ಯಾದಗಿರಿ: ತಾಲ್ಲೂಕಿನ ಹಳಿಗೇರಾ ಗ್ರಾಮದ ಯುವಕ ದೊಡ್ಡಪ್ಪ ನಾಯಕ ಅವರು ಆಸ್ಟ್ರೇಲಿಯಾದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಆರ್ಥಿಕ ಸಂಕಷ್ಟ ಎದುರಾಗಿದ್ದು, ಅನಿಶ್ಚಿತತೆ ಕಾಡುತ್ತಿದೆ.
ದೊಡ್ಡಪ್ಪ ತಮ್ಮದೇ ಆದ ಕನಸು ಕಟ್ಟಿಕೊಂಡವರು. ಆದರೆ, ಬಡತನ, ಆರ್ಥಿಕ ಸಂಕಷ್ಟದಿಂದ ಪ್ರತಿಭೆ ಇದ್ದರೂ ಪ್ರದರ್ಶಿಸಲು ಆಗುತ್ತಿಲ್ಲ. ಅಸಹಾಯಕರಾಗಿ ತಮ್ಮಲ್ಲಿನ ಪ್ರತಿಭೆ ಮರೆ ಮಾಚಿ ಬಾಳುವ ಪರಿಸ್ಥಿತಿ ಇದೆ. ಒದಗಿದೆ. ಅವರದ್ದು ಕೃಷಿ ಕುಟುಂಬ. ಚಿಕ್ಕಂದಿನಿಂದ ಓಟದಲ್ಲಿ ಆಸಕ್ತಿ ಉಳ್ಳವರು.