‘ನನ್ನ ಗಂಡ 9 ವರ್ಷದ ಹಿಂದೆ ಮೃತಪಟ್ಟರು. ನನಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಹಿರಿಯ ಮಗ ಮಗ ಮಲ್ಲಿಕಾರ್ಜುನ ಟಿಪ್ಪರ್ ಚಾಲಕನಾಗಿದ್ದ. ಎಂಟು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಂದಿಗೂ ಪರಿಹಾರ ಸಿಕ್ಕಿಲ್ಲ. ಇನ್ನೊಬ್ಬ ಮಗ ಮದುವೆಯಾಗಿ ಬೇರೆ ಕಡೆ ವಾಸವಾಗಿದ್ದಾರೆ. ಈಗ ಉಳಿದ ಇಬ್ಬರು ಮಕ್ಕಳು ಅಂಧರಾಗಿದ್ದು, ಅವರನ್ನು ಸಾಕಿ ಬೆಳೆಸುವುದು ನನ್ನ ಹೆಗಲ ಮೇಲಿದೆ.ಅಂಧ ಮಕ್ಕಳಿಗೆ ಮಾಸಾಶನ ಹಾಗೂ ನನಗೆ ವಿಧವಾ ವೇತನ ಮಾಡಿಸಿ ಕೊಡುತ್ತೇನೆ ಎಂದು ಇಬ್ರಾಹಿಂಪುರ ಗ್ರಾಮದ ಒಬ್ಬ ವ್ಯಕ್ತಿ ₹4 ಸಾವಿರ ತೆಗೆದುಕೊಂಡು ಹೋಗಿ ಎಂಟು ವರ್ಷವಾಗಿದೆ. ಇಂದಿಗೂ ಮಂಜೂರಾತಿ ಕೊಡಿಸಿಲ್ಲ’ ಎಂದು ತಾಯಿ ಚಂದ್ರಮ್ಮ ಅಳಲು ತೋಡಿಕೊಂಡರು.