ಬಿಜೆಪಿ ಕಾರ್ಯಾಲಯ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಅವರು ಬಸವೇಶ್ವರರ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕಾಗಿ, ಅನುಭವ ಮಂಟಪದ ಮೂಲಕ ಬಸವೇಶ್ವರರು ಮಾಡಿದ ಕಾರ್ಯವು ಅನುಕರಣೀಯವಾಗಿದೆ ಎಂದರು.
ನಗರ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಗೋಪಾಲ ದಾಸನಕೇರಿ, ಶಿವರಾಜ ದಾಸನಕೇರಿ, ವೆಂಕಟರೆಡ್ಡಿ ಅಬ್ಬೆತುಮಕೂರು, ಎಸ್.ಪಿ.ನಾಡೇಕರ್, ಸೂಗೂರೇಶ ಪಾಟೀಲ, ಡಾ.ಶರಣರೆಡ್ಡಿ ಕೋಡ್ಲಾ, ಪ್ರದೀಪ ಪದ್ದಾರ, ಮಹೇಂದ್ರಗೌಡ ಅಳ್ಳಳ್ಳಿ, ಮಲ್ಲು ಚಾಪಲ್, ಹಣಮಂತು ವಲ್ಯಾಪುರೆ, ಪ್ರಜ್ವಲ್ ಇದ್ದರು.