<p>ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ದಶಕಗಳ ಹಿಂದೆಯೇ ನಿರ್ಮಾಣವಾಗಿದ್ದ ನೀರಿನ ಟ್ಯಾಂಕ್ನ ಮೇಲ್ಚಾವಣಿಯ ಭಾಗ ಕುಸಿದು ಬಿದ್ದು, ಕುಡಿಯಲು ಯೋಗ್ಯವಲ್ಲದ ನೀರು ಜನರಿಗೆ ಸರಬರಾಜು ಮಾಡಲಾಗುತ್ತಿದೆ.</p>.<p>ಗ್ರಾಮದಲ್ಲಿ ದಶಕಗಳ ಹಿಂದೆ ಎತ್ತರದ ಕಲ್ಲು ಬಂಡೆಗಳ ಮೇಲೆ ದೊಡ್ಡ ನೀರಿನ ಟ್ಯಾಂಕರ್ ನಿರ್ಮಿಸಲಾಗಿದೆ. ಇದರಿಂದ ಗ್ರಾಮದ ಶೇ 40ರಷ್ಟು ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಟ್ಯಾಂಕರ್ನ ಸುತ್ತಲಿನ ಗೋಡೆಗಳು ಸುಸ್ಥಿಯಲ್ಲಿ ಇದ್ದರೂ ಮೇಲ್ಚಾವಣಿ ಶಿಥಿಲವಾಗಿದೆ.</p>.<p>ಶಿಥಿಲವಾದ ಮೇಲ್ಛಾವಣೆ ದುರಸ್ತಿಗಾಗಿ ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಈಗ, ಮೇಲ್ಚಾವಣಿ ಭಾಗ ದಿನದಿಂದ ದಿನಕ್ಕೆ ಕುಸಿದು ಟ್ಯಾಂಕ್ ಒಳಗಡೆಯೇ ಬಿದ್ದಿದೆ. ಇದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೇವಲ ಗೃಹ ಬಳಕೆಗೆ ಉಪಯೋಗಿಸುವಂತೆ ಇದ್ದು, ಜನರು ಕುಡಿಯಲು ನೀರಿಲ್ಲದೆ ಪರಿತಪಿಸುವಂತೆ ಆಗಿದೆ ಎಂಬ ಆರೋಪವಿದೆ.</p>.<p>‘ಟ್ಯಾಂಕ್ ದುರಸ್ತಿ ಮಾಡಿ ನೀರಿನ ಸರಬರಾಜಿನಲ್ಲಿ ಆಗಲಿರುವ ವ್ಯತ್ಯಯ ತಪ್ಪಿಸುವಂತೆ ಹಲವು ಬಾರಿ ಪಿಡಿಒಗೆ ಮನವಿ ಪತ್ರಗಳನ್ನು ಸಲ್ಲಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದೆ ಇರುವುದರಿಂದ ಈಗ ಕುಡಿಯುವ ನೀರನ್ನು ಹಣ ಕೊಟ್ಟು ಕೊಂಡುಕೊಳ್ಳುವ ಸ್ಥಿತಿ ಬಂದಿದೆ ಎಂದು ನಿವಾಸಿ ಜಗದೇವಪ್ಪ ಬೇಸರ ವ್ಯಕ್ತಪಡಿಸಿದರು.</p>.<p>‘ಮೂರ್ನಾಲ್ಕು ತಿಂಗಳಿಂದ ಮೇಲ್ಚಾವಣಿ ತುಂಡು– ತುಂಡಾಗಿ ಕುಸಿದು ಬೀಳುತ್ತಿದೆ. ಮೇಲ್ಚಾವಣಿಯ ಶಿಥಿಲ ತ್ಯಾಜ್ಯ ನೀರಲ್ಲಿ ಸೇರಿ ಅದೇ ನೀರು ಗ್ರಾಮದ 1 ಮತ್ತು 4ನೇ ವಾರ್ಡ್ಗಳಿಗೆ ಪೂರೈಕೆ ಆಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರು ಎಂಬುದನ್ನು ತಿಳಿಯದವರು, ದುಡ್ಡು ಕೊಟ್ಟು ವಾಟರ್ ಬಾಟಲಿ ಖರೀದಿಸಲು ಆಗದವರು ಅದೇ ನೀರು ಕುಡಿಯುತ್ತಿದ್ದಾರೆ’ ಎಂದರು.</p>.<p>ಶಿಥಿಲದ ವರದಿ ಸಲ್ಲಿಕೆ: ‘ನೀರಿನ ಟ್ಯಾಂಕ್ ಶೀಥಿಲವಾಗಿದ್ದರ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಸದ್ಯ, ಬೇಸಿಗೆ ಇರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯ ಆಗುವುದರಿಂದ ಈಗ ದುರಸ್ತಿ ಬೇಡ ಎನ್ನುತ್ತಿದ್ದಾರೆ. ಗ್ರಾಮದಲ್ಲಿ ಡಂಗೂರ ಸಾರಿ ಶಿಥಿಲ ಟ್ಯಾಂಕ್ನ ನೀರು ಕುಡಿಯಲು ಬಳಸದಂತೆ ತಿಳಿಸಲಾಗಿದೆ. ಕುಡಿಯಲು ಬೇರೆ ನೀರು ಬಳಸುವಂತೆಯೂ ತಿಳಿಹೇಳಲಾಗಿದೆ. ಆರ್ಒ ಪ್ಲಾಂಟ್ಗಳ ನೀರಿನ ಬಳಕೆಗೆ ಸೂಚಿಸಲಾಗಿದೆ’ ಎಂದು ಪಿಡಿಒ ವಿಜಯಲಕ್ಷ್ಮಿ ಎಸ್. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-30-1119275251</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ದಶಕಗಳ ಹಿಂದೆಯೇ ನಿರ್ಮಾಣವಾಗಿದ್ದ ನೀರಿನ ಟ್ಯಾಂಕ್ನ ಮೇಲ್ಚಾವಣಿಯ ಭಾಗ ಕುಸಿದು ಬಿದ್ದು, ಕುಡಿಯಲು ಯೋಗ್ಯವಲ್ಲದ ನೀರು ಜನರಿಗೆ ಸರಬರಾಜು ಮಾಡಲಾಗುತ್ತಿದೆ.</p>.<p>ಗ್ರಾಮದಲ್ಲಿ ದಶಕಗಳ ಹಿಂದೆ ಎತ್ತರದ ಕಲ್ಲು ಬಂಡೆಗಳ ಮೇಲೆ ದೊಡ್ಡ ನೀರಿನ ಟ್ಯಾಂಕರ್ ನಿರ್ಮಿಸಲಾಗಿದೆ. ಇದರಿಂದ ಗ್ರಾಮದ ಶೇ 40ರಷ್ಟು ಮನೆಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಟ್ಯಾಂಕರ್ನ ಸುತ್ತಲಿನ ಗೋಡೆಗಳು ಸುಸ್ಥಿಯಲ್ಲಿ ಇದ್ದರೂ ಮೇಲ್ಚಾವಣಿ ಶಿಥಿಲವಾಗಿದೆ.</p>.<p>ಶಿಥಿಲವಾದ ಮೇಲ್ಛಾವಣೆ ದುರಸ್ತಿಗಾಗಿ ಸ್ಥಳೀಯರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಈಗ, ಮೇಲ್ಚಾವಣಿ ಭಾಗ ದಿನದಿಂದ ದಿನಕ್ಕೆ ಕುಸಿದು ಟ್ಯಾಂಕ್ ಒಳಗಡೆಯೇ ಬಿದ್ದಿದೆ. ಇದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೇವಲ ಗೃಹ ಬಳಕೆಗೆ ಉಪಯೋಗಿಸುವಂತೆ ಇದ್ದು, ಜನರು ಕುಡಿಯಲು ನೀರಿಲ್ಲದೆ ಪರಿತಪಿಸುವಂತೆ ಆಗಿದೆ ಎಂಬ ಆರೋಪವಿದೆ.</p>.<p>‘ಟ್ಯಾಂಕ್ ದುರಸ್ತಿ ಮಾಡಿ ನೀರಿನ ಸರಬರಾಜಿನಲ್ಲಿ ಆಗಲಿರುವ ವ್ಯತ್ಯಯ ತಪ್ಪಿಸುವಂತೆ ಹಲವು ಬಾರಿ ಪಿಡಿಒಗೆ ಮನವಿ ಪತ್ರಗಳನ್ನು ಸಲ್ಲಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದೆ ಇರುವುದರಿಂದ ಈಗ ಕುಡಿಯುವ ನೀರನ್ನು ಹಣ ಕೊಟ್ಟು ಕೊಂಡುಕೊಳ್ಳುವ ಸ್ಥಿತಿ ಬಂದಿದೆ ಎಂದು ನಿವಾಸಿ ಜಗದೇವಪ್ಪ ಬೇಸರ ವ್ಯಕ್ತಪಡಿಸಿದರು.</p>.<p>‘ಮೂರ್ನಾಲ್ಕು ತಿಂಗಳಿಂದ ಮೇಲ್ಚಾವಣಿ ತುಂಡು– ತುಂಡಾಗಿ ಕುಸಿದು ಬೀಳುತ್ತಿದೆ. ಮೇಲ್ಚಾವಣಿಯ ಶಿಥಿಲ ತ್ಯಾಜ್ಯ ನೀರಲ್ಲಿ ಸೇರಿ ಅದೇ ನೀರು ಗ್ರಾಮದ 1 ಮತ್ತು 4ನೇ ವಾರ್ಡ್ಗಳಿಗೆ ಪೂರೈಕೆ ಆಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರು ಎಂಬುದನ್ನು ತಿಳಿಯದವರು, ದುಡ್ಡು ಕೊಟ್ಟು ವಾಟರ್ ಬಾಟಲಿ ಖರೀದಿಸಲು ಆಗದವರು ಅದೇ ನೀರು ಕುಡಿಯುತ್ತಿದ್ದಾರೆ’ ಎಂದರು.</p>.<p>ಶಿಥಿಲದ ವರದಿ ಸಲ್ಲಿಕೆ: ‘ನೀರಿನ ಟ್ಯಾಂಕ್ ಶೀಥಿಲವಾಗಿದ್ದರ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಸದ್ಯ, ಬೇಸಿಗೆ ಇರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯ ಆಗುವುದರಿಂದ ಈಗ ದುರಸ್ತಿ ಬೇಡ ಎನ್ನುತ್ತಿದ್ದಾರೆ. ಗ್ರಾಮದಲ್ಲಿ ಡಂಗೂರ ಸಾರಿ ಶಿಥಿಲ ಟ್ಯಾಂಕ್ನ ನೀರು ಕುಡಿಯಲು ಬಳಸದಂತೆ ತಿಳಿಸಲಾಗಿದೆ. ಕುಡಿಯಲು ಬೇರೆ ನೀರು ಬಳಸುವಂತೆಯೂ ತಿಳಿಹೇಳಲಾಗಿದೆ. ಆರ್ಒ ಪ್ಲಾಂಟ್ಗಳ ನೀರಿನ ಬಳಕೆಗೆ ಸೂಚಿಸಲಾಗಿದೆ’ ಎಂದು ಪಿಡಿಒ ವಿಜಯಲಕ್ಷ್ಮಿ ಎಸ್. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-30-1119275251</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>