‘ಮೂರು ದಿನ ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಶಿಬಿರಾರ್ಥಿಗಳಿಗೆ ಸಾಮಾಜಿಕ ಐತಿಹಾಸಿಕ, ಪೌರಾಣಿಕ ಹಾಗೂ ಹವ್ಯಾಸಿ ನಾಟಕಗಳ ರಂಗಗೀತೆ ತರಬೇತಿ ನೀಡಲಾಗುವುದು. ಫೆ. 26 ರಂದು ಸಂಜೆ 4 ಗಂಟೆಗೆ ಸಂಗೀತ ಶಿಬಿರದ ಸಮಾರೋಪ ನಡೆಯಲಿದೆ. ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಜ್ಯುಗೇರಿ, ಅಲಗೂಡ ಶಾಲೆಯ ಮುಖ್ಯಗುರು ರಾಮಣ್ಣ ಕುಲಕರ್ಣಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್, ಶಿಬಿರದ ನಿರ್ದೇಶಕ ಶ್ರೀನಿವಾಸ ಭಟ್ (ಚಿನ್ನಿ) ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.