<p>ಯಾದಗಿರಿ: ನಗರದ ಸ್ಟೇಷನ್ ಏರಿಯಾದ ಶಿವಾಜಿ ಯುವ ಗರ್ಜನೆ ಸೇನೆ ವತಿಯಿಂದ ಶುಕ್ರವಾರ ಸರ್ಕಾರಿ ಪದವಿ ಕಾಲೇಜು ಸಮೀಪದ ಹನುಮಾನ ದೇವಸ್ಥಾನದಿಂದ ಭವಾನಿ ಮಂದಿರದವರೆಗೆ ಸುಮಾರು 14 ಅಡಿ ಎತ್ತರದ ಶ್ರೀರಾಮ ಮೂರ್ತಿ, ಅಂಬಾಭವಾನಿ ಹಾಗೂ ಶಿವಾಜಿಯ ಅದ್ದೂರಿ ಶೋಭಾಯಾತ್ರೆ ಜರುಗಿತು.</p>.<p>ಹನುಮಾನ ಮಂದಿರದಲ್ಲಿ ಅಲಂಕೃತ ವಾಹನಗಳಲ್ಲಿ ಇರಿಸಿದ್ದ ಬಿಲ್ಲುದಾರಿ ಶ್ರೀರಾಮನ ಮೂರ್ತಿ, ಹೂಗಳಿಂದ ಸಿಂಗರಿಸಲಾದ ಅಂಬಾಭವಾನಿ ಭಾವಚಿತ್ರ ಹಾಗೂ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.</p>.<p>ಶೋಭಾಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ‘ಜೈಶ್ರೀರಾಮ’, ‘ರಾಮಚಂದ್ರ ಪ್ರಭು ಮಹಾರಾಜಕೀ ಜೈ’, ‘ಜಾನಕಿರಾಮನಿಗೆ ಜೈ’... ಘೋಷಣೆಗಳು ಮೊಳಗಿದವು. ಡಿ.ಜೆ. ಸಂಗೀತದಲ್ಲಿ ಶ್ರೀರಾಮನ ಕುರಿತ ಹಾಡುಗಳನ್ನು ಬಿತ್ತರಿಸುತ್ತಿದ್ದಂತೆಯೇ ಕೇಸರಿ ಶಾಲು, ಕೇಸರಿ ಧ್ವಜಗಳನ್ನು ಹಿಡಿದಿದ್ದ ಯುವಕರು ಕುಣಿದು ಕುಪ್ಪಳಿಸಿದರು.</p>.<p>‘ಜೈ ಶ್ರೀರಾಮ್’, ‘ಜೈ ಶ್ರೀರಾಮ್ ರಘುಪತಿ ರಾಘವ ಜೈ ಶ್ರೀರಾಮ್’, ‘ಹುಟ್ಟಿದ್ದಾರೆ ಕನ್ನಡ ನಾಡಲ್ಲಿ’ ಸೇರಿದಂತೆ ಕನ್ನಡ, ಹಿಂದಿ, ಮರಾಠಿ ಡಿ.ಜೆ. ರಿಮಿಕ್ಸ್ ಹಾಡುಗಳಿಗೆ ಯುವಕರು ಮೈ ಸಡಿಲ ಮಾಡಿ ಕುಣಿದು ಸಂಭ್ರಮಿಸಿದರು. ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತಿದ್ದು ಕಂಡುಬಂತು.</p>.<p>ಹನುಮಾನ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ನೇತಾಜಿ ಸುಭಾಷ ಚಂದ್ರಬೋಸ್ ವೃತ್ತ, ಶಾಸ್ತ್ರಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ ಮಾರ್ಗವಾಗಿ ಭವಾನಿ ಮಂದಿರ ತಲುಪಿ ಸಂಪನ್ನಗೊಂಡಿತು.</p>.<p>ಶಿವಾಜಿ ಯುವ ಗರ್ಜನೆ ಸೇನೆಯ ಮುಖಂಡರಾದ ಲಕ್ಷ್ಮಣ ಮಡ್ಡಿ, ರಾಜು ಚವ್ಹಾಣ, ಚಿಂಟು ದಳಪತಿ, ಭಗವಾನ್, ಆನಂದ ಸಾಗರ್, ಸುಮಿತ್, ಬಜರಂಗದಳದ ಶಿವು, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಲಕ್ಷ್ಮಿಪುತ್ರ ಮಾಲಿಪಾಟೀಲ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<p>ಶೋಭಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ರಸ್ತೆಯ ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳು ಬೇರೊಂದು ರಸ್ತೆಗಳಲ್ಲಿ ತೆರಳುವಂತೆ ಸೂಚಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-30-387860871</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ನಗರದ ಸ್ಟೇಷನ್ ಏರಿಯಾದ ಶಿವಾಜಿ ಯುವ ಗರ್ಜನೆ ಸೇನೆ ವತಿಯಿಂದ ಶುಕ್ರವಾರ ಸರ್ಕಾರಿ ಪದವಿ ಕಾಲೇಜು ಸಮೀಪದ ಹನುಮಾನ ದೇವಸ್ಥಾನದಿಂದ ಭವಾನಿ ಮಂದಿರದವರೆಗೆ ಸುಮಾರು 14 ಅಡಿ ಎತ್ತರದ ಶ್ರೀರಾಮ ಮೂರ್ತಿ, ಅಂಬಾಭವಾನಿ ಹಾಗೂ ಶಿವಾಜಿಯ ಅದ್ದೂರಿ ಶೋಭಾಯಾತ್ರೆ ಜರುಗಿತು.</p>.<p>ಹನುಮಾನ ಮಂದಿರದಲ್ಲಿ ಅಲಂಕೃತ ವಾಹನಗಳಲ್ಲಿ ಇರಿಸಿದ್ದ ಬಿಲ್ಲುದಾರಿ ಶ್ರೀರಾಮನ ಮೂರ್ತಿ, ಹೂಗಳಿಂದ ಸಿಂಗರಿಸಲಾದ ಅಂಬಾಭವಾನಿ ಭಾವಚಿತ್ರ ಹಾಗೂ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.</p>.<p>ಶೋಭಾಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ‘ಜೈಶ್ರೀರಾಮ’, ‘ರಾಮಚಂದ್ರ ಪ್ರಭು ಮಹಾರಾಜಕೀ ಜೈ’, ‘ಜಾನಕಿರಾಮನಿಗೆ ಜೈ’... ಘೋಷಣೆಗಳು ಮೊಳಗಿದವು. ಡಿ.ಜೆ. ಸಂಗೀತದಲ್ಲಿ ಶ್ರೀರಾಮನ ಕುರಿತ ಹಾಡುಗಳನ್ನು ಬಿತ್ತರಿಸುತ್ತಿದ್ದಂತೆಯೇ ಕೇಸರಿ ಶಾಲು, ಕೇಸರಿ ಧ್ವಜಗಳನ್ನು ಹಿಡಿದಿದ್ದ ಯುವಕರು ಕುಣಿದು ಕುಪ್ಪಳಿಸಿದರು.</p>.<p>‘ಜೈ ಶ್ರೀರಾಮ್’, ‘ಜೈ ಶ್ರೀರಾಮ್ ರಘುಪತಿ ರಾಘವ ಜೈ ಶ್ರೀರಾಮ್’, ‘ಹುಟ್ಟಿದ್ದಾರೆ ಕನ್ನಡ ನಾಡಲ್ಲಿ’ ಸೇರಿದಂತೆ ಕನ್ನಡ, ಹಿಂದಿ, ಮರಾಠಿ ಡಿ.ಜೆ. ರಿಮಿಕ್ಸ್ ಹಾಡುಗಳಿಗೆ ಯುವಕರು ಮೈ ಸಡಿಲ ಮಾಡಿ ಕುಣಿದು ಸಂಭ್ರಮಿಸಿದರು. ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತಿದ್ದು ಕಂಡುಬಂತು.</p>.<p>ಹನುಮಾನ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯು ನೇತಾಜಿ ಸುಭಾಷ ಚಂದ್ರಬೋಸ್ ವೃತ್ತ, ಶಾಸ್ತ್ರಿ ವೃತ್ತ, ರೈಲ್ವೆ ನಿಲ್ದಾಣ ರಸ್ತೆ ಮಾರ್ಗವಾಗಿ ಭವಾನಿ ಮಂದಿರ ತಲುಪಿ ಸಂಪನ್ನಗೊಂಡಿತು.</p>.<p>ಶಿವಾಜಿ ಯುವ ಗರ್ಜನೆ ಸೇನೆಯ ಮುಖಂಡರಾದ ಲಕ್ಷ್ಮಣ ಮಡ್ಡಿ, ರಾಜು ಚವ್ಹಾಣ, ಚಿಂಟು ದಳಪತಿ, ಭಗವಾನ್, ಆನಂದ ಸಾಗರ್, ಸುಮಿತ್, ಬಜರಂಗದಳದ ಶಿವು, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಲಕ್ಷ್ಮಿಪುತ್ರ ಮಾಲಿಪಾಟೀಲ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.</p>.<p>ಶೋಭಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ರಸ್ತೆಯ ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳು ಬೇರೊಂದು ರಸ್ತೆಗಳಲ್ಲಿ ತೆರಳುವಂತೆ ಸೂಚಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260404-30-387860871</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>