‘ಇನ್ನೊಂದ್ ಮಾತ್ರಪ್ಪ... ದೇವರಾಣೆ, ಟಿಕೆಟ್ ನನ್ ಕೈಲಿಲ್ಲ. ಎಲ್ವೂ ನಮ್ ಅಮಿತ್ ಶಾ ಕೈಲಿವೆ. ನಾ ಸುಮ್ನೆ ನಿಮ್ಮನ್ ಹುರಿದುಂಬಿಸೋಕೆ ಕೇಳ್ದೆ. ನೀವೇನಾದ್ರೂ ಬಯೊಡೇಟಾ ಕೊಟ್ರೆ ಒಂದ್ ಸಾರಿ ನೋಡಿ, ‘ಚಲೋ ಐತಿ. ಮಾಡೋಣ’ ಅಂತೀನಿ ಅಷ್ಟೇ. ಇದ್ನೇ ನಂಬ್ಕೋಬ್ಯಾಡ್ರೀ...’ ಎನ್ನುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಪೆಚ್ಚು ಮೋರೆ ಹಾಕಿದ್ರೆ, ಕಾರ್ಯಕರ್ತರು, ಪದಾಧಿಕಾರಿಗಳು ಶಿಳ್ಳೆ ಹೊಡೆದರು.