ಅಲ್ಲದೆ ಕೆರೆಯಲ್ಲಿ ಹೆಚ್ಚು ದಿನದಿಂದ ನೀರು ಸಂಗ್ರಹವಾಗಿದ್ದರಿಂದ ದುರ್ವಾಸನೆ ಬರುತ್ತಲಿದೆ. ನೀರಿನಲ್ಲಿ ಬ್ಲಿಚಿಂಗ್ ಪೌಡರ್ ಹಾಕುತ್ತಿಲ್ಲ. ನೀರು ಶುದ್ಧಿಕರಿಸುವ ಘಟಕ ಕೆಟ್ಟು ನಿಂತು ಹಲವು ವರ್ಷ ಆಗಿವೆ. ಈಗ ಮಳೆಗಾಲ ಆರಂಭವಾಗಿದೆ. ಇಂತಹ ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ನಗರದ ನಿವಾಸಿಗಳು ತಿಳಿಸಿದರು.