ಗುರುಮಠಕಲ್: ಹತ್ತಿರದ ದಭ್ ದಭಿ ಜಲಪಾತದ ನೀರಿನಲ್ಲಿ ಶುಕ್ರವಾರ ನಾಪತ್ತೆಯಾಗಿದ್ದ ಯುವಕ ಮೃತಪಟ್ಟಿದ್ದು, ಶವವನ್ನು ಅಗ್ನಿಶಾಮಕದಳ ಸಿಬ್ಬಂದಿ ಶನಿವಾರ ಹೊರತೆಗೆದಿದ್ದಾರೆ.
ರಾಜಸ್ಥಾನ ಮೂಲದ ಭಾಯರಾಮ್ (23) ಯಾದಗಿರಿ ತಾಲ್ಲೂಕಿನ ಸೈದಾಪುರ ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರೊಡನೆ ಜಲಪಾತ ನೋಡಲುಶುಕ್ರವಾರ ಬಂದಿದ್ದರು. ಆಟವಾಡಲು ಇಳಿದಾಗ ನೀರಿನಲ್ಲಿ ನಾಪತ್ತೆಯಾಗಿದ್ದರು.