ವಿವಿಧ ಹಣ್ಣು, ಹೋಳಿಗೆ,ಹಪ್ಪಳ, ಸಂಡಿಗೆ, ಬದನೆಕಾಯಿ, ಕೋಸಂಬರಿ ಪಲ್ಯೆನೈವೇದ್ಯವಾಗಿ ಇಡಲಾಗಿತ್ತು.ಲಕ್ಷ್ಮಿ ದೇವಿಯ ಬೆಳ್ಳಿಯ ಗಟ್ಟಿ ಇಟ್ಟು ಪೂಜೆ ಸಲ್ಲಿಸಲಾಯಿತು.
ಕೊರೊನಾ ಕಾರಣದಿಂದ ಬೇರೆ ಊರಿನ ಬಂಧು ಬಳಗವನ್ನು ಆಹ್ವಾನಿಸಿರಿರಲಿಲ್ಲ. ಅಕ್ಕಪಕ್ಕದ ಮನೆಯವರು ಸೇರಿ ವ್ರತಾಚರಣೆ ಮಾಡಿದ್ದಾರೆ. ಪೂಜೆ ವೇಳೆ ಕುಟುಂದವರು ಸೇರಿ ದೇವಿಯ ಸ್ತೋತ್ರ ಪಠಿಸಿದರು. ಕೆಲವರು ಐದು ಮಂದಿ ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸಿಉಡಿಯಕ್ಕಿ ತುಂಬಿಸಿ ಸಂಭ್ರಮಿಸಿದರು. ನಂತರ ಉಪವಾಸ ವ್ರತ ಬಿಟ್ಟು, ಸಿಹಿಯೂಟ ಮಾಡಿ ಮನೆಗೆ ತೆರಳಿದರು.
ಬೆಳ್ಳಿ, ಬಂಗಾರದ ವಸ್ತುಗಳಿಂದ ದೇವಿಗೆ ಅಲಂಕಾರ ಮಾಡಲಾಗಿತ್ತು. ಚಿಕ್ಕಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ತಾಮ್ರದಕೊಡಕ್ಕೆ ನೀರು ಹಾಕಿ ಅದರ ಮೇಲೆ ಕಾಯಿ ಇಟ್ಟು ವರ ಮಹಾಲಕ್ಷ್ಮಿಗೆ ಹೂ, ಕುಂಕುಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.
‘ವರಮಹಾಲಕ್ಷ್ಮಿ ದೇವಿ ವರಗಳನ್ನು ದಯಪಾಲಿಸುವುದರಿಂದಮಹಿಳೆಯರು ತಮ್ಮಇಷ್ಟಾರ್ಥಿ ಸಿದ್ಧಿಗಾಗಿ ಬೇಡಿಕೊಳ್ಳುವುದು ಸಾಮಾನ್ಯ.ವರಮಹಾಲಕ್ಷ್ಮಿ ಹಬ್ಬದಂದು ವ್ರತ ಕೈಗೊಳ್ಳುವುದು ಅಷ್ಟ ಲಕ್ಷ್ಮಿಯರ ವ್ರತಕ್ಕೆ ಸಮ ಎಂಬ ನಂಬಿಕೆ ಈ ಮೊದಲಿನಿಂದಲೂ ಇದೆ’ ಎಂದು ಪರಮೇಶ ರೆಡ್ಡಿ ತಿಳಿಸಿದರು.