<p><strong>ಯಾದಗಿರಿ:</strong> ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ವಿವಿಧೆಡೆಯ ಕುರುಚಲು ಕಾಡು, ಗುಡ್ಡಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ ಎಂಬಂತಾಗುತ್ತದೆ.</p>.<p>ಕುರಚಲು ಗಿಡಗಳು, ಒಣಗಿದ ಹುಲ್ಲು, ರಸ್ತೆ ಬದಿಯ ಗಿಡಗಂಟಿ, ರೈತರ ಹೊಲ, ತ್ಯಾಜ್ಯದ ರಾಶಿ, ಗುಡ್ಡಗಳು ಸೇರಿದಂತೆ ಹಲವೆಡೆ ನೆಲಮಟ್ಟದ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. ಬಹುತೇಕ ಅರಣ್ಯ ಬೆಂಕಿ ಕೃತ್ಯಗಳು ಮನುಷ್ಯರಿಂದಲೇ ಸಂಭವಿಸುತ್ತಿವೆ.</p>.<p>ಜಿಲ್ಲೆಯಲ್ಲಿನ ಒಟ್ಟಾರೆ ಭೂ ಪ್ರದೇಶದ ಪೈಕಿ ಶೇ 6.54ರಷ್ಟು ಅಂದರೆ, 33,773 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿಕೊಂಡಿದೆ. 11,755 ಹೆಕ್ಟೇರ್ ಕಾಯಂ ಗೋಮಾಳ ಹಾಗೂ 772 ಹೆಕ್ಟೇರ್ ಪ್ರದೇಶದಲ್ಲಿನ ವೃಕ್ಷ ಮತ್ತು ತೋಪು ಹಬ್ಬಿಕೊಂಡಿದೆ.</p>.<p>ಬೇಸಿಗೆ ಆರಂಭ ಆಗುತ್ತಿದ್ದಂತೆ ಕಿಡಿಗೇಡಿಗಳು ಹಚ್ಚುವ ಬೆಂಕಿಗೆ ಗಿಡ–ಮರಗಳು ಆಹುತಿ ಆಗುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನೆಲಮಟ್ಟದ ಬೆಂಕಿಯಿಂದಾಗಿ ಜಿಲ್ಲೆಯಲ್ಲಿನ ಸುಮಾರು 301 ಎಕರೆ ಪ್ರದೇಶದಲ್ಲಿ ಅರಣ್ಯಕ್ಕೆ ಹಾನಿಯಾಗಿದೆ. ಈ ವರ್ಷದ ಎರಡು ತಿಂಗಳ ಅವಧಿಯಲ್ಲಿ 10 ಎಕರೆ ಪ್ರದೇಶದ ಮೇಲೆ ಪರಿಣಾಮ ಬೀರಿದೆ.</p>.<p>ಜಮೀನುಗಳಲ್ಲಿನ ಬೆಳೆಗಳ ರಾಶಿ ಮುಗಿದು ಬೆಳೆಗಳು ಖಾಲಿಯಾಗುತ್ತಿದ್ದಂತೆ ಕೆಲವು ಜಮೀನುಗಳ ಬದುವಿನಲ್ಲಿ ಬೆಳೆದ ಮುಳ್ಳಿನ ಕಂಟಿ, ಒಣ ಹುಲ್ಲಿಗೆ ಬೆಂಕಿ ಹಚ್ಚಲಾಗುತ್ತದೆ. ಕೆಲವೆಡೆ ರಸ್ತೆಗಳ ಬದುಗಳಲ್ಲೂ ಬೆಂಕಿ ಹಾಕಲಾಗುತ್ತಿದೆ. ಬದು ಮತ್ತು ರಸ್ತೆಯ ಬದಿಯಲ್ಲಿ ಹಚ್ಚಿದ ಬೆಂಕಿಯು ಕ್ರಮೇಣ ಕುರುಚಲು ಗಿಡಗಳು, ಅರಣ್ಯ ಪ್ರದೇಶಕ್ಕೆ ವ್ಯಾಪಿಸಿಕೊಂಡು ಗಿಡಗಳನ್ನು ನಾಶ ಮಾಡುತ್ತದೆ.</p>.<p>ಜಮೀನು, ಅರಣ್ಯ ಪ್ರದೇಶ, ರಸ್ತೆಯ ಅಂಚಿನಲ್ಲಿರುವ ಹುಲ್ಲುಗಾವಲು ಬೇಸಿಗೆಯಲ್ಲಿ ಒಣಗಿರುತ್ತವೆ. ಸಿಗರೇಟ್ ಸೇದಿ ಎಸೆಯುವುದರಿಂದ ಇಲ್ಲವೇ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚುವುದರಿಂದಲೂ ಬೆಂಕಿಯ ಅನಾಹುತಗಳು ನಡೆಯುತ್ತಿವೆ. ಮಣ್ಣಿನಲ್ಲಿನ ಪೋಷಕಾಂಶಗಳು ಸಾಯುವುದರ ಜೊತೆಗೆ ಮಣ್ಣಿನ ಸತ್ವವೂ ನಶಿಸುತ್ತದೆ. ಬೇರುಸಹಿತ ಸಣ್ಣ– ಸಣ್ಣ ಗಿಡಮರಗಳು ಸುಟ್ಟು ಭಸ್ಮವಾಗುತ್ತವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<p>‘ಮನೆ ಬಳಕೆಗಾಗಿ ಅರಣ್ಯದಲ್ಲಿನ ಗಿಡಗಳನ್ನು ಕಡಿದು ಸಾಗಾಟ ಮಾಡುವಂತೆ ಇಲ್ಲ. ಆದರೆ, ಕೆಲವೆಡೆ ರಾತ್ರಿ ವೇಳೆ ತಮಗೆ ಬೇಕಾದ ಅರಣ್ಯದ ಗಡಿ ಸಮೀಪದ ಜಮೀನುಗಳ ಬದುವಿಗೆ ಬೆಂಕಿ ಹಚ್ಚಲಾಗುತ್ತದೆ. ಬಿರು ಬಿಸಿಲಿಗೆ ಒಣಗಿದ ಹುಲ್ಲುಗಾವಲು, ಮುಳ್ಳಿನ ಕಂಟಿಗಳಿಂದ ಗಿಡಗಳ ಬುಡ ಸುಟ್ಟು ಕೆಲವು ದಿನಗಳಲ್ಲಿ ಅವು ಒಣಗುತ್ತವೆ. ಒಣಗಿ ಬಿದ್ದ ಗಿಡಗಳನ್ನು ಕಡಿದು. ಹೊತ್ತು ತಂದು ಮನೆಯಲ್ಲಿ ಬಳಕೆ ಮಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ’ ಎನ್ನುತ್ತಾರೆ ಗುರುಮಠಕಲ್ ತಾಲ್ಲೂಕಿನ ಸ್ಥಳೀಯರು.</p>.<p>ಜಿಲ್ಲೆಯಲ್ಲಿ ಕಾಯಂ ಸಿಬ್ಬಂದಿ ಪೈಕಿ ಶೇ 40ರಷ್ಟು ಕೊರತೆ ಇದೆ. ಹತ್ತಿರ ಹತ್ತಿರ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಅರಣ್ಯದ ಮೇಲೆ ಕಣ್ಗಾವಲು ಇರಿಸಲು ಕೆಳಹಂತದ ಸಿಬ್ಬಂದಿಯ ಹೆಚ್ಚಿನ ಅಗತ್ಯವಿದೆ. ತಳಮಟ್ಟದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಿ, ಕಣ್ಗಾವಲು ಇರಿಸಲು ಇನ್ನಷ್ಟು ಫಾರೆಸ್ಟರ್, ಗಾರ್ಡ್, ವಾಚರ್ಸ್ಗಳ ಬೇಕಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.</p>.<p><strong>‘ಫೈರ್ ಲೈನ್ ನಿರ್ಮಾಣ’</strong></p><p>‘ಅರಣ್ಯದ ಸಂಭವನೀಯ ಬೆಂಕಿ ಪ್ರದೇಶದಲ್ಲಿ ಫೈರ್ ಲೈನ್ಗಳನ್ನು (ಬೆಂಕಿ ಗೆರೆ) ನಿರ್ಮಿಸಲಾಗಿದೆ. ಬೆಂಕಿ ಬಿದ್ದ ತಕ್ಷಣವೇ ಅಲರ್ಟ್ ಮೆಸೇಜ್ ಬರುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಬೆಂಕಿ ಕಾವಲುಗಾರರು ಅಗ್ನಿ ನಂದಕ ಸಲಕರಣೆಗಳೊಂದಿಗೆ ಅಲ್ಲಿಗೆ ತೆರಳಿ ಬೆಂಕಿ ನಂದಿಸುತ್ತಾರೆ. ಅಗತ್ಯಬಿದ್ದರೆ ಸಮೀಪದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಯಿಸಿಕೊಳ್ಳುತ್ತೇವೆ’ ಎಂದು ಉಪರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಸಾಮಾನ್ಯವಾಗಿ ನಾರಾಯಣಪುರ, ಗುರುಮಠಕಲ್, ಹತ್ತಿಕುಣಿ ಸೇರಿದಂತೆ ಇತರೆ ಬೆಂಕಿ ಪ್ರಕರಣಗಳು ನಡೆಯುತ್ತವೆ. ಬೇಸಿಗೆ ಆರಂಭಕ್ಕೂ ಮುನ್ನ ಸಿಬ್ಬಂದಿಗೆ ತರಬೇತಿ ನೀಡಿ, ಬೂಟ್, ಹುಲ್ಲು ಕಟಾವು ಯಂತ್ರಗಳೊಂದಿಗೆ ಅಗ್ನಿ ನಂದಕ ಸಲಕರಣೆಗಳನ್ನು ವಿತರಣೆ ಮಾಡಿದ್ದೇವೆ’ ಎಂದರು.</p>.<p><strong>ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ ಅರಣ್ಯ ಪ್ರದೇಶ</strong></p><p>ಜಿಲ್ಲೆಯಲ್ಲಿರುವ 33,773 ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿಯೇ ಅತ್ಯಧಿಕ 12,058 ಹೆಕ್ಟೇರ್ ಅರಣ್ಯವಿದೆ. ತಾಲ್ಲೂಕಿನ ಇಡೀ ಭೂಪ್ರದೇಶ ಪೈಕಿ ಅದು ಶೇ 12.71ರಷ್ಟು ವ್ಯಾಪಿಸಿಕೊಂಡಿದೆ.</p><p>ಗುರುಮಠಕಲ್ನಲ್ಲಿ 11,823 ಹೆಕ್ಟೇರ್ ಇದ್ದು, ತಾಲ್ಲೂಕಿನ ಒಟ್ಟಾರೆ ಭೂಪ್ರದೇಶ ಪೈಕಿ ಶೇ 15.52ರಷ್ಟು ಹರಡಿಕೊಂಡಿದೆ. ಹುಣಸಗಿ ತಾಲ್ಲೂಕಿನಲ್ಲಿ 2,322 ಹೆಕ್ಟೇರ್ (ಶೇ 2.71), ಶಹಾಪುರದಲ್ಲಿ 2,673 ಹೆಕ್ಟೇರ್ (ಶೇ 2.86), ಸುರಪುರದಲ್ಲಿ 2,575 ಹೆಕ್ಟೇರ್ (ಶೇ 2.58), ವಡಗೇರಾದಲ್ಲಿ 2,322 ಹೆಕ್ಟೇರ್ (ಶೇ 3.51) ಅರಣ್ಯವಿದೆ.</p>.<p><strong>ಕೋಟೆಗೂ ತಟ್ಟಿದ ಬೆಂಕಿಯ ಕೆನ್ನಾಲಿಗೆ</strong></p><p>ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಯಾದಗಿರಿ ಕೋಟೆಯ ಮೇಲೂ ಬೆಂಕಿಯ ಕೆನ್ನಾಲಿಗೆ ಪರಿಣಾಮ ಬೀರುತ್ತಿದೆ.</p><p>ಜೀರ್ಣೋದ್ಧಾರ ಕಾಣದ ಬೆಟ್ಟದ ಮೇಲಿನ ಕೋಟೆಯ ಸುತ್ತಲು ಗಿಡಗಂಟಿಗಳು ಬೆಳೆದಿವೆ. ಕಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಅವು ಸುಟ್ಟು ಅಸ್ಥಿಪಂಜರದಂತೆ ನಿಂತಿವೆ. ಪ್ರತಿ ವರ್ಷ ಗಿಡಗಳು ಬೆಳೆದು ಬೆಂಕಿ ಹತ್ತಿದರೆ ಕೋಟೆಯ ಅಸ್ಥಿತ್ವಕ್ಕೆ ಧಕ್ಕೆಯಾಗಲಿದೆ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ವಿವಿಧೆಡೆಯ ಕುರುಚಲು ಕಾಡು, ಗುಡ್ಡಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ ಎಂಬಂತಾಗುತ್ತದೆ.</p>.<p>ಕುರಚಲು ಗಿಡಗಳು, ಒಣಗಿದ ಹುಲ್ಲು, ರಸ್ತೆ ಬದಿಯ ಗಿಡಗಂಟಿ, ರೈತರ ಹೊಲ, ತ್ಯಾಜ್ಯದ ರಾಶಿ, ಗುಡ್ಡಗಳು ಸೇರಿದಂತೆ ಹಲವೆಡೆ ನೆಲಮಟ್ಟದ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. ಬಹುತೇಕ ಅರಣ್ಯ ಬೆಂಕಿ ಕೃತ್ಯಗಳು ಮನುಷ್ಯರಿಂದಲೇ ಸಂಭವಿಸುತ್ತಿವೆ.</p>.<p>ಜಿಲ್ಲೆಯಲ್ಲಿನ ಒಟ್ಟಾರೆ ಭೂ ಪ್ರದೇಶದ ಪೈಕಿ ಶೇ 6.54ರಷ್ಟು ಅಂದರೆ, 33,773 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿಕೊಂಡಿದೆ. 11,755 ಹೆಕ್ಟೇರ್ ಕಾಯಂ ಗೋಮಾಳ ಹಾಗೂ 772 ಹೆಕ್ಟೇರ್ ಪ್ರದೇಶದಲ್ಲಿನ ವೃಕ್ಷ ಮತ್ತು ತೋಪು ಹಬ್ಬಿಕೊಂಡಿದೆ.</p>.<p>ಬೇಸಿಗೆ ಆರಂಭ ಆಗುತ್ತಿದ್ದಂತೆ ಕಿಡಿಗೇಡಿಗಳು ಹಚ್ಚುವ ಬೆಂಕಿಗೆ ಗಿಡ–ಮರಗಳು ಆಹುತಿ ಆಗುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನೆಲಮಟ್ಟದ ಬೆಂಕಿಯಿಂದಾಗಿ ಜಿಲ್ಲೆಯಲ್ಲಿನ ಸುಮಾರು 301 ಎಕರೆ ಪ್ರದೇಶದಲ್ಲಿ ಅರಣ್ಯಕ್ಕೆ ಹಾನಿಯಾಗಿದೆ. ಈ ವರ್ಷದ ಎರಡು ತಿಂಗಳ ಅವಧಿಯಲ್ಲಿ 10 ಎಕರೆ ಪ್ರದೇಶದ ಮೇಲೆ ಪರಿಣಾಮ ಬೀರಿದೆ.</p>.<p>ಜಮೀನುಗಳಲ್ಲಿನ ಬೆಳೆಗಳ ರಾಶಿ ಮುಗಿದು ಬೆಳೆಗಳು ಖಾಲಿಯಾಗುತ್ತಿದ್ದಂತೆ ಕೆಲವು ಜಮೀನುಗಳ ಬದುವಿನಲ್ಲಿ ಬೆಳೆದ ಮುಳ್ಳಿನ ಕಂಟಿ, ಒಣ ಹುಲ್ಲಿಗೆ ಬೆಂಕಿ ಹಚ್ಚಲಾಗುತ್ತದೆ. ಕೆಲವೆಡೆ ರಸ್ತೆಗಳ ಬದುಗಳಲ್ಲೂ ಬೆಂಕಿ ಹಾಕಲಾಗುತ್ತಿದೆ. ಬದು ಮತ್ತು ರಸ್ತೆಯ ಬದಿಯಲ್ಲಿ ಹಚ್ಚಿದ ಬೆಂಕಿಯು ಕ್ರಮೇಣ ಕುರುಚಲು ಗಿಡಗಳು, ಅರಣ್ಯ ಪ್ರದೇಶಕ್ಕೆ ವ್ಯಾಪಿಸಿಕೊಂಡು ಗಿಡಗಳನ್ನು ನಾಶ ಮಾಡುತ್ತದೆ.</p>.<p>ಜಮೀನು, ಅರಣ್ಯ ಪ್ರದೇಶ, ರಸ್ತೆಯ ಅಂಚಿನಲ್ಲಿರುವ ಹುಲ್ಲುಗಾವಲು ಬೇಸಿಗೆಯಲ್ಲಿ ಒಣಗಿರುತ್ತವೆ. ಸಿಗರೇಟ್ ಸೇದಿ ಎಸೆಯುವುದರಿಂದ ಇಲ್ಲವೇ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚುವುದರಿಂದಲೂ ಬೆಂಕಿಯ ಅನಾಹುತಗಳು ನಡೆಯುತ್ತಿವೆ. ಮಣ್ಣಿನಲ್ಲಿನ ಪೋಷಕಾಂಶಗಳು ಸಾಯುವುದರ ಜೊತೆಗೆ ಮಣ್ಣಿನ ಸತ್ವವೂ ನಶಿಸುತ್ತದೆ. ಬೇರುಸಹಿತ ಸಣ್ಣ– ಸಣ್ಣ ಗಿಡಮರಗಳು ಸುಟ್ಟು ಭಸ್ಮವಾಗುತ್ತವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<p>‘ಮನೆ ಬಳಕೆಗಾಗಿ ಅರಣ್ಯದಲ್ಲಿನ ಗಿಡಗಳನ್ನು ಕಡಿದು ಸಾಗಾಟ ಮಾಡುವಂತೆ ಇಲ್ಲ. ಆದರೆ, ಕೆಲವೆಡೆ ರಾತ್ರಿ ವೇಳೆ ತಮಗೆ ಬೇಕಾದ ಅರಣ್ಯದ ಗಡಿ ಸಮೀಪದ ಜಮೀನುಗಳ ಬದುವಿಗೆ ಬೆಂಕಿ ಹಚ್ಚಲಾಗುತ್ತದೆ. ಬಿರು ಬಿಸಿಲಿಗೆ ಒಣಗಿದ ಹುಲ್ಲುಗಾವಲು, ಮುಳ್ಳಿನ ಕಂಟಿಗಳಿಂದ ಗಿಡಗಳ ಬುಡ ಸುಟ್ಟು ಕೆಲವು ದಿನಗಳಲ್ಲಿ ಅವು ಒಣಗುತ್ತವೆ. ಒಣಗಿ ಬಿದ್ದ ಗಿಡಗಳನ್ನು ಕಡಿದು. ಹೊತ್ತು ತಂದು ಮನೆಯಲ್ಲಿ ಬಳಕೆ ಮಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ’ ಎನ್ನುತ್ತಾರೆ ಗುರುಮಠಕಲ್ ತಾಲ್ಲೂಕಿನ ಸ್ಥಳೀಯರು.</p>.<p>ಜಿಲ್ಲೆಯಲ್ಲಿ ಕಾಯಂ ಸಿಬ್ಬಂದಿ ಪೈಕಿ ಶೇ 40ರಷ್ಟು ಕೊರತೆ ಇದೆ. ಹತ್ತಿರ ಹತ್ತಿರ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಅರಣ್ಯದ ಮೇಲೆ ಕಣ್ಗಾವಲು ಇರಿಸಲು ಕೆಳಹಂತದ ಸಿಬ್ಬಂದಿಯ ಹೆಚ್ಚಿನ ಅಗತ್ಯವಿದೆ. ತಳಮಟ್ಟದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಿ, ಕಣ್ಗಾವಲು ಇರಿಸಲು ಇನ್ನಷ್ಟು ಫಾರೆಸ್ಟರ್, ಗಾರ್ಡ್, ವಾಚರ್ಸ್ಗಳ ಬೇಕಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.</p>.<p><strong>‘ಫೈರ್ ಲೈನ್ ನಿರ್ಮಾಣ’</strong></p><p>‘ಅರಣ್ಯದ ಸಂಭವನೀಯ ಬೆಂಕಿ ಪ್ರದೇಶದಲ್ಲಿ ಫೈರ್ ಲೈನ್ಗಳನ್ನು (ಬೆಂಕಿ ಗೆರೆ) ನಿರ್ಮಿಸಲಾಗಿದೆ. ಬೆಂಕಿ ಬಿದ್ದ ತಕ್ಷಣವೇ ಅಲರ್ಟ್ ಮೆಸೇಜ್ ಬರುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಬೆಂಕಿ ಕಾವಲುಗಾರರು ಅಗ್ನಿ ನಂದಕ ಸಲಕರಣೆಗಳೊಂದಿಗೆ ಅಲ್ಲಿಗೆ ತೆರಳಿ ಬೆಂಕಿ ನಂದಿಸುತ್ತಾರೆ. ಅಗತ್ಯಬಿದ್ದರೆ ಸಮೀಪದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಯಿಸಿಕೊಳ್ಳುತ್ತೇವೆ’ ಎಂದು ಉಪರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಸಾಮಾನ್ಯವಾಗಿ ನಾರಾಯಣಪುರ, ಗುರುಮಠಕಲ್, ಹತ್ತಿಕುಣಿ ಸೇರಿದಂತೆ ಇತರೆ ಬೆಂಕಿ ಪ್ರಕರಣಗಳು ನಡೆಯುತ್ತವೆ. ಬೇಸಿಗೆ ಆರಂಭಕ್ಕೂ ಮುನ್ನ ಸಿಬ್ಬಂದಿಗೆ ತರಬೇತಿ ನೀಡಿ, ಬೂಟ್, ಹುಲ್ಲು ಕಟಾವು ಯಂತ್ರಗಳೊಂದಿಗೆ ಅಗ್ನಿ ನಂದಕ ಸಲಕರಣೆಗಳನ್ನು ವಿತರಣೆ ಮಾಡಿದ್ದೇವೆ’ ಎಂದರು.</p>.<p><strong>ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ ಅರಣ್ಯ ಪ್ರದೇಶ</strong></p><p>ಜಿಲ್ಲೆಯಲ್ಲಿರುವ 33,773 ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿಯೇ ಅತ್ಯಧಿಕ 12,058 ಹೆಕ್ಟೇರ್ ಅರಣ್ಯವಿದೆ. ತಾಲ್ಲೂಕಿನ ಇಡೀ ಭೂಪ್ರದೇಶ ಪೈಕಿ ಅದು ಶೇ 12.71ರಷ್ಟು ವ್ಯಾಪಿಸಿಕೊಂಡಿದೆ.</p><p>ಗುರುಮಠಕಲ್ನಲ್ಲಿ 11,823 ಹೆಕ್ಟೇರ್ ಇದ್ದು, ತಾಲ್ಲೂಕಿನ ಒಟ್ಟಾರೆ ಭೂಪ್ರದೇಶ ಪೈಕಿ ಶೇ 15.52ರಷ್ಟು ಹರಡಿಕೊಂಡಿದೆ. ಹುಣಸಗಿ ತಾಲ್ಲೂಕಿನಲ್ಲಿ 2,322 ಹೆಕ್ಟೇರ್ (ಶೇ 2.71), ಶಹಾಪುರದಲ್ಲಿ 2,673 ಹೆಕ್ಟೇರ್ (ಶೇ 2.86), ಸುರಪುರದಲ್ಲಿ 2,575 ಹೆಕ್ಟೇರ್ (ಶೇ 2.58), ವಡಗೇರಾದಲ್ಲಿ 2,322 ಹೆಕ್ಟೇರ್ (ಶೇ 3.51) ಅರಣ್ಯವಿದೆ.</p>.<p><strong>ಕೋಟೆಗೂ ತಟ್ಟಿದ ಬೆಂಕಿಯ ಕೆನ್ನಾಲಿಗೆ</strong></p><p>ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಯಾದಗಿರಿ ಕೋಟೆಯ ಮೇಲೂ ಬೆಂಕಿಯ ಕೆನ್ನಾಲಿಗೆ ಪರಿಣಾಮ ಬೀರುತ್ತಿದೆ.</p><p>ಜೀರ್ಣೋದ್ಧಾರ ಕಾಣದ ಬೆಟ್ಟದ ಮೇಲಿನ ಕೋಟೆಯ ಸುತ್ತಲು ಗಿಡಗಂಟಿಗಳು ಬೆಳೆದಿವೆ. ಕಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಅವು ಸುಟ್ಟು ಅಸ್ಥಿಪಂಜರದಂತೆ ನಿಂತಿವೆ. ಪ್ರತಿ ವರ್ಷ ಗಿಡಗಳು ಬೆಳೆದು ಬೆಂಕಿ ಹತ್ತಿದರೆ ಕೋಟೆಯ ಅಸ್ಥಿತ್ವಕ್ಕೆ ಧಕ್ಕೆಯಾಗಲಿದೆ ಎನ್ನುತ್ತಾರೆ ಸ್ಥಳೀಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>