ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣ ನೀರು ಕೃಷ್ಣಾನದಿ ಮೂಲಕ ಹರಿಬಿಡುತ್ತಿರುವುದರಿಂದ ಕೃಷ್ಣಾನದಿಗೆ ಪ್ರವಾಹ ಉಂಟಾಗಿದೆ. ಈ ಸಂದರ್ಭದಲ್ಲಿ ಮೀನುಗಾರರು ಸೇರಿದಂತೆ ನದಿತೀರದ ನಿವಾಸಿಗಳು ಯಾವುದೇ ಕಾರಣಕ್ಕೂ ಈಜುವ ದುಸ್ಸಾಹಸಕ್ಕೆ ಮುಂದಾಗಬಾರದು. ಒಂದು ವೇಳೆ ಅಪಾಯ ಕಂಡು ಬಂದಲ್ಲಿ ತಾಲ್ಲೂಕು ಆಡಳಿತವನ್ನು ಸಂಪರ್ಕಿಸಲು ಶೆಳ್ಳಿಗಿ, ದೇವಾಪುರ, ತಿಂಥಣಿ, ನೀಲಕಂಠರಾಯನಗಡ್ಡಿ, ಬಂಡೊಳ್ಳಿ, ಲಿಂಗದಳ್ಳಿ, ಬಂಡೊಳ್ಳಿ ಗ್ರಾಮಸ್ಥರಲ್ಲಿ ಕೋರಲಾಗಿದೆ. ನೀಲಕಂಠರಾಯನಗಡ್ಡಿ ಗ್ರಾಮಸ್ಥರು ಹೊರಜಗತ್ತಿನ ಸಂಪರ್ಕ ಸಾಧಿಸಲು ಕಿರು ಪುಟ್ ಸೇತುವೆ ಸಿದ್ಧವಾಗಿದ್ದು, ಜನರು ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಗಡ್ಡಿ ಜನರಿಗೆ ಪಡಿತರ ಒದಗಿಸಲಾಗುವುದು. ಅಲ್ಲಿಯ ಜನರು ಆರೋಗ್ಯದಿಂದ ಸುರಕ್ಷಿತವಾಗಿದ್ದಾರೆ ಎಂದರು.