<p><strong>ಯಾದಗಿರಿ</strong>: ಕೇಂದ್ರ ಸರ್ಕಾರವು ಈಚೆಗೆ ವಾಣಿಜ್ಯ ಅಡುಗೆ ಅನಿಲ (19 ಕೆ.ಜಿ ಸಿಲಿಂಡರ್) ದರವನ್ನು ₹993 ಹೆಚ್ಚಳ ಮಾಡಿದೆ. ಇದರಿಂದ ಜಿಲ್ಲೆಯ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿ ಅವರ ಜೇಬಿಗೆ ಕತ್ತರಿಯೂ ಬಿದ್ದಿದೆ.</p>.<p>ಸಿಲಿಂಡರ್ ದರ ಏರಿಕೆಯಿಂದ ಉಂಟಾದ ಹೆಚ್ಚುವರಿ ವೆಚ್ಚದಿಂದ ಆಗುವ ನಷ್ಟವನ್ನು ಭರಿಸಿಕೊಳ್ಳಲು ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಸಣ್ಣ ಹೋಟೆಲ್ಗಳು, ರಸ್ತೆ ಬದಿಯ ತಳ್ಳು ಬಂಡಿಯಲ್ಲಿನ ಆಹಾರಪದಾರ್ಥ ವ್ಯಾಪಾರಿಗಳು ಬೆಲೆ ಏರಿಸಬೇಕೆ ಅಥವಾ ಬೇಡವೆ ಎಂಬ ಕವಲು ದಾರಿಯಲ್ಲಿದ್ದಾರೆ.</p>.<p>‘ದರ ಹೆಚ್ಚಳದಿಂದ ಯಾದಗಿರಿಯಲ್ಲಿ ವಾಣಿಜ್ಯ ಸಿಲಿಂಡರ್ ₹3,200ಕ್ಕೆ ತಲುಪಿದೆ. ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿಯಾಗಿ ಆಗುವ ₹993 ಭಾರವನ್ನು ಗ್ರಾಹಕರ ಮೇಲೆ ಹೊರಿಸಬೇಕಾದ ಅನಿವಾರ್ಯತೆ ಇದೆ. ದರ ಏರಿಕೆ ಮಾಡದಿದ್ದರೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಹೋಟೆಲ್ ಉದ್ಯಮವನ್ನು ಅರ್ಧಕ್ಕೆ ತೊರೆಯಬೇಕಾಗುತ್ತದೆ. ಉದ್ಯಮ ತೊರೆದರೆ ಹೋಟೆಲ್ಗಳನ್ನು ನಂಬಿಕೊಂಡ ಅಡುಗೆ ತಯಾರಕರು, ಸ್ವಚ್ಛತಾಗಾರರು, ಸಪ್ಲೇಯರ್ಗಳು ಕಷ್ಟಕ್ಕೆ ಸಿಲುಕುತ್ತಾರೆ’ ಎನ್ನುತ್ತಾರೆ ಹೋಟೆಲ್ ವ್ಯಾಪಾರಿಗಳು.</p>.<p>‘ಯುದ್ಧದಿಂದಾಗಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಕೊರತೆ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ. ಕೇಳಿದಾಗ ಬೇಕಾದಷ್ಟು ಸಿಲಿಂಡರ್ಗಳು ಸಹ ಸಿಗುತ್ತಿಲ್ಲ. ಸೌದೆ ಒಲೆಗಳನ್ನು ನಂಬಿಕೊಂಡು ಏದುಸಿರು ಬಿಡುತ್ತಾ ಹೋಟೆಲ್ ಉದ್ಯಮ ನಡೆಸುತ್ತಿದ್ದೇವೆ. ಆರು ತಿಂಗಳ ಹಿಂದೆಯಷ್ಟೇ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಿದ್ದಾಗ ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ದರ ಏರಿಸಬೇಕಾದರೆ ಯೋಚನೆ ಮಾಡುವಂತಾಗಿದೆ’ ಎನ್ನುತ್ತಾರೆ ಬೀದಿ ಬದಿಯ ಹೋಟೆಲ್ ವ್ಯಾಪಾರಿಗಳು.</p>.<p>‘ಮಧ್ಯಪ್ರಾಚ್ಯ ಯುದ್ಧದ ಸಮ ಯದಲ್ಲಿ ಸಿಲಿಂಡರ್ ಕೊರತೆ ಯಿಂದಾಗಿ ಸ್ವಲ್ಪ ಉದ್ಯಮದ ಮೇಲೆ ಹೊಡೆತ ಬಿತ್ತು. ಈಗ ಸಿಲಿಂಡರ್ ದರ ಹೆಚ್ಚಿಸಿದ್ದರಿಂದ ಪ್ರತಿ ಆಹಾರ ಪದಾರ್ಥದ ಮೇಲೆ ₹ 5 ಹೆಚ್ಚಳ ಮಾಡಿದ್ದೇವೆ. ನೆರೆಹೊರೆಯ ಹೋಟೆಲ್ನವರು ಸಹ ಏರಿಕೆ ಮಾಡಿದ್ದಾರೆ. ಪದಾರ್ಥಗಳ ಬೆಲೆ ತೀರ ಹೆಚ್ಚಳ ಮಾಡಿದರೆ ಗ್ರಾಹಕರು ಬೇರೆಡೆ ಹೋಗುತ್ತಾರೆ. ಇದನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಏರಿಕೆ ಮಾಡಿದ್ದೇವೆ’ ಎನ್ನುತ್ತಾರೆ ಎಸ್ಎಲ್ವಿ ಹೋಟೆಲ್ ಮಾಲೀಕ ಸಂತೋಷ ಶೆಟ್ಟಿ.</p>.<p>‘ದೊಡ್ಡ ಹೋಟೆಲ್ಗಳದ್ದು ಖರ್ಚು ವೆಚ್ಚ ಸಾಕಷ್ಟು ಹೆಚ್ಚಿರುತ್ತದೆ. ಕಟ್ಟಡದ ಬಾಡಿಗೆ, ಅಡುಗೆ ತಯಾರಕರು, ಸಪ್ಲೇಯರ್ಗಳ ಸಂಬಳವನ್ನು ತೆಗೆಯಬೇಕು. ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ನಗರಗಳಲ್ಲಿ ಹೋಟೆಲ್ಗಳಿಗೆ ಇವತ್ತು ಬಂದ ಗ್ರಾಹಕರು ಮರುದಿನ ಬರುವುದಿಲ್ಲ. ಹೀಗಾಗಿ, ದರ ಏರಿಕೆ ಮಾಡಿದರೆ ವ್ಯವಹಾರದ ಮೇಲೆ ಅಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಯಾದಗಿರಿ ಯಂತಹ ಸಣ್ಣ ನಗರದಲ್ಲಿ ಗ್ರಾಹಕರಿಗೂ ಹೊರೆಯಾಗದಂತೆ ಉದ್ಯಮವನ್ನು ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ’ ಎಂದರು.</p>.<p>6 ತಿಂಗಳ ಹಿಂದೆಯೂ ದರ ಹೆಚ್ಚಳ: ‘ಅಡುಗೆ ಎಣ್ಣೆ ಬೆಲೆ ಹೆಚ್ಚಳದಿಂದಾಗಿ ಆರು ತಿಂಗಳ ಹಿಂದೆ ₹25 ಪ್ಲೇಟ್ ಇದ್ದ ಸುಸಲಾ, ರೈಸ್ ಬಾತ್ ₹ 30ಕ್ಕೆ ಹೆಚ್ಚಿಸಿದ್ದೆ. ಗ್ರಾಹಕರು ಏನಪ್ಪಾ ಇಷ್ಟೊಂದು ರೇಟ್ ಜಾಸ್ತಿ ಮಾಡಿದ್ರೆ ಹೇಗೆ ಎಂದು ಕೇಳಿದರು. ಈಗ ಮತ್ತೆ ದರ ಹೆಚ್ಚಿಸಿದರೆ ಲಘು ಉಪಾಹಾರ ಬದಲು ₹70ರಿಂದ ₹80 ಸಿಗುವ ಊಟದ ಖಾನವಳಿಗೆ ತೆರಳುವ ಆತಂಕವಿದೆ. ಸುಸಲಾ, ರೈಸ್ ಬಾತ್ನಲ್ಲಿ ಕೊಡುತ್ತಿದ್ದ ಬಜ್ಜಿ ಕಡಿತ ಮಾಡಿ ನಷ್ಟ ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಣ್ಣ ಹೋಟೆಲ್ ವ್ಯಾಪಾರಿ ಗುರು ಬಾಪುರೆ.</p>.<div><blockquote>ಮೂರು ದಿನಕ್ಕೆ ಒಂದು ಸಿಲಿಂಡರ್ ಖರ್ಚಾದರೆ, ಒಂದು ತಿಂಗಳಿಗೆ ₹993 ಹೆಚ್ಚುವರಿ ಹೊರೆಯಾಗುತ್ತದೆ. ಇಷ್ಟೊಂದು ಹೊರೆ ಹೊರುವುದು ಸಣ್ಣ ಹೋಟೆಲ್ಗಳಿಗೆ ಕಷ್ಟವಾಗುತ್ತಿದೆ </blockquote><span class="attribution">ಗುರು ಬಾಪುರೆ, ಹೋಟೆಲ್ ಮಾಲೀಕ</span></div>.<p><strong>ಸೌದೆ ಮೊರೆ</strong></p><p>‘ಸಿಲಿಂಡರ್ ಕೊರತೆಯಿಂದಾಗಿ ಸೌದೆ ಬಳಸಿ ಅಡುಗೆ ಮಾಡುತ್ತಿದ್ದೇವೆ. ಈಗ ಅದನ್ನೇ ಮುಂದುವರೆಸುತ್ತಿದ್ದೇವೆ. ಸೌದೆಗಳಿಗೆ ವ್ಯಾಪಕ ಬೇಡಿಕೆ ಬರುತ್ತಿರುವುದರಿಂದ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸೌದೆ ಒಲೆಯ ಮೇಲೆ ಅನ್ನ, ಸಾಂಬರ್, ಪಲ್ಯ ಮಾಡಬಹುದು. ಆದರೆ, ನಾರ್ಥ್ ಇಂಡಿಯನ್ ಪದಾರ್ಥಗಳು, ಪುರಿಯನ್ನು ಅದರ ಮೇಲೆ ಮಾಡಲು ಆಗುವುದಿಲ್ಲ. ಜೊತೆಗೆ ಅಡುಗೆ ತಯಾರಕರು ಸೌದೆ ಬಳಸಿ ಅಡುಗೆ ಮಾಡಲು ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಕೇಂದ್ರ ಸರ್ಕಾರವು ಈಚೆಗೆ ವಾಣಿಜ್ಯ ಅಡುಗೆ ಅನಿಲ (19 ಕೆ.ಜಿ ಸಿಲಿಂಡರ್) ದರವನ್ನು ₹993 ಹೆಚ್ಚಳ ಮಾಡಿದೆ. ಇದರಿಂದ ಜಿಲ್ಲೆಯ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿ ಅವರ ಜೇಬಿಗೆ ಕತ್ತರಿಯೂ ಬಿದ್ದಿದೆ.</p>.<p>ಸಿಲಿಂಡರ್ ದರ ಏರಿಕೆಯಿಂದ ಉಂಟಾದ ಹೆಚ್ಚುವರಿ ವೆಚ್ಚದಿಂದ ಆಗುವ ನಷ್ಟವನ್ನು ಭರಿಸಿಕೊಳ್ಳಲು ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಸಣ್ಣ ಹೋಟೆಲ್ಗಳು, ರಸ್ತೆ ಬದಿಯ ತಳ್ಳು ಬಂಡಿಯಲ್ಲಿನ ಆಹಾರಪದಾರ್ಥ ವ್ಯಾಪಾರಿಗಳು ಬೆಲೆ ಏರಿಸಬೇಕೆ ಅಥವಾ ಬೇಡವೆ ಎಂಬ ಕವಲು ದಾರಿಯಲ್ಲಿದ್ದಾರೆ.</p>.<p>‘ದರ ಹೆಚ್ಚಳದಿಂದ ಯಾದಗಿರಿಯಲ್ಲಿ ವಾಣಿಜ್ಯ ಸಿಲಿಂಡರ್ ₹3,200ಕ್ಕೆ ತಲುಪಿದೆ. ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿಯಾಗಿ ಆಗುವ ₹993 ಭಾರವನ್ನು ಗ್ರಾಹಕರ ಮೇಲೆ ಹೊರಿಸಬೇಕಾದ ಅನಿವಾರ್ಯತೆ ಇದೆ. ದರ ಏರಿಕೆ ಮಾಡದಿದ್ದರೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಹೋಟೆಲ್ ಉದ್ಯಮವನ್ನು ಅರ್ಧಕ್ಕೆ ತೊರೆಯಬೇಕಾಗುತ್ತದೆ. ಉದ್ಯಮ ತೊರೆದರೆ ಹೋಟೆಲ್ಗಳನ್ನು ನಂಬಿಕೊಂಡ ಅಡುಗೆ ತಯಾರಕರು, ಸ್ವಚ್ಛತಾಗಾರರು, ಸಪ್ಲೇಯರ್ಗಳು ಕಷ್ಟಕ್ಕೆ ಸಿಲುಕುತ್ತಾರೆ’ ಎನ್ನುತ್ತಾರೆ ಹೋಟೆಲ್ ವ್ಯಾಪಾರಿಗಳು.</p>.<p>‘ಯುದ್ಧದಿಂದಾಗಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಕೊರತೆ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ. ಕೇಳಿದಾಗ ಬೇಕಾದಷ್ಟು ಸಿಲಿಂಡರ್ಗಳು ಸಹ ಸಿಗುತ್ತಿಲ್ಲ. ಸೌದೆ ಒಲೆಗಳನ್ನು ನಂಬಿಕೊಂಡು ಏದುಸಿರು ಬಿಡುತ್ತಾ ಹೋಟೆಲ್ ಉದ್ಯಮ ನಡೆಸುತ್ತಿದ್ದೇವೆ. ಆರು ತಿಂಗಳ ಹಿಂದೆಯಷ್ಟೇ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಿದ್ದಾಗ ಗ್ರಾಹಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ದರ ಏರಿಸಬೇಕಾದರೆ ಯೋಚನೆ ಮಾಡುವಂತಾಗಿದೆ’ ಎನ್ನುತ್ತಾರೆ ಬೀದಿ ಬದಿಯ ಹೋಟೆಲ್ ವ್ಯಾಪಾರಿಗಳು.</p>.<p>‘ಮಧ್ಯಪ್ರಾಚ್ಯ ಯುದ್ಧದ ಸಮ ಯದಲ್ಲಿ ಸಿಲಿಂಡರ್ ಕೊರತೆ ಯಿಂದಾಗಿ ಸ್ವಲ್ಪ ಉದ್ಯಮದ ಮೇಲೆ ಹೊಡೆತ ಬಿತ್ತು. ಈಗ ಸಿಲಿಂಡರ್ ದರ ಹೆಚ್ಚಿಸಿದ್ದರಿಂದ ಪ್ರತಿ ಆಹಾರ ಪದಾರ್ಥದ ಮೇಲೆ ₹ 5 ಹೆಚ್ಚಳ ಮಾಡಿದ್ದೇವೆ. ನೆರೆಹೊರೆಯ ಹೋಟೆಲ್ನವರು ಸಹ ಏರಿಕೆ ಮಾಡಿದ್ದಾರೆ. ಪದಾರ್ಥಗಳ ಬೆಲೆ ತೀರ ಹೆಚ್ಚಳ ಮಾಡಿದರೆ ಗ್ರಾಹಕರು ಬೇರೆಡೆ ಹೋಗುತ್ತಾರೆ. ಇದನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಏರಿಕೆ ಮಾಡಿದ್ದೇವೆ’ ಎನ್ನುತ್ತಾರೆ ಎಸ್ಎಲ್ವಿ ಹೋಟೆಲ್ ಮಾಲೀಕ ಸಂತೋಷ ಶೆಟ್ಟಿ.</p>.<p>‘ದೊಡ್ಡ ಹೋಟೆಲ್ಗಳದ್ದು ಖರ್ಚು ವೆಚ್ಚ ಸಾಕಷ್ಟು ಹೆಚ್ಚಿರುತ್ತದೆ. ಕಟ್ಟಡದ ಬಾಡಿಗೆ, ಅಡುಗೆ ತಯಾರಕರು, ಸಪ್ಲೇಯರ್ಗಳ ಸಂಬಳವನ್ನು ತೆಗೆಯಬೇಕು. ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ನಗರಗಳಲ್ಲಿ ಹೋಟೆಲ್ಗಳಿಗೆ ಇವತ್ತು ಬಂದ ಗ್ರಾಹಕರು ಮರುದಿನ ಬರುವುದಿಲ್ಲ. ಹೀಗಾಗಿ, ದರ ಏರಿಕೆ ಮಾಡಿದರೆ ವ್ಯವಹಾರದ ಮೇಲೆ ಅಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಯಾದಗಿರಿ ಯಂತಹ ಸಣ್ಣ ನಗರದಲ್ಲಿ ಗ್ರಾಹಕರಿಗೂ ಹೊರೆಯಾಗದಂತೆ ಉದ್ಯಮವನ್ನು ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ’ ಎಂದರು.</p>.<p>6 ತಿಂಗಳ ಹಿಂದೆಯೂ ದರ ಹೆಚ್ಚಳ: ‘ಅಡುಗೆ ಎಣ್ಣೆ ಬೆಲೆ ಹೆಚ್ಚಳದಿಂದಾಗಿ ಆರು ತಿಂಗಳ ಹಿಂದೆ ₹25 ಪ್ಲೇಟ್ ಇದ್ದ ಸುಸಲಾ, ರೈಸ್ ಬಾತ್ ₹ 30ಕ್ಕೆ ಹೆಚ್ಚಿಸಿದ್ದೆ. ಗ್ರಾಹಕರು ಏನಪ್ಪಾ ಇಷ್ಟೊಂದು ರೇಟ್ ಜಾಸ್ತಿ ಮಾಡಿದ್ರೆ ಹೇಗೆ ಎಂದು ಕೇಳಿದರು. ಈಗ ಮತ್ತೆ ದರ ಹೆಚ್ಚಿಸಿದರೆ ಲಘು ಉಪಾಹಾರ ಬದಲು ₹70ರಿಂದ ₹80 ಸಿಗುವ ಊಟದ ಖಾನವಳಿಗೆ ತೆರಳುವ ಆತಂಕವಿದೆ. ಸುಸಲಾ, ರೈಸ್ ಬಾತ್ನಲ್ಲಿ ಕೊಡುತ್ತಿದ್ದ ಬಜ್ಜಿ ಕಡಿತ ಮಾಡಿ ನಷ್ಟ ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಣ್ಣ ಹೋಟೆಲ್ ವ್ಯಾಪಾರಿ ಗುರು ಬಾಪುರೆ.</p>.<div><blockquote>ಮೂರು ದಿನಕ್ಕೆ ಒಂದು ಸಿಲಿಂಡರ್ ಖರ್ಚಾದರೆ, ಒಂದು ತಿಂಗಳಿಗೆ ₹993 ಹೆಚ್ಚುವರಿ ಹೊರೆಯಾಗುತ್ತದೆ. ಇಷ್ಟೊಂದು ಹೊರೆ ಹೊರುವುದು ಸಣ್ಣ ಹೋಟೆಲ್ಗಳಿಗೆ ಕಷ್ಟವಾಗುತ್ತಿದೆ </blockquote><span class="attribution">ಗುರು ಬಾಪುರೆ, ಹೋಟೆಲ್ ಮಾಲೀಕ</span></div>.<p><strong>ಸೌದೆ ಮೊರೆ</strong></p><p>‘ಸಿಲಿಂಡರ್ ಕೊರತೆಯಿಂದಾಗಿ ಸೌದೆ ಬಳಸಿ ಅಡುಗೆ ಮಾಡುತ್ತಿದ್ದೇವೆ. ಈಗ ಅದನ್ನೇ ಮುಂದುವರೆಸುತ್ತಿದ್ದೇವೆ. ಸೌದೆಗಳಿಗೆ ವ್ಯಾಪಕ ಬೇಡಿಕೆ ಬರುತ್ತಿರುವುದರಿಂದ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸೌದೆ ಒಲೆಯ ಮೇಲೆ ಅನ್ನ, ಸಾಂಬರ್, ಪಲ್ಯ ಮಾಡಬಹುದು. ಆದರೆ, ನಾರ್ಥ್ ಇಂಡಿಯನ್ ಪದಾರ್ಥಗಳು, ಪುರಿಯನ್ನು ಅದರ ಮೇಲೆ ಮಾಡಲು ಆಗುವುದಿಲ್ಲ. ಜೊತೆಗೆ ಅಡುಗೆ ತಯಾರಕರು ಸೌದೆ ಬಳಸಿ ಅಡುಗೆ ಮಾಡಲು ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>