ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ನಡೆಯುವ ಶಿವರಾತ್ರಿ ಜಾಗರಣೆಗೆ ದೇಗುಲಗಳು ಸಜ್ಜಾಗಿವೆ. ಸುಣ್ಣ ಬಣ್ಣ ಬಳಿದು ದೇವಸ್ಥಾನಗಳನ್ನು ಸ್ವಚ್ಛತೆ ಮಾಡಲಾಗಿದೆ.
ಈಶ್ವರ, ಪರಮೇಶ್ವರ ಇನ್ನಿತರ ಹೆಸರಿಗಳಿಂದ ಕೂಡಿರುವ ಪರಮ ಶಿವನನ್ನು ಧ್ಯಾನಿಸುವ, ಪೂಜಿಸುವ ಉಪವಾಸ ವ್ರತ ಮಾಡುವೇ ದಿನವೇ ಶಿವರಾತ್ರಿಯಾಗಿದೆ. ಈ ದಿನದಲ್ಲಿ ಮಾಡುವ ಪ್ರಾರ್ಥನೆ, ಉಪಾವಾಸ ಶ್ರೇಷ್ಠವೆಂದು ಭಕ್ತರ ನಂಬಿಕೆಯಾಗಿದೆ.
ಅಮೃತೇಶ್ವರ ದೇವಸ್ಥಾನ: ನಗರದ ಅಮೃತೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಪೂಜೆಗಳು ಆರಂಭಗೊಳ್ಳಲಿವೆ. ಬೆಳಿಗ್ಗೆ 7 ಗಂಟೆಗೆ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಯಲಿದೆ.
ಲಕ್ಷ್ಮೀ ದೇವಸ್ಥಾನ: ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ಮಹಾರುದ್ರಭಿಷೇಕ, 1001 ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ.
***
ಗುರುವಾರ ಬೆಳಿಗ್ಗೆ ಅಮೃತೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ 5ರಿಂದಲೇ ಮಹಾ ಪ್ರಸಾದ ವಿತರಿಸಲಾಗುತ್ತದೆ. ಭಕ್ತರೊಬ್ಬರಿಂದ ಪೂಜೆ ಹಮ್ಮಿಕೊಳ್ಳಲಾಗಿದೆ ಮಲ್ಲಮ್ಮ ಶಿವಯ್ಯಸ್ವಾಮಿ, ಅಮೃತೇಶ್ವರ ದೇವಸ್ಥಾನ ಆರ್ಚಕಿ
***
ದೇವಸ್ಥಾನಕ್ಕೆ ಬರುವ ಭಕ್ತರಿಂದ ಹಾಲಾಭಿಷೇಕ ಮತ್ತು ಬಿಲ್ವಾರ್ಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ವೇಳೆ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚು ಸೂಗಯ್ಯ ಸ್ವಾಮಿ, ಲಕ್ಷ್ಮಿ ದೇವಸ್ಥಾನ