಪ ಅವರ ಜಮೀನಿನಲ್ಲಿ ₹90.34 ಲಕ್ಷ ಮೌಲ್ಯದ 10,629 ಮೆ.ಟನ್ ಮರಳು ಹಾಗೂ ಭೀಮಯ್ಯ ಸಂಜೀವಪ್ಪ ಜಮೀನಿನಲ್ಲಿ ₹1.74 ಕೋಟಿ ಮೌಲ್ಯದ 20,536 ಮೆ.ಟನ್ ಮರಳು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಆರೋಪಿಗಳು ಅನಧಿಕೃತವಾಗಿ ಕೃಷ್ಣಾ ನದಿಯಿಂದ ಮರಳನ್ನು ಗಣಿಗಾರಿಕೆ ಮಾಡಿ, ಕಳ್ಳತನದಿಂದ ಮಾರಾಟ ಮಾಡಲು ಸಂಗ್ರಹಿಸಿದ್ದರು. ಒಟ್ಟು ₹4.25 ಕೋಟಿ ಮೌಲ್ಯದ 50,098 ಮೆ.ಟನ್ ಮರಳು ಹಾಗೂ ತಲಾ ₹ 15 ಲಕ್ಷ ಮೌಲ್ಯದ ಎರಡು ಹಿಟಾಚಿಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-35-1234888211</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ (ಯಾದಗಿರಿ ಜಿಲ್ಲೆ):</strong> ತಾಲ್ಲೂಕಿನಲ್ಲಿ ಕೃಷ್ಣಾ ನದಿಯಿಂದ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ ₹4.25 ಕೋಟಿ ಮೌಲ್ಯದ 50 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡು ಜಮೀನುಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ಅವರು ನೀಡಿದ ದೂರಿನ ಅನ್ವಯ ತಿಮ್ಮವ್ವ ಭೀಮಪ್ಪ, ಯಂಕಮ್ಮ ರಂಗಯ್ಯ, ನಾಗರಾಜ ಹನುಮಂತ, ಶರಣಮ್ಮ ಸೇರಿ 9 ಮಂದಿ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಹೇಮನೂರ ಸೀಮಾಂತರದ ತಿಮ್ಮವ್ವ ಜಮೀನಿನಲ್ಲಿ ₹31.18 ಲಕ್ಷ ಮೌಲ್ಯದ 3,669 ಮೆ.ಟನ್ ಮರಳು, ಯಂಕಮ್ಮ ಜಮೀನಿನಲ್ಲಿ ₹21.98 ಲಕ್ಷ ಮೌಲ್ಯದ 2,587 ಮೆ.ಟನ್, ನಾಗರಾಜ ಜಮೀನಿನಲ್ಲಿ ₹46.94 ಲಕ್ಷ ಮೌಲ್ಯದ 5,523 ಮೆ.ಟನ್ ಮರಳು, ಶರಣಮ್ಮ ಜಮೀನಿನಲ್ಲಿ ₹17.39 ಲಕ್ಷದ 2046 ಮೆ.ಟನ್ ಮರಳು ಹಾಗೂ ಉಮಾದೇವಿ ಜಮೀನಿನಲ್ಲಿ ₹43.41 ಲಕ್ಷ ಮೌಲ್ಯದ 5,108 ಮೆ.ಟನ್ ಮರಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.</p>.<p>ಕರ್ನಾಳ ಸೀಮಾಂತರದಲ್ಲಿನ ಯಂಕಣ್ಣ, ಮಹಾದೇವಪ್ಪ ಅವರ ಜಮೀನಿನಲ್ಲಿ ₹90.34 ಲಕ್ಷ ಮೌಲ್ಯದ 10,629 ಮೆ.ಟನ್ ಮರಳು ಹಾಗೂ ಭೀಮಯ್ಯ ಸಂಜೀವಪ್ಪ ಜಮೀನಿನಲ್ಲಿ ₹1.74 ಕೋಟಿ ಮೌಲ್ಯದ 20,536 ಮೆ.ಟನ್ ಮರಳು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಆರೋಪಿಗಳು ಅನಧಿಕೃತವಾಗಿ ಕೃಷ್ಣಾ ನದಿಯಿಂದ ಮರಳನ್ನು ಗಣಿಗಾರಿಕೆ ಮಾಡಿ, ಕಳ್ಳತನದಿಂದ ಮಾರಾಟ ಮಾಡಲು ಸಂಗ್ರಹಿಸಿದ್ದರು. ಒಟ್ಟು ₹4.25 ಕೋಟಿ ಮೌಲ್ಯದ 50,098 ಮೆ.ಟನ್ ಮರಳು ಹಾಗೂ ತಲಾ ₹ 15 ಲಕ್ಷ ಮೌಲ್ಯದ ಎರಡು ಹಿಟಾಚಿಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-35-1234888211</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>