ಕೂಲಿ ಮಾಡಿಕೊಂಡು ಜೀವನ ಸಾಗಿರುತ್ತಿರುವ ನಾಗರಾಜ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಮಾಹಿತಿಯನ್ನುಸ್ಥಳೀಯ ಪತ್ರಕರ್ತರೊಬ್ಬರು ನಟ ಸೋನು ಸೂದ್ ಅವರ ಗಮನಕ್ಕೆ ತಂದರು. ಅವರ ತಂಡದ ಮುಖ್ಯಸ್ಥ ಗೋವಿಂದ ಅಗ್ರವಾಲ್ ಅವರು ನಾಗರಾಜ ಅವರಿಗೆ ಕರೆ ಮಾಡಿ, ‘ಆತಂಕ ಪಡಬೇಡಿ. ನಿಮಗೆ ಎರಡು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ನೀಡುವ ಜೊತೆಗೆ ಮಕ್ಕಳ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುತ್ತೇವೆ’ ಎಂದು ಹೇಳಿದ್ದಾರೆ.