ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆ ಉತ್ತಮ ಮಳೆಯಾದಾಗ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೆಚ್ಚುವರಿ ನೀರು ನದಿಗೆ ಹರಿಸುವ ಬದಲು ಕಾಲುವೆಗೆ ಹರಿಸಿದ್ದರೆ ಅನುಕೂಲವಾಗುತ್ತಿತ್ತು. ಈಗಾಗಲೇ ಗದ್ದೆಯಲ್ಲಿ ಸಿದ್ಧಪಡಿಸಿದ ಸಸಿಯು 25ರಿಂದ30 ದಿನ ಆಗಿವೆ. ಹಳ್ಳ, ಕೆರೆ, ಕೊಳವೆಬಾವಿಯ ನೀರಿನ ಲಭ್ಯತೆ ಇರುವ ರೈತರು ಮತ್ತು ನದಿ ದಂಡೆಯ ರೈತರು ಭತ್ತ ನಾಟಿ ಮಾಡಿದ್ದಾರೆ.