<p><strong>ಯಾದಗಿರಿ</strong>: ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮ ಸಮೀಪದ ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡೂ ಬದಿಯಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. </p>.<p>ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡು ಬದಿಯ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಹರಸಾಹಸ ಮಾಡುವಂತಾಗಿದೆ. ಯಾದಗಿರಿ, ವಡಗೇರಾ, ಗುರುಮಠಕಲ್, ಸೈದಾಪುರದ ಜನರು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಹೇಳಿದ್ದಾರೆ.</p>.<p>ಭೀಮಾ ನದಿ ಪ್ರವಾಹದ ವೇಳೆ ಅಧಿಕಾರಿಗಳು ಬ್ಯಾರೇಜ್ನ ಗೇಟ್ಗಳನ್ನು ತೆರೆಯಲಿಲ್ಲ. ಇದರಿಂದ ಉಕ್ಕೇರಿದ ಪ್ರವಾಹವು ಬ್ಯಾರೇಜ್ನ ಎರಡೂ ಬದಿಯಲ್ಲಿ ಒಂದು ವಾರಕ್ಕೂ ಹೆಚ್ಚು ನೀರು ಹರಿಯಿತು. ಇದರಿಂದ ರಸ್ತೆಯು ಕೊಚ್ಚಿಕೊಂಡು ಹೋಗಿದ್ದು, ಪ್ರಯಾಣಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದಿದ್ದಾರೆ. </p>.<p>ನೆರೆ ಹಾವಳಿ ಕಡಿಮೆಯಾಗಿ ಹಲವರು ವಾರಗಳು ಕಳೆದಿವೆ. ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಕಂದಳ್ಳಿ, ವಡಗೇರಿ, ಬಿಳ್ಳಾರ, ಹಿರೆನೂರ, ಮಾಚನೂರು, ಬೆಂಡೆಬೆಂಬಳ್ಳಿ, ಕೋನಳ್ಳಿ, ತುಮಕೂರು, ಗೋನಾಳ ಸೇರಿದಂತೆ ಸುಮಾರು 30ಕ್ಕೂ ಗ್ರಾಮಗಳ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.</p>.<p>ರಸ್ತೆ ಸಂಪರ್ಕ ಕಡಿತವಾಗುವ ಮೊದಲು 12 ಕಿ.ಮೀ. ಕ್ರಮಿಸಿ ಸೈದಾಪುರಕ್ಕೆ ತಲುಪುತ್ತಿದ್ದರು. ಈಗ 60 ಕಿ.ಮೀ. ಸುತ್ತಿ ಬಳಸಿ ಯಾದಗಿರಿಗೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ವರ್ತಕರು, ಉದ್ಯೋಗಸ್ಥರು, ಆಸ್ಪತ್ರೆ ತೆರಳುವ ರೋಗಿಗಳು ಪರದಾಡುವಂತೆ ಆಗಿದೆ ಎಂದಿದ್ದಾರೆ.</p>.<p>ಬ್ಯಾರೇಜ್ನ ಎರಡು ಬದಿಯಲ್ಲಿ ಹಾಳಾಗಿರುವ ರಸ್ತೆಯನ್ನು ತಕ್ಷಣವೇ ದುರಸ್ತಿ ಮಾಡಬೇಕು. ವಿಳಂಬ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.</p>.<p>ಕಂದಳ್ಳಿ ಗ್ರಾಮದ ಮುಖಂಡರಾದ ಬಸವಂತರಾಯ ಗೌಡ, ವೆಂಕಟರೆಡ್ಡಿ ಮಾಲಿ ಪಾಟೀಲ, ಶಂಕರ್ ಸೋನರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಗುತ್ತೇದಾರ, ಸಿ. ಮಲ್ಲು ಕೋಲಿವಾಡ, ವಿಕಾಸ್ ಚವ್ಹಾಣ, ಸಾಬರೆಡ್ಡಿ ನಾಯಕ, ಸುನಿಲ್ ಕಡೇಚೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮ ಸಮೀಪದ ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡೂ ಬದಿಯಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. </p>.<p>ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡು ಬದಿಯ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಹರಸಾಹಸ ಮಾಡುವಂತಾಗಿದೆ. ಯಾದಗಿರಿ, ವಡಗೇರಾ, ಗುರುಮಠಕಲ್, ಸೈದಾಪುರದ ಜನರು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಹೇಳಿದ್ದಾರೆ.</p>.<p>ಭೀಮಾ ನದಿ ಪ್ರವಾಹದ ವೇಳೆ ಅಧಿಕಾರಿಗಳು ಬ್ಯಾರೇಜ್ನ ಗೇಟ್ಗಳನ್ನು ತೆರೆಯಲಿಲ್ಲ. ಇದರಿಂದ ಉಕ್ಕೇರಿದ ಪ್ರವಾಹವು ಬ್ಯಾರೇಜ್ನ ಎರಡೂ ಬದಿಯಲ್ಲಿ ಒಂದು ವಾರಕ್ಕೂ ಹೆಚ್ಚು ನೀರು ಹರಿಯಿತು. ಇದರಿಂದ ರಸ್ತೆಯು ಕೊಚ್ಚಿಕೊಂಡು ಹೋಗಿದ್ದು, ಪ್ರಯಾಣಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದಿದ್ದಾರೆ. </p>.<p>ನೆರೆ ಹಾವಳಿ ಕಡಿಮೆಯಾಗಿ ಹಲವರು ವಾರಗಳು ಕಳೆದಿವೆ. ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಕಂದಳ್ಳಿ, ವಡಗೇರಿ, ಬಿಳ್ಳಾರ, ಹಿರೆನೂರ, ಮಾಚನೂರು, ಬೆಂಡೆಬೆಂಬಳ್ಳಿ, ಕೋನಳ್ಳಿ, ತುಮಕೂರು, ಗೋನಾಳ ಸೇರಿದಂತೆ ಸುಮಾರು 30ಕ್ಕೂ ಗ್ರಾಮಗಳ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.</p>.<p>ರಸ್ತೆ ಸಂಪರ್ಕ ಕಡಿತವಾಗುವ ಮೊದಲು 12 ಕಿ.ಮೀ. ಕ್ರಮಿಸಿ ಸೈದಾಪುರಕ್ಕೆ ತಲುಪುತ್ತಿದ್ದರು. ಈಗ 60 ಕಿ.ಮೀ. ಸುತ್ತಿ ಬಳಸಿ ಯಾದಗಿರಿಗೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ವರ್ತಕರು, ಉದ್ಯೋಗಸ್ಥರು, ಆಸ್ಪತ್ರೆ ತೆರಳುವ ರೋಗಿಗಳು ಪರದಾಡುವಂತೆ ಆಗಿದೆ ಎಂದಿದ್ದಾರೆ.</p>.<p>ಬ್ಯಾರೇಜ್ನ ಎರಡು ಬದಿಯಲ್ಲಿ ಹಾಳಾಗಿರುವ ರಸ್ತೆಯನ್ನು ತಕ್ಷಣವೇ ದುರಸ್ತಿ ಮಾಡಬೇಕು. ವಿಳಂಬ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.</p>.<p>ಕಂದಳ್ಳಿ ಗ್ರಾಮದ ಮುಖಂಡರಾದ ಬಸವಂತರಾಯ ಗೌಡ, ವೆಂಕಟರೆಡ್ಡಿ ಮಾಲಿ ಪಾಟೀಲ, ಶಂಕರ್ ಸೋನರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಗುತ್ತೇದಾರ, ಸಿ. ಮಲ್ಲು ಕೋಲಿವಾಡ, ವಿಕಾಸ್ ಚವ್ಹಾಣ, ಸಾಬರೆಡ್ಡಿ ನಾಯಕ, ಸುನಿಲ್ ಕಡೇಚೂರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>