ಅದರಲ್ಲಿ ಖರ್ಚಿಗಾಗಿ ₹50,000 ತಮ್ಮ ಜೇಬಿನಲ್ಲಿ ಇಟ್ಟುಕೊಂಡು, ಉಳಿದ ₹3.50 ಲಕ್ಷ ಹಣವನ್ನು ತಮ್ಮ ಮೋಟರ್ ಸೈಕಲ್ನ ಪೆಟ್ರೋಲ್ ಟ್ಯಾಂಕ್ ಕವರ್ನಲ್ಲಿ ಇಟ್ಟು ಕಟ್ಟಿಗೆ ಖರೀದಿ ಕುರಿತು ರಘುವೀರ್ ಸಾಮಿಲ್ಗೆ ಹೋಗಿದ್ದಾರೆ. ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ ಕಟ್ಟಿಗೆ ವಿಚಾರ ಮಾಡುತ್ತಿರುವಾಗ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು ಮೋಟಾರ್ ಸೈಕಲ್ನಲ್ಲಿ ಇಟ್ಟಿದ್ದ ಹಣವನ್ನು ತೆಗೆದುಕೊಂಡು ಹೋಗಿರುತ್ತಾನೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.