<p>ಯಾದಗಿರಿ: ಜಮೀನು ವ್ಯಾಜ್ಯವಾಗಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಯುವಕರೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಕೊಲೆ ಆರೋಪದಡಿ ಪರಮೇಶ, ದೇವಪ್ಪ ಹಾಗೂ ಮಹಾದೇವ ಅವರನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ.</p>.<p>ಸುರಪುರ ತಾಲ್ಲೂಕಿನ ಮಾವಿನಮಟ್ಟಿ ಗ್ರಾಮದ ಪರಮೇಶ್ವರ ಮಲ್ಲಣ್ಣ ಗಿಂಡಿ (27) ಕೊಲೆಯಾದವರು. ಗಲಾಟೆಯಲ್ಲಿ ರೇವಣಸಿದ್ದಪ್ಪ ಗಿಂಡಿ, ದೇವಿಂದ್ರಪ್ಪ ಗಿಂಡಿ ಹಾಗೂ ಸಾಬಮ್ಮ ಗಿಂಡಿ ಗಾಯಗೊಂಡಿದ್ದಾರೆ. ಕೊಲೆ ಹಾಗೂ ಹಲ್ಲೆ ಆರೋಪದಡಿ ದೇವಿಂದ್ರಪ್ಪ ಹಣಮಂತ್ರಾಯ ಗಿಂಡಿ, ಮಹಾದೇವಪ್ಪ ಹಣಮಂತ್ರಾಯ ಗಿಂಡಿ, ಪರಮಣ್ಣ ಹಣಮಂತ್ರಾಯ, ಚಂದಪ್ಪ ಸೇರಿ 21 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>2 ಎಕರೆ ಜಮೀನು ಸಂಬಂಧ ದೇವಿಂದ್ರಪ್ಪ ಮಲ್ಲಣ್ಣ ಹಾಗೂ ದೇವಿಂದ್ರಪ್ಪ ಹಣಮಂತ್ರಾಯ ಕಟುಂಬಸ್ಥರ ನಡುವೆ ಆಗಾಗ ಜಗಳವಾಗಿ ವೈಷಮ್ಯ ಬೆಳೆದಿತ್ತು. ಸೋಮವಾರ ರಾತ್ರಿ ದೇವಿಂದ್ರಪ್ಪ ಹಣಮಂತ್ರಾಯ, ಮಹಾದೇವಪ್ಪ ಸೇರಿ ಇತರರು ಕೈಯಲ್ಲಿ ಬಡಿಗೆ, ತಲವಾರ, ಭರ್ಜಿ, ಕಲ್ಲುಗಳನ್ನು ಹಿಡಿದುಕೊಂಡು ಪರಮೇಶ್ವರ ಮನೆ ಮುಂದೆ ಬಂದು ಗಲಾಟೆ ಶುರು ಮಾಡಿದರು. ‘ನಾವು ಬಿತ್ತಿ ಬೆಳೆಯುತ್ತಿದ್ದ ಹೊಲ ನೀವು ಉಣ್ಣುತ್ತಿದ್ದಿರಿ, ಇವತ್ತು ನಿಮ್ಮನ್ನು ಕೊಲೆ ಮಾಡಿ ನಾವು ಉಣ್ಣುತ್ತೇವೆ ಎಂದು ಆರೋಪಿಗಳು ಹಲ್ಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪರಮೇಶ್ವರನನ್ನು ನೆಲಕ್ಕೆ ಕೆಡವಿದರು. ಮಹಾದೇವಪ್ಪ ಭರ್ಜಿಯಿಂದ ಭುಜ, ಬೆನ್ನಿಗೆ ತಿವಿದರು. ಭೂತಾಳಿ ಮತ್ತು ದೇವಪ್ಪ ಬಡಿಗೆಯಿಂದ ಮೊಳಕಾಲಿಗೆ ಹೊಡೆದರು. ಹಯ್ಯಾಳಪ್ಪ, ಶರಣಪ್ಪ, ನಿಂಗಪ್ಪ, ಸಿದ್ದಪ್ಪ, ಬಸಪ್ಪ ಸೇರಿದಂತೆ ಇತರರು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲು ತೆಗೆದುಕೊಂಡು ತಲೆ, ಬೆನ್ನಿನ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>ಗಲಾಟೆ ಬಿಡಿಸಲು ಬಂದ ಸಾಬಮ್ಮ, ರೇವಣಸಿದ್ದಪ್ಪ, ದೇವಿಂದ್ರಪ್ಪ ಅವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಜಮೀನು ವಿಚಾರವಾಗಿ ವೈಷಮ್ಯ ಬೆಳೆಸಿಕೊಂಡು ಕೊಲೆ ಮಾಡಿ, ಮೂವರನ್ನು ಗಾಯಗೊಳಿಸಿ ಜೀವ ಬೆದರಿಕೆಯೂ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.</p>.<p>ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.</p>.<p><strong>ಬಾಲಕಿ ಮೇಲೆ ಅತ್ಯಾಚಾರ:</strong> ಹದಿನೈದು ವರ್ಷದ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಕರೆದೊಯ್ದುಅತ್ಯಾಚಾರ ಎಸಗಿದ ಆರೋಪದಡಿ ಯುವಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.</p>.<p>ಸುರಪುರ ತಾಲ್ಲೂಕಿನ ಗ್ರಾಮ ವೊಂದರ ನಿವಾಸಿ ಪರಶುರಾಮ ಹಣಮಂತ (21) ಅತ್ಯಾಚಾರ ಎಸಗಿದ ಆರೋಪಿ. ಬಾಲಕಿಯು 7ನೇ ತರಗತಿ ಓದಿದ್ದು, ಬಳಿಕ ಶಾಲೆ ಬಿಟ್ಟು ಪೋಷಕರೊಂದಿಗೆ ಬೆಂಗಳೂರಿಗೆ ತೆರಳಿದ್ದಳು. ಬೆಂಗಳೂರಿಲ್ಲಿ ಪೋಷಕರು ದುಡಿಯಲು ಹೊರಗೆ ಹೋದರೆ, ಬಾಲಕಿ ತಮ್ಮಂದಿರೊಂದಿಗೆ ಶೆಡ್ನಲ್ಲಿ ಇರುತ್ತಿದ್ದಳು. ಶೆಡ್ ಪಕ್ಕದಲ್ಲಿ ವಾಸವಿದ್ದ ಪರಶುರಾಮ ಬಾಲಕಿಗೆ ಪರಿಚಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಬಾಲಕಿಯ ಜೊತೆಗೆ ಆಗಾಗ ಸಲುಗೆಯಿಂದ ಮಾತನಾಡುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪೋಷಕರು ಬೆಂಗಳೂರಿಂದ ಸ್ವಗ್ರಾಮಕ್ಕೆ ಬಂದರು.</p>.<p>ಯಾರೂ ಇಲ್ಲದ ವೇಳೆ ಮನೆಗೆ ಬಂದ ಆರೋಪಿ, ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದ. ಬಾಲಕಿ ಬೇಡ ಎಂದರೂ ಅತ್ಯಾಚಾರ ಎಸಗಿದ್ದ ಎಂದು ಹೇಳಿದ್ದಾರೆ.</p>.<div><blockquote>ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ </blockquote><span class="attribution">ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<h2>₹ 8.50 ಲಕ್ಷ ಮೌಲ್ಯದ ಚಿನ್ನ, ನಗದು ಕಳವು</h2><p>ಹುಣಸಗಿ ಪಟ್ಟಣದ ವ್ಯಾಪಾರಿಯೊಬ್ಬರ ಮನೆ ಬಾಗಿಲಿನ ಕೀಲಿ ಮುರಿದು ಒಳ ನುಗ್ಗಿದ ಕಳ್ಳರು ನಗದು ಸೇರಿ ₹ 8.50 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ವ್ಯಾಪಾರ ಮಾಡುತ್ತಿದ್ದ ಶರಣಗೌಡ ಬಸವರಾಜ ಅವರ ಮನೆಯಲ್ಲಿ ಕಳ್ಳತನವಾಗಿದೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಮನೆಗೆ ಬೀಗ ಹಾಕಿದ ಶರಣಗೌಡ ಅವರು ಮನೆಯ ಮಾಳಿಗೆ ಮೇಲೆ ಮಲಗಿದ್ದರು. ರಾತ್ರಿ ವೇಳೆ ಬಾಗಿಲಿನ ಕೀಲಿ ಮುರಿದ ಕಳ್ಳರು ಒಳ ನುಗ್ಗಿದರು. ಅಲ್ಮೇರಾದಲ್ಲಿ ಇರಿಸಿದ್ದ ₹ 10 ಸಾವಿರ ನಗದು ಸೇರಿ ₹ 8.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><h2>ಹೊಟ್ಟೆಗೆ ಚಾಕು ಇರಿದುಕೊಂಡ ವ್ಯಕ್ತಿ ಸಾವು</h2><p>ನರದೌರ್ಬಲ್ಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಹೊಟ್ಟೆಗೆ ಚಾಕು ಇರಿದುಕೊಂಡು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.</p><p>ಸುರಪುರ ತಾಲ್ಲೂಕಿನ ತಿಮ್ಮಪುರದ ನಿವಾಸಿಯಾದ ಚಪ್ಪಲಿ ವ್ಯಾಪಾರಿ ಮಂಜುನಾಥ ಮರೆಪ್ಪ (44) ಮೃತರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಮಂಜುನಾಥ ಅವರು 10 ವರ್ಷಗಳಿಂದ ನರದೌರ್ಬಲ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಲಿಲ್ಲ. ಈ ರೋಗದಿಂದ ಬೇಸತ್ತು ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಗಂಭೀರವಾಗಿ ಗಾಯ ಮಾಡಿಕೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಜಮೀನು ವ್ಯಾಜ್ಯವಾಗಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಯುವಕರೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಕೊಲೆ ಆರೋಪದಡಿ ಪರಮೇಶ, ದೇವಪ್ಪ ಹಾಗೂ ಮಹಾದೇವ ಅವರನ್ನು ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ.</p>.<p>ಸುರಪುರ ತಾಲ್ಲೂಕಿನ ಮಾವಿನಮಟ್ಟಿ ಗ್ರಾಮದ ಪರಮೇಶ್ವರ ಮಲ್ಲಣ್ಣ ಗಿಂಡಿ (27) ಕೊಲೆಯಾದವರು. ಗಲಾಟೆಯಲ್ಲಿ ರೇವಣಸಿದ್ದಪ್ಪ ಗಿಂಡಿ, ದೇವಿಂದ್ರಪ್ಪ ಗಿಂಡಿ ಹಾಗೂ ಸಾಬಮ್ಮ ಗಿಂಡಿ ಗಾಯಗೊಂಡಿದ್ದಾರೆ. ಕೊಲೆ ಹಾಗೂ ಹಲ್ಲೆ ಆರೋಪದಡಿ ದೇವಿಂದ್ರಪ್ಪ ಹಣಮಂತ್ರಾಯ ಗಿಂಡಿ, ಮಹಾದೇವಪ್ಪ ಹಣಮಂತ್ರಾಯ ಗಿಂಡಿ, ಪರಮಣ್ಣ ಹಣಮಂತ್ರಾಯ, ಚಂದಪ್ಪ ಸೇರಿ 21 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>2 ಎಕರೆ ಜಮೀನು ಸಂಬಂಧ ದೇವಿಂದ್ರಪ್ಪ ಮಲ್ಲಣ್ಣ ಹಾಗೂ ದೇವಿಂದ್ರಪ್ಪ ಹಣಮಂತ್ರಾಯ ಕಟುಂಬಸ್ಥರ ನಡುವೆ ಆಗಾಗ ಜಗಳವಾಗಿ ವೈಷಮ್ಯ ಬೆಳೆದಿತ್ತು. ಸೋಮವಾರ ರಾತ್ರಿ ದೇವಿಂದ್ರಪ್ಪ ಹಣಮಂತ್ರಾಯ, ಮಹಾದೇವಪ್ಪ ಸೇರಿ ಇತರರು ಕೈಯಲ್ಲಿ ಬಡಿಗೆ, ತಲವಾರ, ಭರ್ಜಿ, ಕಲ್ಲುಗಳನ್ನು ಹಿಡಿದುಕೊಂಡು ಪರಮೇಶ್ವರ ಮನೆ ಮುಂದೆ ಬಂದು ಗಲಾಟೆ ಶುರು ಮಾಡಿದರು. ‘ನಾವು ಬಿತ್ತಿ ಬೆಳೆಯುತ್ತಿದ್ದ ಹೊಲ ನೀವು ಉಣ್ಣುತ್ತಿದ್ದಿರಿ, ಇವತ್ತು ನಿಮ್ಮನ್ನು ಕೊಲೆ ಮಾಡಿ ನಾವು ಉಣ್ಣುತ್ತೇವೆ ಎಂದು ಆರೋಪಿಗಳು ಹಲ್ಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಪರಮೇಶ್ವರನನ್ನು ನೆಲಕ್ಕೆ ಕೆಡವಿದರು. ಮಹಾದೇವಪ್ಪ ಭರ್ಜಿಯಿಂದ ಭುಜ, ಬೆನ್ನಿಗೆ ತಿವಿದರು. ಭೂತಾಳಿ ಮತ್ತು ದೇವಪ್ಪ ಬಡಿಗೆಯಿಂದ ಮೊಳಕಾಲಿಗೆ ಹೊಡೆದರು. ಹಯ್ಯಾಳಪ್ಪ, ಶರಣಪ್ಪ, ನಿಂಗಪ್ಪ, ಸಿದ್ದಪ್ಪ, ಬಸಪ್ಪ ಸೇರಿದಂತೆ ಇತರರು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲು ತೆಗೆದುಕೊಂಡು ತಲೆ, ಬೆನ್ನಿನ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>ಗಲಾಟೆ ಬಿಡಿಸಲು ಬಂದ ಸಾಬಮ್ಮ, ರೇವಣಸಿದ್ದಪ್ಪ, ದೇವಿಂದ್ರಪ್ಪ ಅವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಜಮೀನು ವಿಚಾರವಾಗಿ ವೈಷಮ್ಯ ಬೆಳೆಸಿಕೊಂಡು ಕೊಲೆ ಮಾಡಿ, ಮೂವರನ್ನು ಗಾಯಗೊಳಿಸಿ ಜೀವ ಬೆದರಿಕೆಯೂ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.</p>.<p>ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.</p>.<p><strong>ಬಾಲಕಿ ಮೇಲೆ ಅತ್ಯಾಚಾರ:</strong> ಹದಿನೈದು ವರ್ಷದ ಬಾಲಕಿಯನ್ನು ಮದುವೆ ಆಗುವುದಾಗಿ ಪುಸಲಾಯಿಸಿ ಕರೆದೊಯ್ದುಅತ್ಯಾಚಾರ ಎಸಗಿದ ಆರೋಪದಡಿ ಯುವಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.</p>.<p>ಸುರಪುರ ತಾಲ್ಲೂಕಿನ ಗ್ರಾಮ ವೊಂದರ ನಿವಾಸಿ ಪರಶುರಾಮ ಹಣಮಂತ (21) ಅತ್ಯಾಚಾರ ಎಸಗಿದ ಆರೋಪಿ. ಬಾಲಕಿಯು 7ನೇ ತರಗತಿ ಓದಿದ್ದು, ಬಳಿಕ ಶಾಲೆ ಬಿಟ್ಟು ಪೋಷಕರೊಂದಿಗೆ ಬೆಂಗಳೂರಿಗೆ ತೆರಳಿದ್ದಳು. ಬೆಂಗಳೂರಿಲ್ಲಿ ಪೋಷಕರು ದುಡಿಯಲು ಹೊರಗೆ ಹೋದರೆ, ಬಾಲಕಿ ತಮ್ಮಂದಿರೊಂದಿಗೆ ಶೆಡ್ನಲ್ಲಿ ಇರುತ್ತಿದ್ದಳು. ಶೆಡ್ ಪಕ್ಕದಲ್ಲಿ ವಾಸವಿದ್ದ ಪರಶುರಾಮ ಬಾಲಕಿಗೆ ಪರಿಚಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಬಾಲಕಿಯ ಜೊತೆಗೆ ಆಗಾಗ ಸಲುಗೆಯಿಂದ ಮಾತನಾಡುತ್ತಿದ್ದ. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪೋಷಕರು ಬೆಂಗಳೂರಿಂದ ಸ್ವಗ್ರಾಮಕ್ಕೆ ಬಂದರು.</p>.<p>ಯಾರೂ ಇಲ್ಲದ ವೇಳೆ ಮನೆಗೆ ಬಂದ ಆರೋಪಿ, ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದ. ಬಾಲಕಿ ಬೇಡ ಎಂದರೂ ಅತ್ಯಾಚಾರ ಎಸಗಿದ್ದ ಎಂದು ಹೇಳಿದ್ದಾರೆ.</p>.<div><blockquote>ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ </blockquote><span class="attribution">ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<h2>₹ 8.50 ಲಕ್ಷ ಮೌಲ್ಯದ ಚಿನ್ನ, ನಗದು ಕಳವು</h2><p>ಹುಣಸಗಿ ಪಟ್ಟಣದ ವ್ಯಾಪಾರಿಯೊಬ್ಬರ ಮನೆ ಬಾಗಿಲಿನ ಕೀಲಿ ಮುರಿದು ಒಳ ನುಗ್ಗಿದ ಕಳ್ಳರು ನಗದು ಸೇರಿ ₹ 8.50 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಬಸ್ ನಿಲ್ದಾಣದಲ್ಲಿ ವ್ಯಾಪಾರ ಮಾಡುತ್ತಿದ್ದ ಶರಣಗೌಡ ಬಸವರಾಜ ಅವರ ಮನೆಯಲ್ಲಿ ಕಳ್ಳತನವಾಗಿದೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಮನೆಗೆ ಬೀಗ ಹಾಕಿದ ಶರಣಗೌಡ ಅವರು ಮನೆಯ ಮಾಳಿಗೆ ಮೇಲೆ ಮಲಗಿದ್ದರು. ರಾತ್ರಿ ವೇಳೆ ಬಾಗಿಲಿನ ಕೀಲಿ ಮುರಿದ ಕಳ್ಳರು ಒಳ ನುಗ್ಗಿದರು. ಅಲ್ಮೇರಾದಲ್ಲಿ ಇರಿಸಿದ್ದ ₹ 10 ಸಾವಿರ ನಗದು ಸೇರಿ ₹ 8.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><h2>ಹೊಟ್ಟೆಗೆ ಚಾಕು ಇರಿದುಕೊಂಡ ವ್ಯಕ್ತಿ ಸಾವು</h2><p>ನರದೌರ್ಬಲ್ಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಹೊಟ್ಟೆಗೆ ಚಾಕು ಇರಿದುಕೊಂಡು ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.</p><p>ಸುರಪುರ ತಾಲ್ಲೂಕಿನ ತಿಮ್ಮಪುರದ ನಿವಾಸಿಯಾದ ಚಪ್ಪಲಿ ವ್ಯಾಪಾರಿ ಮಂಜುನಾಥ ಮರೆಪ್ಪ (44) ಮೃತರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಮಂಜುನಾಥ ಅವರು 10 ವರ್ಷಗಳಿಂದ ನರದೌರ್ಬಲ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಲಿಲ್ಲ. ಈ ರೋಗದಿಂದ ಬೇಸತ್ತು ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಗಂಭೀರವಾಗಿ ಗಾಯ ಮಾಡಿಕೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>