ಘಟನೆ ವಿವರ: 2015ರ ಜನವರಿ 12ರಂದು ₹1.39 ಲಕ್ಷ ಹಣ, ಬಂಗಾರ, ಬೆಳ್ಳಿ ಸಾಮಾನು ಕಳವು, ಮಾರ್ಚ್ 12ರಂದು ₹1.20 ಲಕ್ಷ ಹಣ, ಬಂಗಾರ ಕಳವು, ಏಪ್ರಿಲ್ 12ರಂದು ₹58 ಸಾವಿರ ಬೆಲೆ ಬಾಳುವ ಸ್ವತ್ತು ದೋಚಿಕೊಂಡ ಹೋದ ಬಗ್ಗೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಗಮ್ಮ ಬೋಸ್ಲೆ, ಹಂಗೂರಬಾಯಿ ಪವಾರ್, ದೇವಕ್ಕಿ ಬೋಸ್ಲೆ, ಸುಚಿತಾ ಚಿಗರಿಕಾರ, ರಾಧಿಕಾ ಪವಾರ್, ರಡ್ಡಿ ಅಲಿಯಾಸ್ ರಾಜಾ, ಅಶೋಕ, ರವಿ ಅಲಿಯಾಸ್ ಗಡ್ಯಾ ಭೀಮಣ್ಣ ಪವಾರ್, ಟೋಪ್ಯಾ ಅಲಿಯಾಸ್ ಟೋಪಲೆ ಬೋಸ್ಲೆ, ಮಹಾಂತೇಶ ಬೋಸ್ಲೆಆರೋಪಿಗಳು. ಎಲ್ಲರೂ ಸುರಪುರ ತಾಲ್ಲೂಕಿನ ಮಾಲಗತ್ತಿಯವರು. ಇದರಲ್ಲಿರವಿ ಅಲಿಯಾಸ್ ಗಡ್ಯಾ ಭೀಮಣ್ಣ ಪವಾರ್ ಅಪರಾಧ ಸಾಬೀತು ಆಗಿದೆ.