<p><strong>ಸುರಪುರ:</strong> ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ರವಿ ಯಳವರ ಯೋಗ ಮತ್ತು ಮಲ್ಲಕಂಬದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವುದು ಅನುಕರಣೀಯ.</p>.<p>ಪೇಠ ಅಮ್ಮಾಪುರದ ಸಗರನಾಡು ಶಾಲೆಯಲ್ಲಿ ಎಸ್ಎಸ್ಎಲ್ಸಿ ವರೆಗೆ ಅಧ್ಯಯನ. ಅನಾರೋಗ್ಯ ಪೀಡಿತರಾದ ರವಿ ಚಿಕಿತ್ಸೆ ಪಡೆಯಲು ಯಾದಗಿರಿ ನಗರದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ತಂದೆಯ ಬಳಿ ಬಂದರು.</p>.<p>ಆರೋಗ್ಯ ಸುಧಾರಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹಣ ಇರಲಿಲ್ಲ. ಆಗ ನೆರವಿಗೆ ಬಂದಿದ್ದು ಯೋಗ. ಸಾಮಾಜಿಕ ಜಾಲತಾಣಗಳು ಮತ್ತು ಪುಸ್ತಕಗಳ ಮಾಹಿತಿಯಿಂದ ಸ್ವಯಂ ಯೋಗ ಕಲಿಯತೊಡಗಿದರು. ಕ್ರಮೇಣ ಆರೋಗ್ಯ ಸುಧಾರಿಸಿ ಸದೃಢರಾದರು.</p>.<p>ತಾನು ಕಲಿತ ಯೋಗವನ್ನು ಇತರರಿಗೂ ಕಲಿಸತೊಡಗಿದರು. ದಿನಾಲೂ ಯಾದಗಿರಿ ನಗರದ ಲುಂಬಿನಿ ವನದಲ್ಲಿ ಬೆಳಗಿನ ಸಮಯ ಉಚಿತವಾಗಿ ಯೋಗ ಕಲಿಸತೊಡಗಿದರು. ಕಳೆದ 4 ವರ್ಷಗಳಲ್ಲಿ 200 ಕ್ಕೂ ಹೆಚ್ಚು ಜನರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಪ್ರತಿದಿನ ಬೆಳಿಗ್ಗೆ ಎರಡು ಗಂಟೆ ಯೋಗಾಭ್ಯಾಸ ಮಾಡುತ್ತಾರೆ.</p>.<p>ಕ್ರಮೇಣ ಜನರೇ ರವಿ ಅವರಿಗೆ ಅಷ್ಟಿಷ್ಟು ಹಣ ನೀಡತೊಡಗಿದರು. ಕಾಲೇಜು ಕಲಿ ಎಂದು ಸಲಹೆ ನೀಡಿದರು. ಯಾದಗಿರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯು ಪಾಸು ಮಾಡಿ ಈಗ ಖಾಸಗಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾರೆ.</p>.<p>ಯೋಗ ಮಾಡುತ್ತಿರುವಾಗ ಒಮ್ಮೆ ಸ್ನೇಹಿತರು ನೆಲದ ಮೇಲೆ ಯೋಗ ಏನು ಮಹಾ ಮಾಡುತ್ತಿಯಾ, ಕಂಬದ ಮೇಲೆ ಮಾಡು ಎಂದು ಸವಾಲು ಹಾಕುತ್ತಾರೆ. ಅದನ್ನೇ ಗಂಭಿರವಾಗಿ ಪರಿಗಣಿಸಿದ ರವಿ ಮತ್ತೆ ಸಾಮಾಜಿಕ ಜಾಲತಾಣಗಳ ನೆರವಿನಿಂದ ಮಲ್ಲಕಂಬ ಕಲಿಯತೊಡಗುತ್ತಾರೆ.</p>.<p>ಲುಂಬಿನಿ ವನದ ಗಿಡದ ಬಡ್ಡಿಯ ಆಧಾರದಲ್ಲಿ ಮಲ್ಲಕಂಬ ಅಭ್ಯಾಸ ಮಾಡತೊಡಗುತ್ತಾರೆ. ಗಿಡದ ಟಿಸಿಲುಗಳು ತಗುಲಿ ಗಾಯಗಳಾಗುತ್ತವೆ. ಸ್ನೇಹಿತರು ವ್ಯಂಗವಾಡುತ್ತಾರೆ. ಆದರೂ ಛಲ ಬಿಡದೆ ಅಭ್ಯಸಿಸಿ ಈಗ ರಾಜ್ಯದ ಮುಂಚೂಣಿಯ ಮಲ್ಲಕಂಬ ತರಬೇತುದಾರರಾಗಿದ್ದಾರೆ.</p>.<p>ಪೇಠ ಅಮ್ಮಾಪುರದಲ್ಲಿ ವಾರಕ್ಕೆ ಒಂದು ಸಲ ಮಲ್ಲಕಂಬ ತರಬೇತಿ ನೀಡುತ್ತಾರೆ. ಯಾದಗಿರಿಯಲ್ಲಿ ನಿತ್ಯವೂ ಯೋಗ ಮತ್ತು ಮಲ್ಲಕಂಬ ತರಬೇತಿ ನೀಡುತ್ತಾರೆ. ಈಗ ಕಲಿಸಲು ಸ್ವಲ್ಪ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಬಡವರು, ಅನಾಥರಿಗೆ ಉಚಿತವಾಗಿ ಹೇಳಿಕೊಡುತ್ತಾರೆ.</p>.<p>ಯೋಗದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಆಟಗಾರರಾಗಿದ್ದಾರೆ. ಓರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರ 6 ಜನ ಶಿಷ್ಯರು ಸರ್ಕಾರಿ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಯೋಗದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ.</p>.<p>ಇವರ ಮಲ್ಲಕಂಬ ತಂಡ ರಾಜ್ಯದಲ್ಲಿ ಹೆಸರು ಮಾಡುತ್ತಿದೆ. ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿ ಭೇಶ್ ಎನಿಸಿಕೊಂಡಿದೆ. ಹಂಪಿ ಉತ್ಸವದಲ್ಲಿ ತಂಡದ ಮಲ್ಲಕಂಬ ಸಾಹಸ ವೀಕ್ಷಿಸಿ ರಾಜ್ಯಪಾಲ ಥಾವರಚಂದ್ ಗೆಹಲೊತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಲ್ಲಕಂಬದ ಪಿರಾಮಿಡ್, ಬಜರಂಗಿ, ದಸರಂಗಿ, ನಟರಾಜ, ಬಗಲಬಂಡಿ, ಪಿರಕಿ ಇತರ ಭಂಗಿಗಳಲ್ಲಿ ತಂಡದ ಆಟಗಾರರ ಪ್ರದರ್ಶನ ಮೆಚ್ಚುಗೆ ಪಡೆದಿದೆ.</p>.<div><blockquote>ಮಲ್ಲಕಂಬ ಮತ್ತು ಯೋಗದಿಂದ ತಾಳ್ಮೆ ಶಕ್ತಿ, ಆತ್ಮಸ್ಥೆರ್ಯ ಹೆಚ್ಚುತ್ತದೆ. ರೋಗ, ಕೀಳರಿಮೆ ದೂರವಾಗುತ್ತವೆ </blockquote><span class="attribution">ರವಿ ಯಳವರ, ಮಲ್ಲಕಂಬ ತರಬೇತುದಾರ</span></div>.<p><strong>ಹಾಲೋಕುಳಿ ಜಾತ್ರೆ ಮತ್ತು ಮಲ್ಲಕಂಬ</strong></p><p>ಸುರಪುರದ ವೇಣುಗೋಪಾಲಸ್ವಾಮಿ ಜಾತ್ರೆಯ ಸಮಯದಲ್ಲಿ ನಡೆಯುವ ಸ್ತಂಭಾರೋಹಣ ಮಲ್ಲಕಂಬ ಕ್ರೀಡೆಯ ಭಾಗ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.</p><p>ಅರಸರ ಕಾಲದಲ್ಲಿ ಸುರಪುರದಲ್ಲಿ ಗರಡಿ ಮನೆ, ಮಲ್ಲಕಂಬಕ್ಕೆ ಹೆಚ್ಚು ಪ್ರೋತ್ಸಾಹ ಇತ್ತು ಎಂಬ ಉಲ್ಲೇಖಗಳಿವೆ.</p><p>ರಾಮಾಯಣ ಕಾಲದಲ್ಲಿ ಅಂಜನೇಯ ಮಲ್ಲಕಂಬದ ಮೇಲೆ ವ್ಯಾಯಾಮ ಮಾಡುತ್ತಿದ್ದನಂತೆ. ನಳ, ನೀಲ, ವಾಲಿ, ಸುಗ್ರೀವರು ಮಲ್ಲಕಂಬ ಪಟುಗಳಾಗಿದ್ದರು. ಅಲ್ಲಿಂದಲೇ ಮಲ್ಲಕಂಬ ಪ್ರಚಲಿತಕ್ಕೆ ಬಂದಿದೆ ಎನ್ನಲಾಗುತ್ತಿದೆ.</p><p><strong>ಮಲ್ಲಕಂಬ ಖರೀದಿಸಲು ಗಾರೆ ಕೆಲಸ</strong></p><p>ರವಿ ಗಿಡದ ಮೇಲೆ ಮಲ್ಲಕಂಬ ಅಭ್ಯಾಸ ಮಾಡುತ್ತಿದ್ದರು. ಮಲ್ಲಕಂಬ ಖರೀದಿಸಲು ಹಣ ಇರಲಿಲ್ಲ. ಯಾರೂ ನೆರವು ನೀಡಲಿಲ್ಲ.</p><p>ಬೆಂಗಳೂರಿನಲ್ಲಿ 6 ತಿಂಗಳು ಗಾರೆ ಕೆಲಸ ಮಾಡಿ ಹಣ ಸಂಪಾದಿಸಿ ₹50 ಸಾವಿರ ವೆಚ್ಚದಲ್ಲಿ ಮಲ್ಲಕಂಬ ಖರೀದಿಸುತ್ತಾರೆ. ಅದೇ ಮಲ್ಲಕಂಬದ ಮೇಲೆ ಈಗ ತರಬೇತಿ ನೀಡುತ್ತಿದ್ದಾರೆ. ಮಲ್ಲಕಂಬದ ಸಹೋದರ ಕ್ರೀಡೆಯಾದ ರೋಪಿಂಗ್ನಲ್ಲೂ ರವಿ ಪರಿಣತಿ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ:</strong> ತಾಲ್ಲೂಕಿನ ಪೇಠ ಅಮ್ಮಾಪುರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ರವಿ ಯಳವರ ಯೋಗ ಮತ್ತು ಮಲ್ಲಕಂಬದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವುದು ಅನುಕರಣೀಯ.</p>.<p>ಪೇಠ ಅಮ್ಮಾಪುರದ ಸಗರನಾಡು ಶಾಲೆಯಲ್ಲಿ ಎಸ್ಎಸ್ಎಲ್ಸಿ ವರೆಗೆ ಅಧ್ಯಯನ. ಅನಾರೋಗ್ಯ ಪೀಡಿತರಾದ ರವಿ ಚಿಕಿತ್ಸೆ ಪಡೆಯಲು ಯಾದಗಿರಿ ನಗರದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ತಂದೆಯ ಬಳಿ ಬಂದರು.</p>.<p>ಆರೋಗ್ಯ ಸುಧಾರಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹಣ ಇರಲಿಲ್ಲ. ಆಗ ನೆರವಿಗೆ ಬಂದಿದ್ದು ಯೋಗ. ಸಾಮಾಜಿಕ ಜಾಲತಾಣಗಳು ಮತ್ತು ಪುಸ್ತಕಗಳ ಮಾಹಿತಿಯಿಂದ ಸ್ವಯಂ ಯೋಗ ಕಲಿಯತೊಡಗಿದರು. ಕ್ರಮೇಣ ಆರೋಗ್ಯ ಸುಧಾರಿಸಿ ಸದೃಢರಾದರು.</p>.<p>ತಾನು ಕಲಿತ ಯೋಗವನ್ನು ಇತರರಿಗೂ ಕಲಿಸತೊಡಗಿದರು. ದಿನಾಲೂ ಯಾದಗಿರಿ ನಗರದ ಲುಂಬಿನಿ ವನದಲ್ಲಿ ಬೆಳಗಿನ ಸಮಯ ಉಚಿತವಾಗಿ ಯೋಗ ಕಲಿಸತೊಡಗಿದರು. ಕಳೆದ 4 ವರ್ಷಗಳಲ್ಲಿ 200 ಕ್ಕೂ ಹೆಚ್ಚು ಜನರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಪ್ರತಿದಿನ ಬೆಳಿಗ್ಗೆ ಎರಡು ಗಂಟೆ ಯೋಗಾಭ್ಯಾಸ ಮಾಡುತ್ತಾರೆ.</p>.<p>ಕ್ರಮೇಣ ಜನರೇ ರವಿ ಅವರಿಗೆ ಅಷ್ಟಿಷ್ಟು ಹಣ ನೀಡತೊಡಗಿದರು. ಕಾಲೇಜು ಕಲಿ ಎಂದು ಸಲಹೆ ನೀಡಿದರು. ಯಾದಗಿರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯು ಪಾಸು ಮಾಡಿ ಈಗ ಖಾಸಗಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದಾರೆ.</p>.<p>ಯೋಗ ಮಾಡುತ್ತಿರುವಾಗ ಒಮ್ಮೆ ಸ್ನೇಹಿತರು ನೆಲದ ಮೇಲೆ ಯೋಗ ಏನು ಮಹಾ ಮಾಡುತ್ತಿಯಾ, ಕಂಬದ ಮೇಲೆ ಮಾಡು ಎಂದು ಸವಾಲು ಹಾಕುತ್ತಾರೆ. ಅದನ್ನೇ ಗಂಭಿರವಾಗಿ ಪರಿಗಣಿಸಿದ ರವಿ ಮತ್ತೆ ಸಾಮಾಜಿಕ ಜಾಲತಾಣಗಳ ನೆರವಿನಿಂದ ಮಲ್ಲಕಂಬ ಕಲಿಯತೊಡಗುತ್ತಾರೆ.</p>.<p>ಲುಂಬಿನಿ ವನದ ಗಿಡದ ಬಡ್ಡಿಯ ಆಧಾರದಲ್ಲಿ ಮಲ್ಲಕಂಬ ಅಭ್ಯಾಸ ಮಾಡತೊಡಗುತ್ತಾರೆ. ಗಿಡದ ಟಿಸಿಲುಗಳು ತಗುಲಿ ಗಾಯಗಳಾಗುತ್ತವೆ. ಸ್ನೇಹಿತರು ವ್ಯಂಗವಾಡುತ್ತಾರೆ. ಆದರೂ ಛಲ ಬಿಡದೆ ಅಭ್ಯಸಿಸಿ ಈಗ ರಾಜ್ಯದ ಮುಂಚೂಣಿಯ ಮಲ್ಲಕಂಬ ತರಬೇತುದಾರರಾಗಿದ್ದಾರೆ.</p>.<p>ಪೇಠ ಅಮ್ಮಾಪುರದಲ್ಲಿ ವಾರಕ್ಕೆ ಒಂದು ಸಲ ಮಲ್ಲಕಂಬ ತರಬೇತಿ ನೀಡುತ್ತಾರೆ. ಯಾದಗಿರಿಯಲ್ಲಿ ನಿತ್ಯವೂ ಯೋಗ ಮತ್ತು ಮಲ್ಲಕಂಬ ತರಬೇತಿ ನೀಡುತ್ತಾರೆ. ಈಗ ಕಲಿಸಲು ಸ್ವಲ್ಪ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಬಡವರು, ಅನಾಥರಿಗೆ ಉಚಿತವಾಗಿ ಹೇಳಿಕೊಡುತ್ತಾರೆ.</p>.<p>ಯೋಗದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಆಟಗಾರರಾಗಿದ್ದಾರೆ. ಓರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರ 6 ಜನ ಶಿಷ್ಯರು ಸರ್ಕಾರಿ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಯೋಗದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದಾರೆ.</p>.<p>ಇವರ ಮಲ್ಲಕಂಬ ತಂಡ ರಾಜ್ಯದಲ್ಲಿ ಹೆಸರು ಮಾಡುತ್ತಿದೆ. ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿ ಭೇಶ್ ಎನಿಸಿಕೊಂಡಿದೆ. ಹಂಪಿ ಉತ್ಸವದಲ್ಲಿ ತಂಡದ ಮಲ್ಲಕಂಬ ಸಾಹಸ ವೀಕ್ಷಿಸಿ ರಾಜ್ಯಪಾಲ ಥಾವರಚಂದ್ ಗೆಹಲೊತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಲ್ಲಕಂಬದ ಪಿರಾಮಿಡ್, ಬಜರಂಗಿ, ದಸರಂಗಿ, ನಟರಾಜ, ಬಗಲಬಂಡಿ, ಪಿರಕಿ ಇತರ ಭಂಗಿಗಳಲ್ಲಿ ತಂಡದ ಆಟಗಾರರ ಪ್ರದರ್ಶನ ಮೆಚ್ಚುಗೆ ಪಡೆದಿದೆ.</p>.<div><blockquote>ಮಲ್ಲಕಂಬ ಮತ್ತು ಯೋಗದಿಂದ ತಾಳ್ಮೆ ಶಕ್ತಿ, ಆತ್ಮಸ್ಥೆರ್ಯ ಹೆಚ್ಚುತ್ತದೆ. ರೋಗ, ಕೀಳರಿಮೆ ದೂರವಾಗುತ್ತವೆ </blockquote><span class="attribution">ರವಿ ಯಳವರ, ಮಲ್ಲಕಂಬ ತರಬೇತುದಾರ</span></div>.<p><strong>ಹಾಲೋಕುಳಿ ಜಾತ್ರೆ ಮತ್ತು ಮಲ್ಲಕಂಬ</strong></p><p>ಸುರಪುರದ ವೇಣುಗೋಪಾಲಸ್ವಾಮಿ ಜಾತ್ರೆಯ ಸಮಯದಲ್ಲಿ ನಡೆಯುವ ಸ್ತಂಭಾರೋಹಣ ಮಲ್ಲಕಂಬ ಕ್ರೀಡೆಯ ಭಾಗ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.</p><p>ಅರಸರ ಕಾಲದಲ್ಲಿ ಸುರಪುರದಲ್ಲಿ ಗರಡಿ ಮನೆ, ಮಲ್ಲಕಂಬಕ್ಕೆ ಹೆಚ್ಚು ಪ್ರೋತ್ಸಾಹ ಇತ್ತು ಎಂಬ ಉಲ್ಲೇಖಗಳಿವೆ.</p><p>ರಾಮಾಯಣ ಕಾಲದಲ್ಲಿ ಅಂಜನೇಯ ಮಲ್ಲಕಂಬದ ಮೇಲೆ ವ್ಯಾಯಾಮ ಮಾಡುತ್ತಿದ್ದನಂತೆ. ನಳ, ನೀಲ, ವಾಲಿ, ಸುಗ್ರೀವರು ಮಲ್ಲಕಂಬ ಪಟುಗಳಾಗಿದ್ದರು. ಅಲ್ಲಿಂದಲೇ ಮಲ್ಲಕಂಬ ಪ್ರಚಲಿತಕ್ಕೆ ಬಂದಿದೆ ಎನ್ನಲಾಗುತ್ತಿದೆ.</p><p><strong>ಮಲ್ಲಕಂಬ ಖರೀದಿಸಲು ಗಾರೆ ಕೆಲಸ</strong></p><p>ರವಿ ಗಿಡದ ಮೇಲೆ ಮಲ್ಲಕಂಬ ಅಭ್ಯಾಸ ಮಾಡುತ್ತಿದ್ದರು. ಮಲ್ಲಕಂಬ ಖರೀದಿಸಲು ಹಣ ಇರಲಿಲ್ಲ. ಯಾರೂ ನೆರವು ನೀಡಲಿಲ್ಲ.</p><p>ಬೆಂಗಳೂರಿನಲ್ಲಿ 6 ತಿಂಗಳು ಗಾರೆ ಕೆಲಸ ಮಾಡಿ ಹಣ ಸಂಪಾದಿಸಿ ₹50 ಸಾವಿರ ವೆಚ್ಚದಲ್ಲಿ ಮಲ್ಲಕಂಬ ಖರೀದಿಸುತ್ತಾರೆ. ಅದೇ ಮಲ್ಲಕಂಬದ ಮೇಲೆ ಈಗ ತರಬೇತಿ ನೀಡುತ್ತಿದ್ದಾರೆ. ಮಲ್ಲಕಂಬದ ಸಹೋದರ ಕ್ರೀಡೆಯಾದ ರೋಪಿಂಗ್ನಲ್ಲೂ ರವಿ ಪರಿಣತಿ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>