<p><strong>ವಡಗೇರಾ:</strong> ವಡಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಕೋನಹಳ್ಳಿ ಗ್ರಾಮದ ಹನುಮಾನ ದೇವಾಲಯದ ಹತ್ತಿರ ಕುಡಿಯುವ ನೀರಿನ ಪೈಪ್ ಹಾಳಾಗಿ ತಿಂಗಳುಗಳಾಗಿವೆ. ಹೀಗಾಗಿ ಪೈಪ್ ದುರಸ್ತಿಯನ್ನು ಕೂಟಲೇ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ಪೈಪ್ ಒಡೆದು ಹೋದಕಾರಣ ಮನೆಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನಲ್ಲಿ ಚರಂಡಿಯ ಹೊಲಸು ನೀರು ಸೇರಿಕೊಳ್ಳುತ್ತಿದೆ. ಇದರಿಂದ ರೋಗ ರುಜಿನಗಳ ಆತಂಕ ಉಂಟಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<p>ಒಡೆದ ಪೈಪ್ನಿಂದ ಬರುವ ನೀರು ರಸ್ತೆ ಅತಿಕ್ರಮಿಸಿಕೊಂಡು ಗಲೀಜು ಸೃಷ್ಟಿಸುತ್ತಿದೆ. ಈ ಹೊಲಸು ನೀರಿನಲ್ಲಿಯೆ ಭಕ್ತರು ಹನುಮಾನ ದೇವಾಯಕ್ಕೆ ಬರುವುದು ಅನಿವಾರ್ಯವಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನು ಹಿಡದುಕೊಂಡು ಬೋರವೆಲ್ ಗಳಿಗೆ ಅಲೆಯುವದು ಸಾಮಾನ್ಯವಾಗಿದೆ’ ಎಂದು ತಮ್ಮ ಅಳಲು ತೊಡಿಕೊಂಡರು.</p>.<p>ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಪೈಪ್ ದುರಸ್ತಿ ಮಾಡಬೇಕು. ಒಂದು ವೇಳೆ ಉದಾಸಿನತೆ ಮುಂದುವರೆಸಿದರೆ ಗ್ರಾಮ ಪಂಚಾಯಿತಿ ಎದರುರು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ವಡಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಕೋನಹಳ್ಳಿ ಗ್ರಾಮದ ಹನುಮಾನ ದೇವಾಲಯದ ಹತ್ತಿರ ಕುಡಿಯುವ ನೀರಿನ ಪೈಪ್ ಹಾಳಾಗಿ ತಿಂಗಳುಗಳಾಗಿವೆ. ಹೀಗಾಗಿ ಪೈಪ್ ದುರಸ್ತಿಯನ್ನು ಕೂಟಲೇ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ಪೈಪ್ ಒಡೆದು ಹೋದಕಾರಣ ಮನೆಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನಲ್ಲಿ ಚರಂಡಿಯ ಹೊಲಸು ನೀರು ಸೇರಿಕೊಳ್ಳುತ್ತಿದೆ. ಇದರಿಂದ ರೋಗ ರುಜಿನಗಳ ಆತಂಕ ಉಂಟಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<p>ಒಡೆದ ಪೈಪ್ನಿಂದ ಬರುವ ನೀರು ರಸ್ತೆ ಅತಿಕ್ರಮಿಸಿಕೊಂಡು ಗಲೀಜು ಸೃಷ್ಟಿಸುತ್ತಿದೆ. ಈ ಹೊಲಸು ನೀರಿನಲ್ಲಿಯೆ ಭಕ್ತರು ಹನುಮಾನ ದೇವಾಯಕ್ಕೆ ಬರುವುದು ಅನಿವಾರ್ಯವಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನು ಹಿಡದುಕೊಂಡು ಬೋರವೆಲ್ ಗಳಿಗೆ ಅಲೆಯುವದು ಸಾಮಾನ್ಯವಾಗಿದೆ’ ಎಂದು ತಮ್ಮ ಅಳಲು ತೊಡಿಕೊಂಡರು.</p>.<p>ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಪೈಪ್ ದುರಸ್ತಿ ಮಾಡಬೇಕು. ಒಂದು ವೇಳೆ ಉದಾಸಿನತೆ ಮುಂದುವರೆಸಿದರೆ ಗ್ರಾಮ ಪಂಚಾಯಿತಿ ಎದರುರು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>