<p><strong>ಯಾದಗಿರಿ:</strong> ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ ಮಿಷನ್, ಸಂಜೀವಿನಿ–ಕೆಎಸ್ಆರ್ಎಲ್ಪಿಎಸ್ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.</p>.<p>ಮೇಳದಲ್ಲಿ ನಿರೀಕ್ಷೆಗೆ ತಕ್ಕಂತಹ ಕಂಪನಿಗಳು ಬಾರದೆ ಇರುವುದಕ್ಕೆ ಬಂದಂತಹ ಅಭ್ಯರ್ಥಿಗಳು ಹಾಗೂ ಪಾಲ್ಗೊಂಡಿದ್ದ ಕೆಲ ಕಂಪನಿಗಳ ತಮ್ಮ ನಿರೀಕ್ಷಿತ ಮಟ್ಟಕ್ಕೆ ಪ್ರತಿನಿಧಿಗಳೂ ಬಾರದೆ ಇರುವುದಕ್ಕೆ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದರು. 50ಕ್ಕೂ ಹೆಚ್ಚು ಮಳಿಗೆಗಳು ಹಾಕಿದ್ದರೂ ಬಹುತೇಕವು ಖಾಲಿಯಾಗಿ ಇದ್ದವು. ಅಭ್ಯರ್ಥಿಗಳ ಕೊರತೆಯಿಂದಾಗಿ ಕೆಲವರು ಮಧ್ಯಾಹ್ನವೇ ಜಾಗ ಖಾಲಿ ಮಾಡಿದರು.</p>.<p>ಸಾಕಷ್ಟು ನಿರೀಕ್ಷೆಗಳು ಹೊತ್ತು ಬಂದಿದ್ದ ಅಭ್ಯರ್ಥಿಗಳಲ್ಲಿ ನೀರಾಸೆ ಕಂಡುಬಂತು. ಪ್ರತಿಷ್ಠಿತ ಕಂಪನಿಗಳು ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರೆದಕೊಂಡು ಬಂದಿದ್ದ ಶಿಕ್ಷಕರೊಬ್ಬರು, ‘50 ಕಂಪನಿಗಳು ಎಲ್ಲಿವೆ ಹುಡುಕಾಡಿ ಕೆಲಸ ಹಿಡಿಯಿರಿ’ ಎಂದು ವ್ಯಂಗ್ಯವಾಡಿದ್ದು ಕೇಳಿಬಂತು.</p>.<p>ಪೂರ್ವ ತಯಾರಿ, ಮಾಹಿತಿ ಕೊರತೆ: ‘ವಿಜಯಪುರ, ಕಲಬುರಗಿ, ಬಾಗಲಕೋಟೆಯಲ್ಲಿನ ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡು ಸಂಜೆ 6ರ ವರೆಗೆ ಸಂದರ್ಶನ ನಡೆಸಿ 250ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆ. ಆದರೆ, ಇಲ್ಲಿ 28 ಮಂದಿ ಶಾರ್ಟ್ಲಿಸ್ಟ್ನಲ್ಲಿದ್ದರೆ, ಐವರು ಮಾತ್ರವೇ ಆಯ್ಕೆಯಾಗಿದ್ದಾರೆ. ಇಷ್ಟೊಂದು ಕಡಿಮೆ ಹಿಂದೆಂದೂ ಮಾಡಿರಲಿಲ್ಲ. ಪೂರ್ವ ತಯಾರಿ, ಅಭ್ಯರ್ಥಿಗಳಿಗೆ ಮಾಹಿತಿಯ ಕೊರತೆಯಾಗಿದೆ’ ಎಂದು ನೇಮಕಾತಿ ಪ್ರತಿನಿಧಿ ಸ್ಯಾಮ್ಯುಯಲ್ ಹೇಳಿದರು.</p>.<p>‘ಪ್ರತಿಯೊಬ್ಬ ಅಭ್ಯರ್ಥಿಗೆ ಇಂತಹುದ್ದೆ ಕಂಪನಿಗಳಲ್ಲಿ ಕೆಲಸ ಮಾಡುವ ಇಚ್ಛೆ ಇರಿಸಿಕೊಂಡಿರುತ್ತಾನೆ. ಯಾವೆಲ್ಲ ಕಂಪನಿಗಳು ಬರಲಿವೆ, ಕೆಲಸದ ವಿಧಾನ, ಸಂಬಳ, ಸ್ಥಳ, ಬೇಕಾದ ಕೌಶಲದ ಬಗ್ಗೆ ಮುಂಚಿತವಾಗಿ ಮಾಹಿತಿ ಹಂಚಿಕೊಂಡರೆ ಹೆಚ್ಚಿನ ಅಭ್ಯರ್ಥಿಗಳು ಬರುತ್ತಿದ್ದರು’ ಎಂದರು.</p>.<p>‘ಮೇಳದಲ್ಲಿ ಬಿಎ, ಬಿಕಾಂ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಆದರೆ, ನಮಗೆ ಎಂ.ಎಸ್ಸಿ ಬಿ.ಎಸ್ಸಿ ಪದವೀಧರರು ಬೇಕಿತ್ತು. ಮಳಿಗೆಗೆ ಭೇಟಿ ನೀಡಿದ್ದ 25 ಮಂದಿ ಬಿ.ಎಸ್ ವಿದ್ಯಾರ್ಥಿಯಾಗಿದ್ದರು. ಐವರು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಅವರ ದಾಖಲಾತಿ ಪರಿಶೀಲಿಸಬೇಕಿದೆ’ ಎನ್ನುತ್ತಲೇ ತಮ್ಮ ಕಂಪನಿಯ ಸ್ವತ್ತು ಎತ್ತುಕೊಂಡು ಮಳಿಗೆ ಖಾಲಿ ಮಾಡಿದವರು ವಜ್ರ ಕೆಮ್ ಕಂಪನಿ ಪ್ರತಿನಿಧಿ.</p>.<p>‘ಮೇಳದಲ್ಲಿ ನೇಮಕಾತಿಗಾಗಿ ಆನ್ಲೈನ್ನಲ್ಲಿ 50 ಕಂಪನಿಗಳು, 5,877 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1000ಕ್ಕೂ ಹೆಚ್ಚು ಅಭ್ಯರ್ಥಿಗಳು ನೇರವಾಗಿ ಬಂದು ತಮ್ಮ ಹೆಸರು ನೋದಾಯಿಸಿದರು. ಒಟ್ಟು 1,489 ಅಭ್ಯರ್ಥಿಗಳು ಭಾಗಿಯಾಗಿದ್ದು, 471 ಮಂದಿ ಶಾರ್ಟ್ಲಿಸ್ಟ್ನಲ್ಲಿದ್ದಾರೆ. 237 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<h2>‘ಉದ್ಯೋಗ ಕಲ್ಪಿಸಲು ಸಹಕಾರಿ’ </h2><p>ಯಾದಗಿರಿ: ‘ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳ ಸಹಕಾರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಸರ್ಕಾರವು ಯುವಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸಲು ಇಂತಹ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಅವಕಾಶ ಕಲ್ಪಿಸಿದೆ. 41ಕ್ಕೂ ಹೆಚ್ಚು ಉದ್ಯಮಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ವಿದ್ಯಾವಂತ ಯುವಕ–ಯುವತಿಯರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ‘ಯುಡಾ’ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ ಮಿಷನ್, ಸಂಜೀವಿನಿ–ಕೆಎಸ್ಆರ್ಎಲ್ಪಿಎಸ್ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.</p>.<p>ಮೇಳದಲ್ಲಿ ನಿರೀಕ್ಷೆಗೆ ತಕ್ಕಂತಹ ಕಂಪನಿಗಳು ಬಾರದೆ ಇರುವುದಕ್ಕೆ ಬಂದಂತಹ ಅಭ್ಯರ್ಥಿಗಳು ಹಾಗೂ ಪಾಲ್ಗೊಂಡಿದ್ದ ಕೆಲ ಕಂಪನಿಗಳ ತಮ್ಮ ನಿರೀಕ್ಷಿತ ಮಟ್ಟಕ್ಕೆ ಪ್ರತಿನಿಧಿಗಳೂ ಬಾರದೆ ಇರುವುದಕ್ಕೆ ಪರಸ್ಪರ ಅಸಮಾಧಾನ ವ್ಯಕ್ತಪಡಿಸಿದರು. 50ಕ್ಕೂ ಹೆಚ್ಚು ಮಳಿಗೆಗಳು ಹಾಕಿದ್ದರೂ ಬಹುತೇಕವು ಖಾಲಿಯಾಗಿ ಇದ್ದವು. ಅಭ್ಯರ್ಥಿಗಳ ಕೊರತೆಯಿಂದಾಗಿ ಕೆಲವರು ಮಧ್ಯಾಹ್ನವೇ ಜಾಗ ಖಾಲಿ ಮಾಡಿದರು.</p>.<p>ಸಾಕಷ್ಟು ನಿರೀಕ್ಷೆಗಳು ಹೊತ್ತು ಬಂದಿದ್ದ ಅಭ್ಯರ್ಥಿಗಳಲ್ಲಿ ನೀರಾಸೆ ಕಂಡುಬಂತು. ಪ್ರತಿಷ್ಠಿತ ಕಂಪನಿಗಳು ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಕರೆದಕೊಂಡು ಬಂದಿದ್ದ ಶಿಕ್ಷಕರೊಬ್ಬರು, ‘50 ಕಂಪನಿಗಳು ಎಲ್ಲಿವೆ ಹುಡುಕಾಡಿ ಕೆಲಸ ಹಿಡಿಯಿರಿ’ ಎಂದು ವ್ಯಂಗ್ಯವಾಡಿದ್ದು ಕೇಳಿಬಂತು.</p>.<p>ಪೂರ್ವ ತಯಾರಿ, ಮಾಹಿತಿ ಕೊರತೆ: ‘ವಿಜಯಪುರ, ಕಲಬುರಗಿ, ಬಾಗಲಕೋಟೆಯಲ್ಲಿನ ಉದ್ಯೋಗ ಮೇಳಗಳಲ್ಲಿ ಪಾಲ್ಗೊಂಡು ಸಂಜೆ 6ರ ವರೆಗೆ ಸಂದರ್ಶನ ನಡೆಸಿ 250ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೆ. ಆದರೆ, ಇಲ್ಲಿ 28 ಮಂದಿ ಶಾರ್ಟ್ಲಿಸ್ಟ್ನಲ್ಲಿದ್ದರೆ, ಐವರು ಮಾತ್ರವೇ ಆಯ್ಕೆಯಾಗಿದ್ದಾರೆ. ಇಷ್ಟೊಂದು ಕಡಿಮೆ ಹಿಂದೆಂದೂ ಮಾಡಿರಲಿಲ್ಲ. ಪೂರ್ವ ತಯಾರಿ, ಅಭ್ಯರ್ಥಿಗಳಿಗೆ ಮಾಹಿತಿಯ ಕೊರತೆಯಾಗಿದೆ’ ಎಂದು ನೇಮಕಾತಿ ಪ್ರತಿನಿಧಿ ಸ್ಯಾಮ್ಯುಯಲ್ ಹೇಳಿದರು.</p>.<p>‘ಪ್ರತಿಯೊಬ್ಬ ಅಭ್ಯರ್ಥಿಗೆ ಇಂತಹುದ್ದೆ ಕಂಪನಿಗಳಲ್ಲಿ ಕೆಲಸ ಮಾಡುವ ಇಚ್ಛೆ ಇರಿಸಿಕೊಂಡಿರುತ್ತಾನೆ. ಯಾವೆಲ್ಲ ಕಂಪನಿಗಳು ಬರಲಿವೆ, ಕೆಲಸದ ವಿಧಾನ, ಸಂಬಳ, ಸ್ಥಳ, ಬೇಕಾದ ಕೌಶಲದ ಬಗ್ಗೆ ಮುಂಚಿತವಾಗಿ ಮಾಹಿತಿ ಹಂಚಿಕೊಂಡರೆ ಹೆಚ್ಚಿನ ಅಭ್ಯರ್ಥಿಗಳು ಬರುತ್ತಿದ್ದರು’ ಎಂದರು.</p>.<p>‘ಮೇಳದಲ್ಲಿ ಬಿಎ, ಬಿಕಾಂ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಆದರೆ, ನಮಗೆ ಎಂ.ಎಸ್ಸಿ ಬಿ.ಎಸ್ಸಿ ಪದವೀಧರರು ಬೇಕಿತ್ತು. ಮಳಿಗೆಗೆ ಭೇಟಿ ನೀಡಿದ್ದ 25 ಮಂದಿ ಬಿ.ಎಸ್ ವಿದ್ಯಾರ್ಥಿಯಾಗಿದ್ದರು. ಐವರು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಅವರ ದಾಖಲಾತಿ ಪರಿಶೀಲಿಸಬೇಕಿದೆ’ ಎನ್ನುತ್ತಲೇ ತಮ್ಮ ಕಂಪನಿಯ ಸ್ವತ್ತು ಎತ್ತುಕೊಂಡು ಮಳಿಗೆ ಖಾಲಿ ಮಾಡಿದವರು ವಜ್ರ ಕೆಮ್ ಕಂಪನಿ ಪ್ರತಿನಿಧಿ.</p>.<p>‘ಮೇಳದಲ್ಲಿ ನೇಮಕಾತಿಗಾಗಿ ಆನ್ಲೈನ್ನಲ್ಲಿ 50 ಕಂಪನಿಗಳು, 5,877 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1000ಕ್ಕೂ ಹೆಚ್ಚು ಅಭ್ಯರ್ಥಿಗಳು ನೇರವಾಗಿ ಬಂದು ತಮ್ಮ ಹೆಸರು ನೋದಾಯಿಸಿದರು. ಒಟ್ಟು 1,489 ಅಭ್ಯರ್ಥಿಗಳು ಭಾಗಿಯಾಗಿದ್ದು, 471 ಮಂದಿ ಶಾರ್ಟ್ಲಿಸ್ಟ್ನಲ್ಲಿದ್ದಾರೆ. 237 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<h2>‘ಉದ್ಯೋಗ ಕಲ್ಪಿಸಲು ಸಹಕಾರಿ’ </h2><p>ಯಾದಗಿರಿ: ‘ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ಯೋಗ ಮೇಳ ಸಹಕಾರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಸರ್ಕಾರವು ಯುವಜನಾಂಗಕ್ಕೆ ಉದ್ಯೋಗಾವಕಾಶ ಕಲ್ಪಿಸಲು ಇಂತಹ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಅವಕಾಶ ಕಲ್ಪಿಸಿದೆ. 41ಕ್ಕೂ ಹೆಚ್ಚು ಉದ್ಯಮಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ವಿದ್ಯಾವಂತ ಯುವಕ–ಯುವತಿಯರು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ‘ಯುಡಾ’ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>