<p>ಯಾದಗಿರಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗರ್ಭಿಣಿಯರ ದಾಖಲಾತಿ ಮತ್ತು ಅದರ ಫಲಿತಾಂಶಗಳ ಸಂಪೂರ್ಣ ವಿವರವನ್ನು ಹತ್ತು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಶಿಶು ಮರಣ, ನಿರ್ಜೀವ ಜನನ ಹಾಗೂ ಗರ್ಭಪಾತಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವೈದ್ಯಾಧಿಕಾರಿಗಳು ಪ್ರತಿ ತಿಂಗಳು ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಮೂರನೇ ತ್ರೈಮಾಸಿಕ ಮತ್ತು ನಿರೀಕ್ಷಿತ ಹೆರಿಗೆ ದಿನಾಂಕದ ಮೊದಲು 7 ದಿನಗಳಲ್ಲಿ ಆರೋಗ್ಯ ಪರಿಶೀಲಿಸಲು ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಹೇಳಿದರು.</p>.<p>‘ಆಶಾ ಕಾರ್ಯಕರ್ತೆಯರು ಗೃಹ ಆಧಾರಿತ ನವಜಾತ ಶಿಶು ಆರೈಕೆಯನ್ನು (ಎಚ್ಬಿಎನ್ಸಿ) ಕಡ್ಡಾಯವಾಗಿ ಮಾಡಬೇಕು. ಮನೆ ಭೇಟಿ ನೀಡಿ ನವಜಾತ ಶಿಶುಗಳ ಆರೋಗ್ಯ ತಪಾಸಣೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.</p>.<p>‘ವೈದ್ಯಾಧಿಕಾರಿಗಳು ಪ್ರತಿವಾರ ವಾರದ ಸಭೆಯನ್ನು ಹಮ್ಮಿಕೊಂಡು ಆಶಾ ಕಾರ್ಯಕರ್ತೆಯರ ದಿನಚರಿಯನ್ನು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.</p>.<p>‘2025-26ನೇ ಸಾಲಿನಲ್ಲಿ 25,612 ಹೆರಿಗೆಗಳಾಗಿದ್ದು, ಅದರಲ್ಲಿ 102 ಶಿಶುಮರಣಗಳಾಗಿವೆ. 91 ಶಿಶುಮರಣಗಳು ಬೇರೆ ಜಿಲ್ಲೆಯಲ್ಲಿ ಸಂಭವಿಸಿರುತ್ತವೆ. ಗುತ್ತಿಬಸವೇಶ್ವರ, ದೇವರಗೋನಾಳ, ಕಲದೇವನಹಳ್ಳಿ, ಬಳಿಚಕ್ರ, ಗಾಜರಕೋಟ, ಕೋಟಗೇರಾ ಮತ್ತು ಮಾದ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಶುಮರಣ ಶೂನ್ಯವಾಗಿದೆ’ ಎಂದರು.</p>.<p>‘ಶೂನ್ಯ ಮತ್ತು ಅತಿ ಕಡಿಮೆ ಶಿಶುಮರಣ ಸಂಭವಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡಬೇಕು. 2025-26ನೇ ಸಾಲಿನಲ್ಲಿ 117 ನಿರ್ಜೀವ ಜನನ ಸಂಭವಿಸಿರುತ್ತವೆ. ಶಹಾಪುರದಲ್ಲಿ 32, ಸುರಪುರದಲ್ಲಿ 70 ಮತ್ತು ಯಾದಗಿರಿಯಲ್ಲಿ 15 ನಿರ್ಜೀವ ಜನನವಾಗಿದೆ’ ಎಂದು ಹೇಳಿದರು.</p>.<p>‘ಮಾರ್ಚ್ ತಿಂಗಳಲ್ಲಿ 36 ಗರ್ಭಪಾತ ಸಂಭವಿಸಿವೆ. ಶಹಾಪುರದಲ್ಲಿ 14, ಸುರಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 11 ಪ್ರಕರಣಗಳು ಕಂಡುಬಂದಿವೆ’ ಎಂದರು.</p>.<p>‘ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾದ ಹೆರಿಗೆಗಳ ದಾಖಲಾತಿಯನ್ನು ಆರ್ಸಿಎಚ್ ಪೋರ್ಟಲ್ನಲ್ಲಿ ಹೆರಿಗೆ ಕಾಲಂನಲ್ಲಿ ನಮೂದು ಮಾಡಿಲ್ಲ. ಬದಲಿಗೆ ನೇರವಾಗಿ ಮಕ್ಕಳ ನೋಂದಣಿ ಕಾಲಂನಲ್ಲಿ ನಮೂದಿಸಿದ್ದರಿಂದ ಗರ್ಭಿಣಿಯರ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ’ ಎಂದು ಹೇಳಿದರು.</p>.<p>ಸಭೆಯಲ್ಲಿ ಡಿಎಚ್ಒ ಡಾ. ಮಹೇಶ್ ಬಿರಾದಾರ, ಜಿಲ್ಲಾ ಆರ್ಸಿಎಚ್ಒ ಡಾ.ಕೆ.ಮಲ್ಲಪ್ಪ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260501-30-1018899576</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗರ್ಭಿಣಿಯರ ದಾಖಲಾತಿ ಮತ್ತು ಅದರ ಫಲಿತಾಂಶಗಳ ಸಂಪೂರ್ಣ ವಿವರವನ್ನು ಹತ್ತು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಶಿಶು ಮರಣ, ನಿರ್ಜೀವ ಜನನ ಹಾಗೂ ಗರ್ಭಪಾತಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವೈದ್ಯಾಧಿಕಾರಿಗಳು ಪ್ರತಿ ತಿಂಗಳು ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಮೂರನೇ ತ್ರೈಮಾಸಿಕ ಮತ್ತು ನಿರೀಕ್ಷಿತ ಹೆರಿಗೆ ದಿನಾಂಕದ ಮೊದಲು 7 ದಿನಗಳಲ್ಲಿ ಆರೋಗ್ಯ ಪರಿಶೀಲಿಸಲು ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಹೇಳಿದರು.</p>.<p>‘ಆಶಾ ಕಾರ್ಯಕರ್ತೆಯರು ಗೃಹ ಆಧಾರಿತ ನವಜಾತ ಶಿಶು ಆರೈಕೆಯನ್ನು (ಎಚ್ಬಿಎನ್ಸಿ) ಕಡ್ಡಾಯವಾಗಿ ಮಾಡಬೇಕು. ಮನೆ ಭೇಟಿ ನೀಡಿ ನವಜಾತ ಶಿಶುಗಳ ಆರೋಗ್ಯ ತಪಾಸಣೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.</p>.<p>‘ವೈದ್ಯಾಧಿಕಾರಿಗಳು ಪ್ರತಿವಾರ ವಾರದ ಸಭೆಯನ್ನು ಹಮ್ಮಿಕೊಂಡು ಆಶಾ ಕಾರ್ಯಕರ್ತೆಯರ ದಿನಚರಿಯನ್ನು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.</p>.<p>‘2025-26ನೇ ಸಾಲಿನಲ್ಲಿ 25,612 ಹೆರಿಗೆಗಳಾಗಿದ್ದು, ಅದರಲ್ಲಿ 102 ಶಿಶುಮರಣಗಳಾಗಿವೆ. 91 ಶಿಶುಮರಣಗಳು ಬೇರೆ ಜಿಲ್ಲೆಯಲ್ಲಿ ಸಂಭವಿಸಿರುತ್ತವೆ. ಗುತ್ತಿಬಸವೇಶ್ವರ, ದೇವರಗೋನಾಳ, ಕಲದೇವನಹಳ್ಳಿ, ಬಳಿಚಕ್ರ, ಗಾಜರಕೋಟ, ಕೋಟಗೇರಾ ಮತ್ತು ಮಾದ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಶುಮರಣ ಶೂನ್ಯವಾಗಿದೆ’ ಎಂದರು.</p>.<p>‘ಶೂನ್ಯ ಮತ್ತು ಅತಿ ಕಡಿಮೆ ಶಿಶುಮರಣ ಸಂಭವಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡಬೇಕು. 2025-26ನೇ ಸಾಲಿನಲ್ಲಿ 117 ನಿರ್ಜೀವ ಜನನ ಸಂಭವಿಸಿರುತ್ತವೆ. ಶಹಾಪುರದಲ್ಲಿ 32, ಸುರಪುರದಲ್ಲಿ 70 ಮತ್ತು ಯಾದಗಿರಿಯಲ್ಲಿ 15 ನಿರ್ಜೀವ ಜನನವಾಗಿದೆ’ ಎಂದು ಹೇಳಿದರು.</p>.<p>‘ಮಾರ್ಚ್ ತಿಂಗಳಲ್ಲಿ 36 ಗರ್ಭಪಾತ ಸಂಭವಿಸಿವೆ. ಶಹಾಪುರದಲ್ಲಿ 14, ಸುರಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 11 ಪ್ರಕರಣಗಳು ಕಂಡುಬಂದಿವೆ’ ಎಂದರು.</p>.<p>‘ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾದ ಹೆರಿಗೆಗಳ ದಾಖಲಾತಿಯನ್ನು ಆರ್ಸಿಎಚ್ ಪೋರ್ಟಲ್ನಲ್ಲಿ ಹೆರಿಗೆ ಕಾಲಂನಲ್ಲಿ ನಮೂದು ಮಾಡಿಲ್ಲ. ಬದಲಿಗೆ ನೇರವಾಗಿ ಮಕ್ಕಳ ನೋಂದಣಿ ಕಾಲಂನಲ್ಲಿ ನಮೂದಿಸಿದ್ದರಿಂದ ಗರ್ಭಿಣಿಯರ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ’ ಎಂದು ಹೇಳಿದರು.</p>.<p>ಸಭೆಯಲ್ಲಿ ಡಿಎಚ್ಒ ಡಾ. ಮಹೇಶ್ ಬಿರಾದಾರ, ಜಿಲ್ಲಾ ಆರ್ಸಿಎಚ್ಒ ಡಾ.ಕೆ.ಮಲ್ಲಪ್ಪ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260501-30-1018899576</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>