<p><em>ಮಲ್ಲಿಕಾರ್ಜುನ ನಾಲವಾರ</em></p>.<p>ಯಾದಗಿರಿ: ಮನರೇಗಾದಡಿ ಮಹಲ ರೋಜಾದ ಕಾಲುವೆಯ ಹೂಳೆತ್ತುವಾಗ 40 ವರ್ಷದ ದೇವಪ್ಪ ಹೂವಣ್ಣ ಬಿಸಿಲಿನಿಂದಾಗಿ ಕೆಲಸದ ಸ್ಥಳಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದರು. ಸಗರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡು ವೈದ್ಯರು, ಎರಡು ಬಾಟಲಿ ಗ್ಲುಕೋಸ್ ನೀಡಿ, ಇನ್ನು ಮುಂದೆ ಬಿಸಿಲಿನಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿದ್ದರು. ಬಿಸಿಲಿನ ಹೊಡೆತದಿಂದ ಸುಧಾರಿಸಿಕೊಂಡ ದೇವಪ್ಪ ಅವರು ಎರಡ್ಮೂರು ದಿನಗಳ ಬಳಿಕ ಮತ್ತೆ ಕೆಂಡದಂತಹ ಬಿಸಿಲಿನಲ್ಲಿಯೇ ನರೇಗಾ ಕೆಲಸದಲ್ಲಿ ತೊಡಗಿದರು.</p>.<p>ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ಶಹಾಪುರ ತಾಲ್ಲೂಕಿನ ಸಗರ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಲರೋಜಾ ಗ್ರಾಮದಲ್ಲಿ ಬಿಸಿಲಿನಿಂದ ಸಂಭವಿಸಿದ್ದ ಘಟನೆ ಇದು.</p>.<p>ಕಡು ಬಿಸಿಲಿನಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಬಹುತೇಕ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಸರಿಯಾದ ಕುಡಿಯುವ ನೀರು, ನೆರಳು, ತುರ್ತು ಸಂದರ್ಭದಲ್ಲಿ ಬೇಕಾದ ವೈದ್ಯಕೀಯ ವ್ಯವಸ್ಥೆಯೂ ಮಾಡಿಲ್ಲ ಎಂಬುದು ಕೂಲಿ ಕಾರ್ಮಿಕರ ಆರೋಪ.</p>.<p>ವಿಬಿ -ಜಿ- ರಾಮ್ ಜೀ ಹೆಸರಿನ ಮೂಲಕ ಯೋಜನೆಯ ಸ್ವರೂಪ ಬದಲಿಸಲಾಗಿದ್ದು, ಹೊಸ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ಬಾಕಿ ಉಳಿದಿರುವ ಕಾಮಗಾರಿಗಳ ಅಡಿ ಕೆಲಸ ಕೊಡಲಾಗುತ್ತಿದೆ. ಕೆಲವು ದಿನಗಳ ಮಟ್ಟಿಗೆ ನಡೆಯುವ ಕಾಮಗಾರಿಗಳಿಗೆ ಮೂಲಸೌಕರ್ಯಗಳು ಏಕೆ ಎಂಬ ಉದಾಸೀನ ಅಧಿಕಾರಿಗಳು ತೋರುತ್ತಿದ್ದಾರೆ.</p>.<p>‘ಮಹಲರೋಜಾದಲ್ಲಿ ನಡೆ ಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಂತಹ ವ್ಯವಸ್ಥೆ ಮಾಡಿಲ್ಲ. ಹೊಲದಲ್ಲಿನ ಬೋರ್ವೆಲ್ ಚಾಲು ಮಾಡಿಕೊಂಡು ನಾವೇ ಕುಡಿಯುವ ನೀರು ತರುತ್ತಿದ್ದೇವೆ. ಬಿಸಿಲಿನಿಂದಾಗಿ ದೇವಪ್ಪ ಅವರು ಕೆಲಸದ ಸ್ಥಳದಲ್ಲಿಯೇ ತಲೆ ಸುತ್ತಿ ಬಿದ್ದರು. ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಾನೇ ಚಿಕಿತ್ಸೆ ಪಡೆದುಕೊಂಡೆ’ ಎನ್ನುತ್ತಾರೆ ಕೂಲಿ ಕಾರ್ಮಿಕ ದೇವಪ್ಪ.</p>.<p>‘ಬಿಸಿಲು ಜಾಸ್ತಿ ಇರುವುದರಿಂದ ಬೆಳಿಗ್ಗೆ ಬೇಗನೇ ಕೆಲಸಕ್ಕೆ ಬರುತ್ತೇವೆ. ಜೊತೆಯಲ್ಲಿ ನೀರಿನ ಬಾಟಲಿ ತರುತ್ತೇವೆ. ಬಿಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಬೇಗ ಖಾಲಿಯಾಗುತ್ತವೆ. ನೀರು ತರುವುದಕ್ಕಾಗಿಯೇ ಇಬ್ಬರನ್ನು ನಿಯೋಜಿಸಿದ್ದು, ಒಂದೆರಡು ಕಿ.ಮೀ. ದೂರದ ಕೈಪಂಪ್ನಿಂದ ನೀರು ತಂದು ಹಾಕುತ್ತಾರೆ. ಮೆಡಿಕಲ್ ಕಿಟ್ ಕೊಟ್ಟಿಲ್ಲ. ನೀರು, ನೆರಳಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಯರಗೋಳದ ಕೂಲಿ ಕಾರ್ಮಿಕ ಮಹಿಳೆ ಪದ್ಮಾವತಿ.</p>.<p>ಹುಣಸಗಿ ತಾಲ್ಲೂಕಿನ ಬರದೇವನಾಳ ಗ್ರಾ.ಪಂ ವ್ಯಾಪ್ತಿಯ ಕುರೇಕನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೆಲಸ ಆರಂಭಿಸಲಾಗಿದೆ. ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯ ಕಾರ್ಮಿಕರು. ಕೆಂಭಾವಿ ಸಮೀಪದ ಯಕ್ತಾಪುರ್ ಗ್ರಾ.ಪಂ.ವ್ಯಾಪ್ತಿಯ ಆಲಹಾಳ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಕಾರ್ಮಿಕರೇ ಕುಡಿಯುವ ನೀರು ತರುತ್ತಿದ್ದಾರೆ.</p>.<p>ಟಿ.ನಾಗೇಂದ್ರ, ವಾಟ್ಕರ್ ನಾಮದೇವ, ಪವನ ಕುಲಕರ್ಣಿ, ಭೀಮಶೇನರಾವ್ ಕುಲಕರ್ಣಿ, ಅಶೋಕ ಸಾಲವಾಡಗಿ</p>.<div><blockquote>ನರೇಗಾದಡಿ ಕೂಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಅವಕಾಶವಿದೆ. ಅಗತ್ಯ ಸೌಕರ್ಯಗಳನ್ನು ಕೊಡುವಂತೆ ಸೂಚನೆ ಕೊಡಲಾಗಿದೆ </blockquote><span class="attribution">ಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿ ಸಿಇಒ</span></div>. <p><strong>ವೇಗ ಪಡೆಯದ ನರೇಗಾ ಕಾಮಗಾರಿ</strong></p><p>ಸುರಪುರ: ಮನರೇಗಾ ಹೆಸರಿನ ಯೋಜನೆ ಬದಲಿಸಿ ವಿಬಿ -ಜಿ ರಾಮ್ಜಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಹೊಸ ಮಾದರಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ‘ಆದರೆ, ಅಧಿಕೃತವಾಗಿ ಈ ಸುತ್ತೋಲೆ ಬರದಿರುವುದರಿಂದ ಹಳೆ ಮಾದರಿಯಲ್ಲಿಯೇ ಖಾತ್ರಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್ ತಿಳಿಸಿದ್ದಾರೆ.</p><p>ತಾಲ್ಲೂಕಿನ ನಗನೂರ, ತಿಂಥಣಿ, ಆಲ್ದಾಳ, ವಾಗಣಗೇರಾ, ಅರಕೇರಾ ಕೆ., ದೇವಿಕೇರಾ, ಮಾಲಗತ್ತಿ, ಮಲ್ಲಾ ಬಿ., ಯಕ್ತಾಪುರ, ಪೇಠ ಅಮ್ಮಾಪುರ, ದೇವಪುರ, ದೇವತ್ಕಲ್, ಖಾನಾಪುರ ಎಸ್.ಎಚ್., ಕಿರದಳ್ಳಿ ಗ್ರಾಮಗಳಲ್ಲಿ ಬಾಕಿ ಉಳಿದಿರುವ ಹಳೆ ಕೆಲಸಗಳನ್ನು ಮಾಡಿಸಲಾಗುತ್ತಿದೆ.</p><p>‘ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಕೆಲಸದ ಅವಧಿಯನ್ನು ಬೆಳಿಗ್ಗೆ 7 ರಿಂದ 11ರವರೆಗೆ ನಿಗದಿಪಡಿಸಲಾಗಿದೆ. ಗಿಡಗಳು ಇಲ್ಲದ ಸ್ಥಳದಲ್ಲಿ ಟೆಂಟ್ ವ್ಯವಸ್ಥೆ, ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ, ಶಿಶುಪಾಲನಾ ಕೇಂದ್ರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಇಒ ತಿಳಿಸಿದರು.</p><p>ಕಾರ್ಮಿಕರ ಕೊರತೆ: ತಾಲ್ಲೂಕಿನಲ್ಲಿ ಭತ್ತದ ರಾಶಿ ನಡೆಯುತ್ತಿರುವುದರಿಂದ ಮತ್ತು ಮದುವೆ ಸುಗ್ಗಿ ಇರುವುದರಿಂದ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಕೊರತೆ ಎದುರಾಗಿದೆ. ಕಾರ್ಮಿಕರು ಮೇ ಎರಡನೇ ವಾರದಿಂದ ಕೆಲಸಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆಲ್ದಾಳ ಮತ್ತು ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಖಾತ್ರಿ ಯೋಜನೆಯ ಯಾವ ಕಾರ್ಮಿಕರು ಸಾವನ್ನಪ್ಪಿಲ್ಲ ಎಂದು ಇಒ ಬಸವರಾಜ ಸಜ್ಜನ ತಿಳಿಸಿದರು.</p><p><strong>ಪಿಡಿಒ ಹಿತಾಸಕ್ತಿಗೆ ಅನುಗುಣವಾಗಿ ಕಾಮಗಾರಿ</strong></p><p>ಶಹಾಪುರ: ತಾಲ್ಲೂಕಿನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಪಿಡಿಒ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲಿ ಕೆಲಸ ಸಿಗುತ್ತಲಿದೆ. ಪಿಡಿಒ ಹಾಗೂ ಕಾರ್ಮಿಕರ ನಡುವೆ ಕೆಲ ಕಾರ್ಮಿಕರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಅನ್ಯ ಕಾರ್ಮಿಕರು ಕೆಲಸ ನೀಡಲು ಒತ್ತಾಯಿಸಿದಾಗ ಮೇಲಧಿಕಾರಿಗಳತ್ತ ಬೊಟ್ಟು ತೋರಿಸುತ್ತಾರೆ.</p><p>ನಾಗನಟಗಿ, ಸಗರ(ಬಿ), ಹತ್ತಿಗೂಡೂರ ಗ್ರಾಮ ಪಂಚಾಯಿತಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕಡಿಮೆ ಇದೆ. ಆದರೆ, ಕಾರ್ಮಿಕರ ಬೇಡಿಕೆ ಹೆಚ್ಚಾಗಿದ್ದರಿಂದ ಕೆಲಸ ಯಾರಿಗೂ ನೀಡದೆ ಸ್ಥಗಿತಗೊಳಿಸಿದೆ. ಉಳಿದಂತೆ ತಾಲ್ಲೂಕಿನ ಅಣಬಿ, ವನದುರ್ಗ ಮುಂತಾದ ಗ್ರಾ.ಪಂ.ಗಳಲ್ಲಿ ನಿಧಾನಗತಿಯಲ್ಲಿ ಕೆಲಸ ಸಾಗಿದೆ ಎನ್ನುತ್ತಾರೆ ಪಿಡಿಒ ಒಬ್ಬರು.</p><p>ಕಾಮಗಾರಿ ನಡೆಯುವ ಸ್ಥಳದಲ್ಲಿ ಮೂಲ ಸೌಲಭ್ಯ ನೀಡುವಂತೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದೆ. ನೀರು, ನೆರಳಿನ ಆಸರೆ ಇಲ್ಲ. ಕೆಲಸ ನಿರ್ವಹಿಸುವ ಒಬ್ಬ ಕಾರ್ಮಿಕರನ್ನು ನೀರು ಪೂರೈಯಿಸಲು ನೇಮಿಸಿಕೊಂಡಿದ್ದೇವೆ ಎನ್ನುತ್ತಾರೆ ಕಾರ್ಮಿಕರೊಬ್ಬರು.</p><p><strong>ಕುಡಿಯಲು ನೀರು, ನೆರಳಿನ ವ್ಯವಸ್ಥೆಯೂ ಇಲ್ಲ</strong></p><p>ವಡಗೇರಾ: ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ನರೇಗಾದಡಿ ಕೆಬಿಜೆಎನ್ಎಲ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಕೆಲಸದ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇಲ್ಲ. ಸಮೀಪದ ಗಿಡದ ನೆರಳು ಆಶ್ರಯಿಸುತ್ತಿದ್ದಾರೆ.</p><p>‘ಪಂಚಾಯಿತಿಯ ಅಧಿಕಾರಿಗಳು ಕಾರ್ಮಿಕರಿಗಾಗಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಕೂಲಿ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡಿ ಹೈರಾಣಾಗುತ್ತಿದ್ದಾರೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ನಾವೇ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಮನೆಯಿಂದ ನೀರು ತೆಗೆದುಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಕೂಲಿಕಾರ್ಮಿಕ ನಿಂಗಣ್ಣ ಕುರುಕುಂದಾ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಮಲ್ಲಿಕಾರ್ಜುನ ನಾಲವಾರ</em></p>.<p>ಯಾದಗಿರಿ: ಮನರೇಗಾದಡಿ ಮಹಲ ರೋಜಾದ ಕಾಲುವೆಯ ಹೂಳೆತ್ತುವಾಗ 40 ವರ್ಷದ ದೇವಪ್ಪ ಹೂವಣ್ಣ ಬಿಸಿಲಿನಿಂದಾಗಿ ಕೆಲಸದ ಸ್ಥಳಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದರು. ಸಗರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡು ವೈದ್ಯರು, ಎರಡು ಬಾಟಲಿ ಗ್ಲುಕೋಸ್ ನೀಡಿ, ಇನ್ನು ಮುಂದೆ ಬಿಸಿಲಿನಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿದ್ದರು. ಬಿಸಿಲಿನ ಹೊಡೆತದಿಂದ ಸುಧಾರಿಸಿಕೊಂಡ ದೇವಪ್ಪ ಅವರು ಎರಡ್ಮೂರು ದಿನಗಳ ಬಳಿಕ ಮತ್ತೆ ಕೆಂಡದಂತಹ ಬಿಸಿಲಿನಲ್ಲಿಯೇ ನರೇಗಾ ಕೆಲಸದಲ್ಲಿ ತೊಡಗಿದರು.</p>.<p>ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ಶಹಾಪುರ ತಾಲ್ಲೂಕಿನ ಸಗರ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಲರೋಜಾ ಗ್ರಾಮದಲ್ಲಿ ಬಿಸಿಲಿನಿಂದ ಸಂಭವಿಸಿದ್ದ ಘಟನೆ ಇದು.</p>.<p>ಕಡು ಬಿಸಿಲಿನಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಬಹುತೇಕ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಸರಿಯಾದ ಕುಡಿಯುವ ನೀರು, ನೆರಳು, ತುರ್ತು ಸಂದರ್ಭದಲ್ಲಿ ಬೇಕಾದ ವೈದ್ಯಕೀಯ ವ್ಯವಸ್ಥೆಯೂ ಮಾಡಿಲ್ಲ ಎಂಬುದು ಕೂಲಿ ಕಾರ್ಮಿಕರ ಆರೋಪ.</p>.<p>ವಿಬಿ -ಜಿ- ರಾಮ್ ಜೀ ಹೆಸರಿನ ಮೂಲಕ ಯೋಜನೆಯ ಸ್ವರೂಪ ಬದಲಿಸಲಾಗಿದ್ದು, ಹೊಸ ಯೋಜನೆಗಳಿಗೆ ಅನುಮೋದನೆ ನೀಡಿಲ್ಲ. ಬಾಕಿ ಉಳಿದಿರುವ ಕಾಮಗಾರಿಗಳ ಅಡಿ ಕೆಲಸ ಕೊಡಲಾಗುತ್ತಿದೆ. ಕೆಲವು ದಿನಗಳ ಮಟ್ಟಿಗೆ ನಡೆಯುವ ಕಾಮಗಾರಿಗಳಿಗೆ ಮೂಲಸೌಕರ್ಯಗಳು ಏಕೆ ಎಂಬ ಉದಾಸೀನ ಅಧಿಕಾರಿಗಳು ತೋರುತ್ತಿದ್ದಾರೆ.</p>.<p>‘ಮಹಲರೋಜಾದಲ್ಲಿ ನಡೆ ಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆಯಂತಹ ವ್ಯವಸ್ಥೆ ಮಾಡಿಲ್ಲ. ಹೊಲದಲ್ಲಿನ ಬೋರ್ವೆಲ್ ಚಾಲು ಮಾಡಿಕೊಂಡು ನಾವೇ ಕುಡಿಯುವ ನೀರು ತರುತ್ತಿದ್ದೇವೆ. ಬಿಸಿಲಿನಿಂದಾಗಿ ದೇವಪ್ಪ ಅವರು ಕೆಲಸದ ಸ್ಥಳದಲ್ಲಿಯೇ ತಲೆ ಸುತ್ತಿ ಬಿದ್ದರು. ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಾನೇ ಚಿಕಿತ್ಸೆ ಪಡೆದುಕೊಂಡೆ’ ಎನ್ನುತ್ತಾರೆ ಕೂಲಿ ಕಾರ್ಮಿಕ ದೇವಪ್ಪ.</p>.<p>‘ಬಿಸಿಲು ಜಾಸ್ತಿ ಇರುವುದರಿಂದ ಬೆಳಿಗ್ಗೆ ಬೇಗನೇ ಕೆಲಸಕ್ಕೆ ಬರುತ್ತೇವೆ. ಜೊತೆಯಲ್ಲಿ ನೀರಿನ ಬಾಟಲಿ ತರುತ್ತೇವೆ. ಬಿಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಬೇಗ ಖಾಲಿಯಾಗುತ್ತವೆ. ನೀರು ತರುವುದಕ್ಕಾಗಿಯೇ ಇಬ್ಬರನ್ನು ನಿಯೋಜಿಸಿದ್ದು, ಒಂದೆರಡು ಕಿ.ಮೀ. ದೂರದ ಕೈಪಂಪ್ನಿಂದ ನೀರು ತಂದು ಹಾಕುತ್ತಾರೆ. ಮೆಡಿಕಲ್ ಕಿಟ್ ಕೊಟ್ಟಿಲ್ಲ. ನೀರು, ನೆರಳಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಯರಗೋಳದ ಕೂಲಿ ಕಾರ್ಮಿಕ ಮಹಿಳೆ ಪದ್ಮಾವತಿ.</p>.<p>ಹುಣಸಗಿ ತಾಲ್ಲೂಕಿನ ಬರದೇವನಾಳ ಗ್ರಾ.ಪಂ ವ್ಯಾಪ್ತಿಯ ಕುರೇಕನಾಳ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೆಲಸ ಆರಂಭಿಸಲಾಗಿದೆ. ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಸ್ಥಳೀಯ ಕಾರ್ಮಿಕರು. ಕೆಂಭಾವಿ ಸಮೀಪದ ಯಕ್ತಾಪುರ್ ಗ್ರಾ.ಪಂ.ವ್ಯಾಪ್ತಿಯ ಆಲಹಾಳ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಕಾರ್ಮಿಕರೇ ಕುಡಿಯುವ ನೀರು ತರುತ್ತಿದ್ದಾರೆ.</p>.<p>ಟಿ.ನಾಗೇಂದ್ರ, ವಾಟ್ಕರ್ ನಾಮದೇವ, ಪವನ ಕುಲಕರ್ಣಿ, ಭೀಮಶೇನರಾವ್ ಕುಲಕರ್ಣಿ, ಅಶೋಕ ಸಾಲವಾಡಗಿ</p>.<div><blockquote>ನರೇಗಾದಡಿ ಕೂಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವ ಅವಕಾಶವಿದೆ. ಅಗತ್ಯ ಸೌಕರ್ಯಗಳನ್ನು ಕೊಡುವಂತೆ ಸೂಚನೆ ಕೊಡಲಾಗಿದೆ </blockquote><span class="attribution">ಲವೀಶ್ ಒರಡಿಯಾ ಜಿಲ್ಲಾ ಪಂಚಾಯಿತಿ ಸಿಇಒ</span></div>. <p><strong>ವೇಗ ಪಡೆಯದ ನರೇಗಾ ಕಾಮಗಾರಿ</strong></p><p>ಸುರಪುರ: ಮನರೇಗಾ ಹೆಸರಿನ ಯೋಜನೆ ಬದಲಿಸಿ ವಿಬಿ -ಜಿ ರಾಮ್ಜಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಹೊಸ ಮಾದರಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿದೆ. ‘ಆದರೆ, ಅಧಿಕೃತವಾಗಿ ಈ ಸುತ್ತೋಲೆ ಬರದಿರುವುದರಿಂದ ಹಳೆ ಮಾದರಿಯಲ್ಲಿಯೇ ಖಾತ್ರಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್ ತಿಳಿಸಿದ್ದಾರೆ.</p><p>ತಾಲ್ಲೂಕಿನ ನಗನೂರ, ತಿಂಥಣಿ, ಆಲ್ದಾಳ, ವಾಗಣಗೇರಾ, ಅರಕೇರಾ ಕೆ., ದೇವಿಕೇರಾ, ಮಾಲಗತ್ತಿ, ಮಲ್ಲಾ ಬಿ., ಯಕ್ತಾಪುರ, ಪೇಠ ಅಮ್ಮಾಪುರ, ದೇವಪುರ, ದೇವತ್ಕಲ್, ಖಾನಾಪುರ ಎಸ್.ಎಚ್., ಕಿರದಳ್ಳಿ ಗ್ರಾಮಗಳಲ್ಲಿ ಬಾಕಿ ಉಳಿದಿರುವ ಹಳೆ ಕೆಲಸಗಳನ್ನು ಮಾಡಿಸಲಾಗುತ್ತಿದೆ.</p><p>‘ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಕೆಲಸದ ಅವಧಿಯನ್ನು ಬೆಳಿಗ್ಗೆ 7 ರಿಂದ 11ರವರೆಗೆ ನಿಗದಿಪಡಿಸಲಾಗಿದೆ. ಗಿಡಗಳು ಇಲ್ಲದ ಸ್ಥಳದಲ್ಲಿ ಟೆಂಟ್ ವ್ಯವಸ್ಥೆ, ಎಲ್ಲೆಡೆ ಕುಡಿಯುವ ನೀರಿನ ವ್ಯವಸ್ಥೆ, ಶಿಶುಪಾಲನಾ ಕೇಂದ್ರ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಇಒ ತಿಳಿಸಿದರು.</p><p>ಕಾರ್ಮಿಕರ ಕೊರತೆ: ತಾಲ್ಲೂಕಿನಲ್ಲಿ ಭತ್ತದ ರಾಶಿ ನಡೆಯುತ್ತಿರುವುದರಿಂದ ಮತ್ತು ಮದುವೆ ಸುಗ್ಗಿ ಇರುವುದರಿಂದ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಕೊರತೆ ಎದುರಾಗಿದೆ. ಕಾರ್ಮಿಕರು ಮೇ ಎರಡನೇ ವಾರದಿಂದ ಕೆಲಸಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಆಲ್ದಾಳ ಮತ್ತು ಕೆಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಖಾತ್ರಿ ಯೋಜನೆಯ ಯಾವ ಕಾರ್ಮಿಕರು ಸಾವನ್ನಪ್ಪಿಲ್ಲ ಎಂದು ಇಒ ಬಸವರಾಜ ಸಜ್ಜನ ತಿಳಿಸಿದರು.</p><p><strong>ಪಿಡಿಒ ಹಿತಾಸಕ್ತಿಗೆ ಅನುಗುಣವಾಗಿ ಕಾಮಗಾರಿ</strong></p><p>ಶಹಾಪುರ: ತಾಲ್ಲೂಕಿನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಪಿಡಿಒ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲಿ ಕೆಲಸ ಸಿಗುತ್ತಲಿದೆ. ಪಿಡಿಒ ಹಾಗೂ ಕಾರ್ಮಿಕರ ನಡುವೆ ಕೆಲ ಕಾರ್ಮಿಕರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಅನ್ಯ ಕಾರ್ಮಿಕರು ಕೆಲಸ ನೀಡಲು ಒತ್ತಾಯಿಸಿದಾಗ ಮೇಲಧಿಕಾರಿಗಳತ್ತ ಬೊಟ್ಟು ತೋರಿಸುತ್ತಾರೆ.</p><p>ನಾಗನಟಗಿ, ಸಗರ(ಬಿ), ಹತ್ತಿಗೂಡೂರ ಗ್ರಾಮ ಪಂಚಾಯಿತಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕಡಿಮೆ ಇದೆ. ಆದರೆ, ಕಾರ್ಮಿಕರ ಬೇಡಿಕೆ ಹೆಚ್ಚಾಗಿದ್ದರಿಂದ ಕೆಲಸ ಯಾರಿಗೂ ನೀಡದೆ ಸ್ಥಗಿತಗೊಳಿಸಿದೆ. ಉಳಿದಂತೆ ತಾಲ್ಲೂಕಿನ ಅಣಬಿ, ವನದುರ್ಗ ಮುಂತಾದ ಗ್ರಾ.ಪಂ.ಗಳಲ್ಲಿ ನಿಧಾನಗತಿಯಲ್ಲಿ ಕೆಲಸ ಸಾಗಿದೆ ಎನ್ನುತ್ತಾರೆ ಪಿಡಿಒ ಒಬ್ಬರು.</p><p>ಕಾಮಗಾರಿ ನಡೆಯುವ ಸ್ಥಳದಲ್ಲಿ ಮೂಲ ಸೌಲಭ್ಯ ನೀಡುವಂತೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದೆ. ನೀರು, ನೆರಳಿನ ಆಸರೆ ಇಲ್ಲ. ಕೆಲಸ ನಿರ್ವಹಿಸುವ ಒಬ್ಬ ಕಾರ್ಮಿಕರನ್ನು ನೀರು ಪೂರೈಯಿಸಲು ನೇಮಿಸಿಕೊಂಡಿದ್ದೇವೆ ಎನ್ನುತ್ತಾರೆ ಕಾರ್ಮಿಕರೊಬ್ಬರು.</p><p><strong>ಕುಡಿಯಲು ನೀರು, ನೆರಳಿನ ವ್ಯವಸ್ಥೆಯೂ ಇಲ್ಲ</strong></p><p>ವಡಗೇರಾ: ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ನರೇಗಾದಡಿ ಕೆಬಿಜೆಎನ್ಎಲ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಕೆಲಸದ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇಲ್ಲ. ಸಮೀಪದ ಗಿಡದ ನೆರಳು ಆಶ್ರಯಿಸುತ್ತಿದ್ದಾರೆ.</p><p>‘ಪಂಚಾಯಿತಿಯ ಅಧಿಕಾರಿಗಳು ಕಾರ್ಮಿಕರಿಗಾಗಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಕೂಲಿ ಕಾರ್ಮಿಕರು ಬಿಸಿಲಿನಲ್ಲಿ ಕೆಲಸ ಮಾಡಿ ಹೈರಾಣಾಗುತ್ತಿದ್ದಾರೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ನಾವೇ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಮನೆಯಿಂದ ನೀರು ತೆಗೆದುಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಕೂಲಿಕಾರ್ಮಿಕ ನಿಂಗಣ್ಣ ಕುರುಕುಂದಾ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>