<p><strong>ಶಹಾಪುರ:</strong> ‘ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಬದಿಗೊತ್ತಿ ಕಲಿಕಾ ಹಂತದಲ್ಲಿ ಹಿಂಜರಿಕೆಯನ್ನು ತೊಡೆದು ಹಾಕಿ. ವಿದ್ಯೆ ಎನ್ನುವುದು ನಿರಂತರವಾಗಿ ಅಧ್ಯಯನ ಮಾಡುವ ಒಂದು ಸಾಧನವಾಗಿದೆ. ದಿನಾಲು ಕನಿಷ್ಠ 7 ರಿಂದ 8 ತಾಸು ಇಷ್ಟಪಟ್ಟು ಅಭ್ಯಾಸ ಮಾಡಬೇಕು. ಸೋಲಿಗೆ ಎಂದಿಗೂ ಧೃತಿಗೆಡಬಾರದು’ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಗರದ ಬಸವರಾಜ ಜವಳಿ ತಿಳಿಸಿದರು.</p>.<p>ಇಲ್ಲಿನ ಕಸಾಪ ಭವನದಲ್ಲಿ ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಬಸವರಾಜ ಜವಳಿ ಅವರಿಗೆ ಕಸಾಪ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಪುಸ್ತಕ ಜ್ಞಾನವನ್ನು ನೀಡುತ್ತದೆ ನಿಜ ಅದರ ಜತೆಯಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿವು ಇರಬೇಕು. ಜ್ಞಾನಕ್ಕೆ ಪೂರಕವಾದ ದಿನ ಪತ್ರಿಕೆ, ನಿಯತಕಾಲಿಕೆಗಳನ್ನು ದಿನಾಲು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮಾಹಿತಿ ಸಂಗ್ರಹದಿಂದ ಜ್ಞಾನ ಹೆಚ್ಚುತ್ತದೆ. ಜ್ಞಾನ ಹೆಚ್ಚಿದರೆ ಆತ್ಮವಿಶ್ವಾಸ ಹೆಮ್ಮರವಾಗಿ ಬೆಳೆಯುತ್ತದೆ’ ಎಂದರು.</p>.<p>‘ಯಾವುದೇ ವಿಷಯವನ್ನು ಕಷ್ಟುಪಟ್ಟು ಓದುವುದು ಬೇಡ ಇಷ್ಟಪಟ್ಟು ಓದಿದರೆ ಸಾಕು. ಉನ್ನತ ಸ್ಥಾನ ದಕ್ಕಬೇಕಾದರೆ ಕಠಿಣ ಪರಿಶ್ರಮ ಇರಬೇಕು ಎಂಬುವುದು ಯಾರು ಮರೆಯಬಾರದು. ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ತುಂಬಾ ಮಹತ್ವದ್ದಾಗಿದೆ’ ಎಂದು ಹೇಳಿದರು.</p>.<p>ಕಸಾಪ ತಾಲ್ಲೂಕು ಅಧ್ಯಕ್ಷ ರವೀಂದ್ರನಾಥ ಹೊಸಮನಿ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ಸಾಹಿತಿ ಸಿದ್ದರಾಮ ಹೊನ್ಕಲ್, ಶಿವಣ್ಣ ಇಜೇರಿ, ಕಸಾಪ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಸುರೇಶ ಅರುಣಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಬಸವರಾಜ ಜವಳಿಯನ್ನು ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ:</strong> ‘ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆಯನ್ನು ಬದಿಗೊತ್ತಿ ಕಲಿಕಾ ಹಂತದಲ್ಲಿ ಹಿಂಜರಿಕೆಯನ್ನು ತೊಡೆದು ಹಾಕಿ. ವಿದ್ಯೆ ಎನ್ನುವುದು ನಿರಂತರವಾಗಿ ಅಧ್ಯಯನ ಮಾಡುವ ಒಂದು ಸಾಧನವಾಗಿದೆ. ದಿನಾಲು ಕನಿಷ್ಠ 7 ರಿಂದ 8 ತಾಸು ಇಷ್ಟಪಟ್ಟು ಅಭ್ಯಾಸ ಮಾಡಬೇಕು. ಸೋಲಿಗೆ ಎಂದಿಗೂ ಧೃತಿಗೆಡಬಾರದು’ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಗರದ ಬಸವರಾಜ ಜವಳಿ ತಿಳಿಸಿದರು.</p>.<p>ಇಲ್ಲಿನ ಕಸಾಪ ಭವನದಲ್ಲಿ ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಬಸವರಾಜ ಜವಳಿ ಅವರಿಗೆ ಕಸಾಪ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಪುಸ್ತಕ ಜ್ಞಾನವನ್ನು ನೀಡುತ್ತದೆ ನಿಜ ಅದರ ಜತೆಯಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿವು ಇರಬೇಕು. ಜ್ಞಾನಕ್ಕೆ ಪೂರಕವಾದ ದಿನ ಪತ್ರಿಕೆ, ನಿಯತಕಾಲಿಕೆಗಳನ್ನು ದಿನಾಲು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಮಾಹಿತಿ ಸಂಗ್ರಹದಿಂದ ಜ್ಞಾನ ಹೆಚ್ಚುತ್ತದೆ. ಜ್ಞಾನ ಹೆಚ್ಚಿದರೆ ಆತ್ಮವಿಶ್ವಾಸ ಹೆಮ್ಮರವಾಗಿ ಬೆಳೆಯುತ್ತದೆ’ ಎಂದರು.</p>.<p>‘ಯಾವುದೇ ವಿಷಯವನ್ನು ಕಷ್ಟುಪಟ್ಟು ಓದುವುದು ಬೇಡ ಇಷ್ಟಪಟ್ಟು ಓದಿದರೆ ಸಾಕು. ಉನ್ನತ ಸ್ಥಾನ ದಕ್ಕಬೇಕಾದರೆ ಕಠಿಣ ಪರಿಶ್ರಮ ಇರಬೇಕು ಎಂಬುವುದು ಯಾರು ಮರೆಯಬಾರದು. ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ತುಂಬಾ ಮಹತ್ವದ್ದಾಗಿದೆ’ ಎಂದು ಹೇಳಿದರು.</p>.<p>ಕಸಾಪ ತಾಲ್ಲೂಕು ಅಧ್ಯಕ್ಷ ರವೀಂದ್ರನಾಥ ಹೊಸಮನಿ, ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ, ಸಾಹಿತಿ ಸಿದ್ದರಾಮ ಹೊನ್ಕಲ್, ಶಿವಣ್ಣ ಇಜೇರಿ, ಕಸಾಪ ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಸುರೇಶ ಅರುಣಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಬಸವರಾಜ ಜವಳಿಯನ್ನು ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>