<p>ಯಾದಗಿರಿ: ‘ಗುರುಗಳಲ್ಲಿ ಪ್ರಾರ್ಥಿಸ ಬೇಕಾಗಿರುವುದು ಅನುಗ್ರಹ. ಗುರುಕೃಪೆ ನಮ್ಮ ಮೇಲೆ ಹರಿಯಿತೆಂದರೆ ಸಕಲವೂ ಲಭಿಸುತ್ತದೆ’ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.</p>.<p>ಶ್ರೀಮದ್ ಉತ್ತರಾದಿ ಮಠ ಹಾಗೂ ವಿಶ್ವ ಮಾಧ್ವ ಮಹಾ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಉತ್ತರಾದಿ ಮಠ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಭಾನುವಾರ ನಡೆದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>‘ಶಾಸ್ತ್ರಗಳು, ವಿದ್ಯೆಯನ್ನು ಪಡೆಯುವುದು ದೊಡ್ಡ ಸಾಧನೆ ಆಗಲಾರದು. ವಿದ್ಯೆಯ ಜೊತೆಗೆ ನಮ್ರತೆಯೂ ಇರಬೇಕು. ವಿದ್ಯೆಯು ವಿನಯದಿಂದ ಭೂಷಿತವಾದಾಗ ಮಾತ್ರ ಅದು ಪರಿಪೂರ್ಣವಾಗಿ ನಮಗೆ ದೊರಕುತ್ತದೆ’ ಎಂದರು.</p>.<p>ಏಳು ದಿನ ನಡೆದ ಶಿಬಿರದಲ್ಲಿ ದೇವರ ನಾಮ, ದೇವರ ಸ್ತೋತ್ರಗಳು, ಹರಿಕಥಾಮೃತಸಾರ, ತ್ರಿಕಾಲ ಸಂಧ್ಯಾವಂದನೆ, ಸೂಳಾದಿಗಳು, ನಿತ್ಯ ನೈಮೆತಿಕ ವಿಚಾರ, ಯತಿಗಳ ದಾಸರ ಪರಿಚಯ ಸೇರಿ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ತಿಳಿಸಿ ಕೊಡಲಾಯಿತು.</p>.<p>ಮಠದ ವ್ಯವಸ್ಥಾಪಕ ರಾಘವೇಂದ್ರ ಜೋಶಿ ಅವರು ಕಲಿಕಾರ್ಥಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದರು. ಪತ್ರಕ ರ್ತರಾದ ದಿನೇಶ ವಿಸಿ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-30-1094779176</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ‘ಗುರುಗಳಲ್ಲಿ ಪ್ರಾರ್ಥಿಸ ಬೇಕಾಗಿರುವುದು ಅನುಗ್ರಹ. ಗುರುಕೃಪೆ ನಮ್ಮ ಮೇಲೆ ಹರಿಯಿತೆಂದರೆ ಸಕಲವೂ ಲಭಿಸುತ್ತದೆ’ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.</p>.<p>ಶ್ರೀಮದ್ ಉತ್ತರಾದಿ ಮಠ ಹಾಗೂ ವಿಶ್ವ ಮಾಧ್ವ ಮಹಾ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಉತ್ತರಾದಿ ಮಠ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಭಾನುವಾರ ನಡೆದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>‘ಶಾಸ್ತ್ರಗಳು, ವಿದ್ಯೆಯನ್ನು ಪಡೆಯುವುದು ದೊಡ್ಡ ಸಾಧನೆ ಆಗಲಾರದು. ವಿದ್ಯೆಯ ಜೊತೆಗೆ ನಮ್ರತೆಯೂ ಇರಬೇಕು. ವಿದ್ಯೆಯು ವಿನಯದಿಂದ ಭೂಷಿತವಾದಾಗ ಮಾತ್ರ ಅದು ಪರಿಪೂರ್ಣವಾಗಿ ನಮಗೆ ದೊರಕುತ್ತದೆ’ ಎಂದರು.</p>.<p>ಏಳು ದಿನ ನಡೆದ ಶಿಬಿರದಲ್ಲಿ ದೇವರ ನಾಮ, ದೇವರ ಸ್ತೋತ್ರಗಳು, ಹರಿಕಥಾಮೃತಸಾರ, ತ್ರಿಕಾಲ ಸಂಧ್ಯಾವಂದನೆ, ಸೂಳಾದಿಗಳು, ನಿತ್ಯ ನೈಮೆತಿಕ ವಿಚಾರ, ಯತಿಗಳ ದಾಸರ ಪರಿಚಯ ಸೇರಿ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ತಿಳಿಸಿ ಕೊಡಲಾಯಿತು.</p>.<p>ಮಠದ ವ್ಯವಸ್ಥಾಪಕ ರಾಘವೇಂದ್ರ ಜೋಶಿ ಅವರು ಕಲಿಕಾರ್ಥಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದರು. ಪತ್ರಕ ರ್ತರಾದ ದಿನೇಶ ವಿಸಿ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-30-1094779176</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>