<p><strong>ಗುರುಮಠಕಲ್:</strong> ‘ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಅವುಗಳಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೊಡನೆ ಮುನ್ನಡೆಯುವೆವು’ ಎಂದು ಮಾಜಿ ಸಂಸದ ಡಾ.ಉಮೇಶ ಜಾದವ ಹೇಳಿದರು.</p>.<p>ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಮತ್ತು ರೈತರ ಜತೆಗೆ ನಮ್ಮ ಪಕ್ಷ ನಿಲ್ಲಲಿದೆ. ಬಿಜೆಪಿ-ಜೆಡಿಎಸ್ ಒಗ್ಗೂಡಿ ರೈತರ ಪರ ಧ್ವನಿಯಾಗಲಿದ್ದೇವೆ’ ಎಂದರು.</p>.<p>‘ನನ್ನ ಅವಧಿಯಲ್ಲಿ ಗುರುಮಠಕಲ್ ಜನತೆಯ ಗುಳೆ ತಪ್ಪಿಸಿ, ಇಲ್ಲೇ ಜೀವನೋಪಾಯಕ್ಕೆ ಅನುಕೂಲ ಮಾಡಲು ಕಲಬುರಗಿಗೆ ಟೆಕ್ಸ್ಟೈಲ್ ಪಾರ್ಕ್ ಮಂಜೂರು ಮಾಡಲಾಗಿತ್ತು. ರಾಜ್ಯ ಸರ್ಕಾರದ ನಿಧಾನ ಧೋರಣೆಯಿಂದ ಅದು ನೆನೆಗುದಿಗೆ ಬಿದ್ದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>‘ಇಲ್ಲಿನ ಶಾಸಕ ಶರಣಗೌಡ ಕಂದಕೂರ ಅವರು ಕಡೇಚೂರು ಕೈಗಾರಿಕಾ ಕ್ಷೇತ್ರದ ಮಾಲಿನ್ಯ ಮತ್ತು ಜನರಿಗಾಗುತ್ತಿರುವ ತೊಂದರೆ ಕುರಿತು ಧ್ವನಿಯೆತ್ತಿದ್ದಾರೆ. ಬಿಜೆಪಿ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ಶಾಸಕರು ಕ್ರಿಯಾಶೀಲರಾಗಿದ್ದಾರೆ’ ಎಂದರು.</p>.<p>‘ಶಾಸಕ ಕಂದಕೂರ ಅವರ ವಿರೋಧ ಪಕ್ಷವೂ ಅಸಮರ್ಥವಾಗಿದೆ ಎನ್ನುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಸರ್ಕಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ 'ಸಿಎಂ ಚೇರ್' ಗುದ್ದಾಟದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದು ಸತ್ಯ’ ಎಂದು ಹೇಳಿದರು.</p>.<p>‘ಪಕ್ಷ ಸಂಘಟನೆಗೆ ಕೆಳ ಹಂತದಿಂದಲೂ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯುವಲ್ಲಿ ಸಮಸ್ಯೆಯಾಗುತ್ತಿದ್ದರೆ ನನಗೆ ಸಂಪರ್ಕಿಸಲಿ. ನಾನು ವೈಯಕ್ತಿಕ ಮುತುವರ್ಜಿವಹಿಸುವೆ. ನಮ್ಮ ಜನ ಇನ್ನೂ ಜಾಗೃತರಾಗುವ ಅವಶ್ಯಕತೆಯಿದೆ’ ಎಂದರು.</p>.<p>‘ನಮ್ಮನ್ನು ಆಯ್ಕೆ ಮಾಡಿದ ಜನ ನಮ್ಮ ಕಾಲರ್ ಹಿಡಿದು ಪ್ರಶ್ನಿಸುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ, ಜನತೆಗೆ ಜಾಗೃತಿಯ ಕೊರತೆಯಿದೆ. ಜನ ಜಾಗೃತಿಯಿಂದ ಎಲ್ಲವೂ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ನಾನು ಮುಂದೆ ಲೋಕಸಭಾ ಅಭ್ಯರ್ಥಿಯಾಗುವನೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡುವೆ’ ಎಂದರು.</p>.<p>‘ಹಲವು ವರ್ಷಗಳಿಂದ ಡಿ.ಕೆ.ಶಿವಕುಮಾರ ಅವರನ್ನು ನೋಡಿರುವೆ. ಅವರು ಬಿಜೆಪಿ ಬರುವುದಿಲ್ಲ. ಅವರು ಬಂದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳದು. ನಮ್ಮ ತಾತ, ತಂದೆ ಮತ್ತು ನಾನೂ ಕಾಂಗ್ರೆಸ್ನಲ್ಲಿದ್ದೆವು. ಆದರೆ, ಅಂದಿನ ಕಾಂಗ್ರೆಸ್ ಇಂದಿನ ಕಾಂಗ್ರೆಸ್ ಒಂದಲ್ಲ’ ಎಂದರು.</p>.<p>‘ಶಿಕ್ಷಕರ ನೇಮಕಾತಿಯಿಲ್ಲದೆ ಶಾಲೆಗಳಲ್ಲಿ ಶಿಕ್ಷಕರಿಲ್ಲ. ವೈದ್ಯರ ನೇಮಕಾತಿಯಿಲ್ಲದೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಕುಂಠಿತವಾಗಿವೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮರೆತುಹೋದಂತಿದೆ’ ಎಂದು ವ್ಯಂಗ್ಯವಾಡಿದರು.</p>.<p>ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಮುಖಂಡರಾದ ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ವೆಂಕಟರೆಡ್ಡಿ ಮೋತಕಪಲ್ಲಿ, ರಾಮುಲು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.</p>.<div><blockquote>ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ನಡೆದ ಅಕ್ರಮದ ಕುರಿತು ದಾಖಲೆಗಳಿವೆ. ವೋಟ್ ಚೋರಿಯಿಂದಲೇ ಖರ್ಗೆಯವರ ಸುಧೀರ್ಘ ಜಯಸಿದ್ದು </blockquote><span class="attribution">ಡಾ.ಉಮೇಶ ಜಾದವ್ ಮಾಜಿ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್:</strong> ‘ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಅವುಗಳಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೊಡನೆ ಮುನ್ನಡೆಯುವೆವು’ ಎಂದು ಮಾಜಿ ಸಂಸದ ಡಾ.ಉಮೇಶ ಜಾದವ ಹೇಳಿದರು.</p>.<p>ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಮತ್ತು ರೈತರ ಜತೆಗೆ ನಮ್ಮ ಪಕ್ಷ ನಿಲ್ಲಲಿದೆ. ಬಿಜೆಪಿ-ಜೆಡಿಎಸ್ ಒಗ್ಗೂಡಿ ರೈತರ ಪರ ಧ್ವನಿಯಾಗಲಿದ್ದೇವೆ’ ಎಂದರು.</p>.<p>‘ನನ್ನ ಅವಧಿಯಲ್ಲಿ ಗುರುಮಠಕಲ್ ಜನತೆಯ ಗುಳೆ ತಪ್ಪಿಸಿ, ಇಲ್ಲೇ ಜೀವನೋಪಾಯಕ್ಕೆ ಅನುಕೂಲ ಮಾಡಲು ಕಲಬುರಗಿಗೆ ಟೆಕ್ಸ್ಟೈಲ್ ಪಾರ್ಕ್ ಮಂಜೂರು ಮಾಡಲಾಗಿತ್ತು. ರಾಜ್ಯ ಸರ್ಕಾರದ ನಿಧಾನ ಧೋರಣೆಯಿಂದ ಅದು ನೆನೆಗುದಿಗೆ ಬಿದ್ದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>‘ಇಲ್ಲಿನ ಶಾಸಕ ಶರಣಗೌಡ ಕಂದಕೂರ ಅವರು ಕಡೇಚೂರು ಕೈಗಾರಿಕಾ ಕ್ಷೇತ್ರದ ಮಾಲಿನ್ಯ ಮತ್ತು ಜನರಿಗಾಗುತ್ತಿರುವ ತೊಂದರೆ ಕುರಿತು ಧ್ವನಿಯೆತ್ತಿದ್ದಾರೆ. ಬಿಜೆಪಿ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ಶಾಸಕರು ಕ್ರಿಯಾಶೀಲರಾಗಿದ್ದಾರೆ’ ಎಂದರು.</p>.<p>‘ಶಾಸಕ ಕಂದಕೂರ ಅವರ ವಿರೋಧ ಪಕ್ಷವೂ ಅಸಮರ್ಥವಾಗಿದೆ ಎನ್ನುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಸರ್ಕಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ 'ಸಿಎಂ ಚೇರ್' ಗುದ್ದಾಟದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದು ಸತ್ಯ’ ಎಂದು ಹೇಳಿದರು.</p>.<p>‘ಪಕ್ಷ ಸಂಘಟನೆಗೆ ಕೆಳ ಹಂತದಿಂದಲೂ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯುವಲ್ಲಿ ಸಮಸ್ಯೆಯಾಗುತ್ತಿದ್ದರೆ ನನಗೆ ಸಂಪರ್ಕಿಸಲಿ. ನಾನು ವೈಯಕ್ತಿಕ ಮುತುವರ್ಜಿವಹಿಸುವೆ. ನಮ್ಮ ಜನ ಇನ್ನೂ ಜಾಗೃತರಾಗುವ ಅವಶ್ಯಕತೆಯಿದೆ’ ಎಂದರು.</p>.<p>‘ನಮ್ಮನ್ನು ಆಯ್ಕೆ ಮಾಡಿದ ಜನ ನಮ್ಮ ಕಾಲರ್ ಹಿಡಿದು ಪ್ರಶ್ನಿಸುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ, ಜನತೆಗೆ ಜಾಗೃತಿಯ ಕೊರತೆಯಿದೆ. ಜನ ಜಾಗೃತಿಯಿಂದ ಎಲ್ಲವೂ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ನಾನು ಮುಂದೆ ಲೋಕಸಭಾ ಅಭ್ಯರ್ಥಿಯಾಗುವನೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡುವೆ’ ಎಂದರು.</p>.<p>‘ಹಲವು ವರ್ಷಗಳಿಂದ ಡಿ.ಕೆ.ಶಿವಕುಮಾರ ಅವರನ್ನು ನೋಡಿರುವೆ. ಅವರು ಬಿಜೆಪಿ ಬರುವುದಿಲ್ಲ. ಅವರು ಬಂದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳದು. ನಮ್ಮ ತಾತ, ತಂದೆ ಮತ್ತು ನಾನೂ ಕಾಂಗ್ರೆಸ್ನಲ್ಲಿದ್ದೆವು. ಆದರೆ, ಅಂದಿನ ಕಾಂಗ್ರೆಸ್ ಇಂದಿನ ಕಾಂಗ್ರೆಸ್ ಒಂದಲ್ಲ’ ಎಂದರು.</p>.<p>‘ಶಿಕ್ಷಕರ ನೇಮಕಾತಿಯಿಲ್ಲದೆ ಶಾಲೆಗಳಲ್ಲಿ ಶಿಕ್ಷಕರಿಲ್ಲ. ವೈದ್ಯರ ನೇಮಕಾತಿಯಿಲ್ಲದೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಕುಂಠಿತವಾಗಿವೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮರೆತುಹೋದಂತಿದೆ’ ಎಂದು ವ್ಯಂಗ್ಯವಾಡಿದರು.</p>.<p>ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಮುಖಂಡರಾದ ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ವೆಂಕಟರೆಡ್ಡಿ ಮೋತಕಪಲ್ಲಿ, ರಾಮುಲು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.</p>.<div><blockquote>ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ನಡೆದ ಅಕ್ರಮದ ಕುರಿತು ದಾಖಲೆಗಳಿವೆ. ವೋಟ್ ಚೋರಿಯಿಂದಲೇ ಖರ್ಗೆಯವರ ಸುಧೀರ್ಘ ಜಯಸಿದ್ದು </blockquote><span class="attribution">ಡಾ.ಉಮೇಶ ಜಾದವ್ ಮಾಜಿ ಸಂಸದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>