<p><strong>ಯಾದಗಿರಿ</strong>: ಉತ್ತರಪ್ರದೇಶದ ದೀಪು ರಾಮು ಕಿಲವಾನ್ ತನ್ನ ಕುಟುಂಬ ಪೋಷಣೆಗಾಗಿ ಯಾದಗಿರಿಗೆ ಬಂದು 10 ದಿನಗಳಷ್ಟೇ ಆಗಿತ್ತು. ರಾಮಸಮುದ್ರದಲ್ಲಿ ವಾಸವಿದ್ದು ಜ್ಯೂಸ್ ಮಾರುತ್ತಿದ್ದ. ಅಂದು ಬೆಳಿಗ್ಗೆ 9ರ ಸುಮಾರಿಗೆ ಜ್ಯೂಸ್ ಗಾಡಿ ತಳ್ಳಿಕೊಂಡು ಹೋಗುತ್ತಿದ್ದ. ಹಿಂದಿನಿಂದ ವೇಗವಾಗಿ ಬಂದ ಕಾರು ಆತನಿಗೆ ಡಿಕ್ಕಿ ಹೊಡೆದಿದ್ದರಿಂದ ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟ.</p>.<p>ಒಲ್ಲದ ಮನಸ್ಸಿನಿಂದ ಒಬ್ಬನೇ ಮಗನನ್ನು ದುಡಿಯಲು ಕಳುಹಿಸಿದ್ದ ದೀಪು ಪೋಷಕರು ಈಗಲೂ ನೆನೆದು ಕಣ್ಣೀರ ಧಾರೆಯೇ ಹರಿಸುತ್ತಿದ್ದಾರೆ. ದೀಪು ಅವರನ್ನು ದುಡಿಯಲು ಕರೆದುಕೊಂಡು ಬಂದಿದ್ದ ಆತನ ಸಂಬಂಧಿ ಅಮರೇಶ ಪಾಸ್ವಾನ್, ಅಂದಿನ ಅಪಘಾತದಿಂದ ಹೆದರಿಕೊಂಡು ತಿಂಗಳ ಸಂಬಳವೂ ಬಿಟ್ಟು ಸ್ವಗ್ರಾಮದಲ್ಲಿಯೇ ದುಡಿಯುತ್ತಿದ್ದಾರೆ.</p>.<p>ಇದು, ರಾಷ್ಟ್ರೀಯ ಹೆದ್ದಾರಿ– 150ರ ಮುಂಡರಗಿ ಸಮೀಪದ ಅಪಘಾತ ವಲಯದಲ್ಲಿ (ಬ್ಲಾಕ್ಸ್ಪಾಟ್) ಸಂಭವಿಸಿದ್ದ ದಾರುಣ ಅಪಘಾತ ಒಂದರ ಖೇದನೀಯ ಘಟನೆಯ ಪರಿಣಾಮ. ಇಂತಹ ಹಲವು ಶೋಕದ ಘಟನೆಗಳಿಗೆ ಜಿಲ್ಲೆಯಲ್ಲಿನ ಬ್ಲಾಕ್ಸ್ಪಾಟ್ಗಳು ಕಾರಣ ಆಗುತ್ತಿವೆ. ಅಪಘಾತ ವಲಯಗಳಲ್ಲಿ ಸಾವು–ನೋವಿನ ಪ್ರಮಾಣ ಇನ್ನಷ್ಟು ಇಳಿಕೆಯಾಗಬೇಕಿದೆ.</p>.<p>ಜಿಲ್ಲೆಯ ಮೂಲಕ 109 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೆ, 758 ಕಿ.ಮೀ. ರಾಜ್ಯ ಹೆದ್ದಾರಿ, 1,239 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾಗೂ 3,800 ಕಿ.ಮೀ. ಗ್ರಾಮೀಣ ರಸ್ತೆ ಜಾಲ ಹಬ್ಬಿಕೊಂಡಿದೆ. ಈ ರಸ್ತೆಗಳ ಪೈಕಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಅತಿಹೆಚ್ಚು ಅಪಘಾತ ಆಗುವಂತಹ 5 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗಿದೆ. ಹಾಗಂತ, ಉಳಿದ ರಸ್ತೆಗಳು ಅಪಘಾತಗಳಿಂದ ಮುಕ್ತವಾಗಿಲ್ಲ.</p>.<p>ಎನ್ಎಚ್–150ರ ಮುಂಡರಗಿ, ಯಾದಗಿರಿ– ಚಿತ್ತಾಪುರ ರಸ್ತೆಯ ಖಾಸಗಿ ಶಾಲೆ ಸಮೀಪ, ಬಳಿಚಕ್ರ ಕ್ರಾಸ್, ಕರಿಬೆಟ್ಟ ಕ್ರಾಸ್ ಹಾಗೂ ಎನ್ಎಚ್–150ಎ ಮದರಕಿ ಕ್ರಾಸ್ ಜಿಲ್ಲೆಯ ಬ್ಲಾಕ್ಸ್ಪಾಟ್ಗಳಾಗಿವೆ. ಈ ಬ್ಲಾಕ್ಸ್ಪಾಟ್ಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. 56 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ.</p>.<p>ಕಳೆದ ಮೂರು ವರ್ಷಗಳಲ್ಲಿ ಎನ್ಎಚ್–150ರ ಮುಂಡರಗಿ ಬಳಿ 8 ಅಪಘಾತಗಳು ನಡೆದು, ಮೂವರು ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ. ಚಿತ್ತಾಪುರ ರಸ್ತೆಯ ಖಾಸಗಿ ಶಾಲೆ ಬಳಿ ಸಂಭವಿಸಿದ 9 ಅಪಘಾತಗಳಿಂದ 6 ಮಂದಿ ಸಾವನ್ನಪ್ಪಿ 7 ಜನ ಗಾಯಗೊಂಡಿದ್ದಾರೆ ಎನ್ನುತ್ತವೆ ಪಿಡಬ್ಲ್ಯುಡಿ ನೀಡಿದ ಅಂಕಿಅಂಶಗಳು.</p>.<div><blockquote>ರು ಬ್ಲಾಕ್ಸ್ಪಾಟ್ಗಳ ಸಂಖ್ಯೆಯನ್ನು 5ಕ್ಕೆ ತಗ್ಗಿಸಲಾಗಿದೆ. ಅಪಘಾತ ವಲಯಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, ವೇಗ ತಡೆಯುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ</blockquote><span class="attribution">ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<div><blockquote>ಪೊಲೀಸ್ ಇಲಾಖೆ ಗುರುತಿಸಲಾದ ಜಿಲ್ಲೆಯ ಬ್ಲಾಕ್ಸ್ಪಾಟ್ಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಕೆ ಮಾಡಿ, ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ</blockquote><span class="attribution">ಪರಶುರಾಮಪಿಡಬ್ಯುಡಿ ಇಇ</span></div>.<p>ಬಳಿಚಕ್ರ ಕ್ರಾಸ್ನಲ್ಲಿನ 8 ಪ್ರಕರಣಗಳಿಂದ 7 ಮಂದಿ ಸಾವು, 16 ಮಂದಿಗೆ ಗಾಯವಾಗಿದೆ. ಕರಿಬೆಟ್ಟ ಕ್ರಾಸ್ನಲ್ಲಿನ 7 ಅಪಘಾತಗಳಲ್ಲಿ 7 ಮಂದಿ ಸಾವನ್ನಪ್ಪಿ, 6 ಮಂದಿಗೆ ಗಾಯಗಳಾಗಿವೆ. ಮದ್ರಕಿ ಕ್ರಾಸ್ನಲ್ಲಿನ 8 ಅಪಘಾತಗಳಿಂದ ಮೂವರು ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ.</p>.<p><strong>ಅಪಘಾತ ವಲಯ ಗುರುತಿಸುವುದು ಹೇಗೆ?</strong></p><p>ಸುಮಾರು 500 ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಂಭವಿಸಿದ 5 ರಸ್ತೆಗಳ ಅಪಘಾತಗಳಲ್ಲಿ ಮರಣಗಳು/ ಗಂಭೀರ ಗಾಯಗಳನ್ನು ಒಳಗೊಂಡ ಅಥವಾ 10 ಸಾವುಗಳನ್ನು ಸಂಭವಿಸಿದ ಸ್ಥಳವನ್ನು ಅಪಘಾತ ವಲಯ (ಬ್ಲಾಕ್ಸ್ಪಾಟ್) ಎಂದು ಗುರುತಿಸಲಾಗುತ್ತದೆ.</p><p>ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ನಡೆಸಿ ಯಾವ ಕಾರಣಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಅಧ್ಯಯನ ಮಾಡುತ್ತವೆ. ಜೊತೆಗೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳಿಗೂ ಮುಂದಾಗುತ್ತವೆ.</p>.<p>‘ಅತಿಯಾದ ವೇಗದ ಚಾಲನೆ, ನಿರ್ಲಕ್ಷ್ಯ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಎಚ್ಚರಿಕೆ ಇಲ್ಲದೆ ಓವರ್ಟೇಕ್, ಅಪಾಯಕಾರಿ ತಿರುವುಗಳು, ರಸ್ತೆಗಳಲ್ಲಿ ಪ್ರಾಣಿಗಳ ಓಡಾಟ, ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು, ಸಂಚಾರ ನಿಯಮಗಳ ಪಾಲಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ’ ಎನ್ನುತ್ತಾರೆ ಪೊಲೀಸರು.</p>.<p><strong>521 ಪ್ರಕರಣ; 479 ಸಾವು</strong></p><p>2023ರಿಂದ 2026ರ ಏಪ್ರಿಲ್ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 521 ಅಪಘಾತ ಪ್ರಕರಣಗಳು ಸಂಭವಿಸಿದ್ದು, ಅವುಗಳಲ್ಲಿ 479 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರು ಅಂಗವಿಕಲರೂ ಆಗಿದ್ದಾರೆ.</p><p>2023ರಲ್ಲಿ 158 ಅಪಘಾತಗಳಿಂದ 170 ಮೃತಪಟ್ಟರೆ, 2024ರಲ್ಲಿ 157 ಅಪಘತಾಗಳಲ್ಲಿ ಸಹ 170 ಪ್ರಾಣ ಕಳೆದುಕೊಂಡಿದ್ದರು. 2025ರಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗಿ 168 ಪ್ರಕರಣಗಳಿಂದ 189 ಮಂದಿ ಸಾವನ್ನಪ್ಪಿದ್ದಾರೆ. 2026ರಲ್ಲಿ 38 ಅಪಘಾತಗಳು ಸಂಭವಿಸಿ 50 ಜನರು ಮರಣ ಹೊಂದಿದ್ದಾರೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿಅಂಶಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260420-30-1474934342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಉತ್ತರಪ್ರದೇಶದ ದೀಪು ರಾಮು ಕಿಲವಾನ್ ತನ್ನ ಕುಟುಂಬ ಪೋಷಣೆಗಾಗಿ ಯಾದಗಿರಿಗೆ ಬಂದು 10 ದಿನಗಳಷ್ಟೇ ಆಗಿತ್ತು. ರಾಮಸಮುದ್ರದಲ್ಲಿ ವಾಸವಿದ್ದು ಜ್ಯೂಸ್ ಮಾರುತ್ತಿದ್ದ. ಅಂದು ಬೆಳಿಗ್ಗೆ 9ರ ಸುಮಾರಿಗೆ ಜ್ಯೂಸ್ ಗಾಡಿ ತಳ್ಳಿಕೊಂಡು ಹೋಗುತ್ತಿದ್ದ. ಹಿಂದಿನಿಂದ ವೇಗವಾಗಿ ಬಂದ ಕಾರು ಆತನಿಗೆ ಡಿಕ್ಕಿ ಹೊಡೆದಿದ್ದರಿಂದ ಆಸ್ಪತ್ರೆಯ ಮಾರ್ಗದಲ್ಲಿ ಮೃತಪಟ್ಟ.</p>.<p>ಒಲ್ಲದ ಮನಸ್ಸಿನಿಂದ ಒಬ್ಬನೇ ಮಗನನ್ನು ದುಡಿಯಲು ಕಳುಹಿಸಿದ್ದ ದೀಪು ಪೋಷಕರು ಈಗಲೂ ನೆನೆದು ಕಣ್ಣೀರ ಧಾರೆಯೇ ಹರಿಸುತ್ತಿದ್ದಾರೆ. ದೀಪು ಅವರನ್ನು ದುಡಿಯಲು ಕರೆದುಕೊಂಡು ಬಂದಿದ್ದ ಆತನ ಸಂಬಂಧಿ ಅಮರೇಶ ಪಾಸ್ವಾನ್, ಅಂದಿನ ಅಪಘಾತದಿಂದ ಹೆದರಿಕೊಂಡು ತಿಂಗಳ ಸಂಬಳವೂ ಬಿಟ್ಟು ಸ್ವಗ್ರಾಮದಲ್ಲಿಯೇ ದುಡಿಯುತ್ತಿದ್ದಾರೆ.</p>.<p>ಇದು, ರಾಷ್ಟ್ರೀಯ ಹೆದ್ದಾರಿ– 150ರ ಮುಂಡರಗಿ ಸಮೀಪದ ಅಪಘಾತ ವಲಯದಲ್ಲಿ (ಬ್ಲಾಕ್ಸ್ಪಾಟ್) ಸಂಭವಿಸಿದ್ದ ದಾರುಣ ಅಪಘಾತ ಒಂದರ ಖೇದನೀಯ ಘಟನೆಯ ಪರಿಣಾಮ. ಇಂತಹ ಹಲವು ಶೋಕದ ಘಟನೆಗಳಿಗೆ ಜಿಲ್ಲೆಯಲ್ಲಿನ ಬ್ಲಾಕ್ಸ್ಪಾಟ್ಗಳು ಕಾರಣ ಆಗುತ್ತಿವೆ. ಅಪಘಾತ ವಲಯಗಳಲ್ಲಿ ಸಾವು–ನೋವಿನ ಪ್ರಮಾಣ ಇನ್ನಷ್ಟು ಇಳಿಕೆಯಾಗಬೇಕಿದೆ.</p>.<p>ಜಿಲ್ಲೆಯ ಮೂಲಕ 109 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರೆ, 758 ಕಿ.ಮೀ. ರಾಜ್ಯ ಹೆದ್ದಾರಿ, 1,239 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾಗೂ 3,800 ಕಿ.ಮೀ. ಗ್ರಾಮೀಣ ರಸ್ತೆ ಜಾಲ ಹಬ್ಬಿಕೊಂಡಿದೆ. ಈ ರಸ್ತೆಗಳ ಪೈಕಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಅತಿಹೆಚ್ಚು ಅಪಘಾತ ಆಗುವಂತಹ 5 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗಿದೆ. ಹಾಗಂತ, ಉಳಿದ ರಸ್ತೆಗಳು ಅಪಘಾತಗಳಿಂದ ಮುಕ್ತವಾಗಿಲ್ಲ.</p>.<p>ಎನ್ಎಚ್–150ರ ಮುಂಡರಗಿ, ಯಾದಗಿರಿ– ಚಿತ್ತಾಪುರ ರಸ್ತೆಯ ಖಾಸಗಿ ಶಾಲೆ ಸಮೀಪ, ಬಳಿಚಕ್ರ ಕ್ರಾಸ್, ಕರಿಬೆಟ್ಟ ಕ್ರಾಸ್ ಹಾಗೂ ಎನ್ಎಚ್–150ಎ ಮದರಕಿ ಕ್ರಾಸ್ ಜಿಲ್ಲೆಯ ಬ್ಲಾಕ್ಸ್ಪಾಟ್ಗಳಾಗಿವೆ. ಈ ಬ್ಲಾಕ್ಸ್ಪಾಟ್ಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. 56 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ.</p>.<p>ಕಳೆದ ಮೂರು ವರ್ಷಗಳಲ್ಲಿ ಎನ್ಎಚ್–150ರ ಮುಂಡರಗಿ ಬಳಿ 8 ಅಪಘಾತಗಳು ನಡೆದು, ಮೂವರು ಸಾವನ್ನಪ್ಪಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ. ಚಿತ್ತಾಪುರ ರಸ್ತೆಯ ಖಾಸಗಿ ಶಾಲೆ ಬಳಿ ಸಂಭವಿಸಿದ 9 ಅಪಘಾತಗಳಿಂದ 6 ಮಂದಿ ಸಾವನ್ನಪ್ಪಿ 7 ಜನ ಗಾಯಗೊಂಡಿದ್ದಾರೆ ಎನ್ನುತ್ತವೆ ಪಿಡಬ್ಲ್ಯುಡಿ ನೀಡಿದ ಅಂಕಿಅಂಶಗಳು.</p>.<div><blockquote>ರು ಬ್ಲಾಕ್ಸ್ಪಾಟ್ಗಳ ಸಂಖ್ಯೆಯನ್ನು 5ಕ್ಕೆ ತಗ್ಗಿಸಲಾಗಿದೆ. ಅಪಘಾತ ವಲಯಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, ವೇಗ ತಡೆಯುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ</blockquote><span class="attribution">ಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<div><blockquote>ಪೊಲೀಸ್ ಇಲಾಖೆ ಗುರುತಿಸಲಾದ ಜಿಲ್ಲೆಯ ಬ್ಲಾಕ್ಸ್ಪಾಟ್ಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಕೆ ಮಾಡಿ, ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ</blockquote><span class="attribution">ಪರಶುರಾಮಪಿಡಬ್ಯುಡಿ ಇಇ</span></div>.<p>ಬಳಿಚಕ್ರ ಕ್ರಾಸ್ನಲ್ಲಿನ 8 ಪ್ರಕರಣಗಳಿಂದ 7 ಮಂದಿ ಸಾವು, 16 ಮಂದಿಗೆ ಗಾಯವಾಗಿದೆ. ಕರಿಬೆಟ್ಟ ಕ್ರಾಸ್ನಲ್ಲಿನ 7 ಅಪಘಾತಗಳಲ್ಲಿ 7 ಮಂದಿ ಸಾವನ್ನಪ್ಪಿ, 6 ಮಂದಿಗೆ ಗಾಯಗಳಾಗಿವೆ. ಮದ್ರಕಿ ಕ್ರಾಸ್ನಲ್ಲಿನ 8 ಅಪಘಾತಗಳಿಂದ ಮೂವರು ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ.</p>.<p><strong>ಅಪಘಾತ ವಲಯ ಗುರುತಿಸುವುದು ಹೇಗೆ?</strong></p><p>ಸುಮಾರು 500 ಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಂಭವಿಸಿದ 5 ರಸ್ತೆಗಳ ಅಪಘಾತಗಳಲ್ಲಿ ಮರಣಗಳು/ ಗಂಭೀರ ಗಾಯಗಳನ್ನು ಒಳಗೊಂಡ ಅಥವಾ 10 ಸಾವುಗಳನ್ನು ಸಂಭವಿಸಿದ ಸ್ಥಳವನ್ನು ಅಪಘಾತ ವಲಯ (ಬ್ಲಾಕ್ಸ್ಪಾಟ್) ಎಂದು ಗುರುತಿಸಲಾಗುತ್ತದೆ.</p><p>ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ನಡೆಸಿ ಯಾವ ಕಾರಣಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಅಧ್ಯಯನ ಮಾಡುತ್ತವೆ. ಜೊತೆಗೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳಿಗೂ ಮುಂದಾಗುತ್ತವೆ.</p>.<p>‘ಅತಿಯಾದ ವೇಗದ ಚಾಲನೆ, ನಿರ್ಲಕ್ಷ್ಯ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಎಚ್ಚರಿಕೆ ಇಲ್ಲದೆ ಓವರ್ಟೇಕ್, ಅಪಾಯಕಾರಿ ತಿರುವುಗಳು, ರಸ್ತೆಗಳಲ್ಲಿ ಪ್ರಾಣಿಗಳ ಓಡಾಟ, ರಸ್ತೆಗಳಲ್ಲಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು, ಸಂಚಾರ ನಿಯಮಗಳ ಪಾಲಿಸದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ’ ಎನ್ನುತ್ತಾರೆ ಪೊಲೀಸರು.</p>.<p><strong>521 ಪ್ರಕರಣ; 479 ಸಾವು</strong></p><p>2023ರಿಂದ 2026ರ ಏಪ್ರಿಲ್ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 521 ಅಪಘಾತ ಪ್ರಕರಣಗಳು ಸಂಭವಿಸಿದ್ದು, ಅವುಗಳಲ್ಲಿ 479 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರು ಅಂಗವಿಕಲರೂ ಆಗಿದ್ದಾರೆ.</p><p>2023ರಲ್ಲಿ 158 ಅಪಘಾತಗಳಿಂದ 170 ಮೃತಪಟ್ಟರೆ, 2024ರಲ್ಲಿ 157 ಅಪಘತಾಗಳಲ್ಲಿ ಸಹ 170 ಪ್ರಾಣ ಕಳೆದುಕೊಂಡಿದ್ದರು. 2025ರಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗಿ 168 ಪ್ರಕರಣಗಳಿಂದ 189 ಮಂದಿ ಸಾವನ್ನಪ್ಪಿದ್ದಾರೆ. 2026ರಲ್ಲಿ 38 ಅಪಘಾತಗಳು ಸಂಭವಿಸಿ 50 ಜನರು ಮರಣ ಹೊಂದಿದ್ದಾರೆ ಎನ್ನುತ್ತವೆ ಪೊಲೀಸ್ ಇಲಾಖೆಯ ಅಂಕಿಅಂಶಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260420-30-1474934342</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>