<p><strong>ಯಾದಗಿರಿ</strong>: ಆಸ್ತಿ ವಿಚಾರವಾಗಿ ಸಿಟ್ಟಾದ ಪುತ್ರ, ಆಂಧ್ರಪ್ರದೇಶ ಮೂಲದವರಿಂದ ತನ್ನ ತಂದೆಯನ್ನು ಕೊಲ್ಲಿಸಿ, ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಕೊಲೆ ಪ್ರಕರಣ ದಾಖಲಿಸಿದ ಮಗ ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆರೋಪಿಗಳೂ ಪೊಲೀಸರ ಅತಿಥಿಯಾಗಿದ್ದಾರೆ.</p>.<p>ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದಲ್ಲಿ ಮಾರ್ಚ್ 11ರ ರಾತ್ರಿ ನಡೆದ ಹಂಪಣ್ಣ ಸಜ್ಜನ್ (76) ಕೊಲೆ ಪ್ರಕರಣವನ್ನು ಭೇದಿಸಿದ್ದ ವಡಗೇರಾ ಠಾಣೆಯ ಪೊಲೀಸರು, ಕೊಲೆಯಾದ ಹಂಪಣ್ಣ ಅವರ ಮಗ ನರಸರೆಡ್ಡಿ ಸಜ್ಜನ್, ಸುಪಾರಿ ಪಡೆದು ಕೊಲೆಗೈದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಚಮರ್ರಿ ನಿವಾಸಿಗಳಾದ ರಮೇಶ ನರಸಪ್ಪ, ಜಿ.ವೀರೇಶ ಮುರಕಪ್ಪ, ಕೃಷ್ಣ ತಿಕ್ಕಯ್ಯ ಹಾಗೂ ಎಂ.ವೀರೇಶ ಉರಕುಂದಿ ಬಂಧಿತರಾಗಿದ್ದಾರೆ.</p>.<p>ಹಂಪಣ್ಣ ಅವರು ತಮ್ಮ ಆಸ್ತಿಯನ್ನು ಮೂವರು ಮಕ್ಕಳಿಗೆ ಪಾಲು ಮಾಡಿ, ತನ್ನ ಬಳಿ 12 ಎಕರೆ ಜಮೀನು ಇರಿಸಿಕೊಂಡು ಹೊಲದಲ್ಲಿನ ಮನೆಯಲ್ಲಿ ಒಂಟಿಯಾಗಿದ್ದರು. 10 ವರ್ಷಗ ಹಿಂದೆಯೇ ಹಂಪಣ್ಣ ಅವರ ಪತ್ನಿಯೂ ಮೃತಪಟ್ಟಿದ್ದರಿಂದ ತಾನೇ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.</p>.<p>ಮಾರ್ಚ್ 11ರ ರಾತ್ರಿ ಹೊಲದಲ್ಲಿನ ಮನೆಯಲ್ಲಿ ಹಂಪಣ್ಣ ಒಂಟಿಯಾಗಿ ಇದ್ದಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಕುತ್ತಿಗೆಯನ್ನು ಬಿಗಿದು, ಗುಪ್ತಾಂಗಕ್ಕೆ ಬಲವಾಗಿ ಹೊಡೆದು, ತೊಡೆಗಳಿಗೂ ಗಾಯಗೊಳಿಸಿ ಕೊಲೆ ಮಾಡಿದ್ದರು. ಶವವನ್ನು ಮೊದಲ ಬಾರಿ ನೋಡಿದ್ದ ಆತನ ಮಗ ನರಸರೆಡ್ಡಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಆಸ್ತಿಯ ವಿಚಾರವಾಗಿ ಕೊಲೆ ಮಾಡಿದ್ದಾಗಿ ಶಂಕೆ ಬಂತು. ಎಲ್ಲ ಆಯಾಮಗಳಿಂದಲೂ ವಿಚಾರಣೆ ನಡೆಸಿದರು. ಮಹಿಳೆಯರೊಂದಿಗೆ ಅನುಚಿತ ವರ್ತನೆ, ಕುಡಿತದಂತಹ ಚಾಳಿಯೂ ಹಂಪಣ್ಣನಿಗೆ ಇತ್ತು. ಹೀಗಾಗಿ, 6 ಎಕರೆ ಜಮೀನನ್ನು ₹ 2 ಲಕ್ಷಕ್ಕೆ ಮಾರಾಟ ಮಾಡಿದ್ದ. ಇದಕ್ಕೆ ವಿರೋಧಿಸಿ, ಆತನ ಮಕ್ಕಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಮಹಿಳೆಯರೊಂದಿಗಿನ ಅನುಚಿತ ವರ್ತನೆ ಬಗ್ಗೆಯೂ ಕುಟುಂಬಸ್ಥರಲ್ಲಿ ಅಸಮಾಧಾನವಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಕೊಲೆ ಪ್ರಕರಣದ ನಡೆದ ಬಳಿಕ ಆತನ ಮಕ್ಕಳು ಸಹಜವಾಗಿಯೇ ಇದ್ದರು. ಆದರೆ, ಮೊದಲ ಶವ ನೋಡಿ ದೂರು ನೀಡಿದ್ದ ನರಸರೆಡ್ಡಿ ಮೇಲೆ ಸಂಶಯ ಬಂದಿತ್ತು. ಯಾವತ್ತೂ ಜಮೀನಿನಲ್ಲಿನ ತಂದೆಯ ಮನೆಗೆ ಹೋಗದವ ಕೊಲೆ ನಡೆದ ದಿನ ಬೆಳಿಗ್ಗೆಯೇ ತೆರಳಿದ್ದ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾಗ ತಾನೇ ಆಂಧ್ರಪ್ರದೇಶ ಮೂಲದ ನಾಲ್ವರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಕೊಲೆಗು ಮುನ್ನ ಫೋನ್ನಲ್ಲಿ ಸಂಪರ್ಕದಲ್ಲಿದ್ದ’ ಎಂದು ಮಾಹಿತಿ ಹಂಚಿಕೊಂಡರು.</p>.<p>ಡಿವೈಎಸ್ಪಿ ಸುರೇಶ್ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ್ ವಿ.ಮೂಲಿಮನಿ, ಪಿಎಸ್ಐ ಮಹೆಬೂಬ್ ಅಲಿ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.</p>.<h2> ಸುಪಾರಿ ಜತೆಗೆ ಹಳೇ ವೈಷಮ್ಯದ ನಂಟು! </h2><p>ಕೊಲೆಗೈದ ಆಂಧ್ರಪ್ರದೇಶ ಮೂಲದ ನಾಲ್ವರು ಆರೋಪಿಗಳು ಈ ಹಿಂದೆ ಹತ್ತಿ ಬಿಡಿಸಲು ಕುಟುಂಬ ಸಮೇತರಾಗಿ ಹಂಪಣ್ಣನ ಜಮೀನಿನ ಕೆಲಸಕ್ಕಾಗಿ ಬಂದಿದ್ದರು. ಆಗ ಮಹಿಳೆಯರೊಂದಿಗೆ ಹಂಪಣ್ಣ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಗಲಾಟೆಯೂ ನಡೆದಿತ್ತು. ನರಸರೆಡ್ಡಿ ಫೋನ್ ಮೂಲಕ ಸಂಪರ್ಕಿಸಿ ಆ ನಾಲ್ವರಿಗೆ ₹ 2.50 ಲಕ್ಷಕ್ಕೆಸುಪಾರಿ ಕೊಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೂಲಿ ಕೆಲಸ ವಾಹನ ಚಾಲನೆ ಮಾಡುತ್ತಿದ್ದ ಆರೋಪಿಗಳಾದ ರಮೇಶ ಜಿ.ವೀರೇಶ ಕೃಷ್ಣ ಹಾಗೂ ಎಂ.ವೀರೇಶಗೆ ಹಣದ ಅವಶ್ಯಕತೆ ಇತ್ತು. ಜೊತೆಗೆ ಹಳೇ ಸಿಟ್ಟು ಸಹ ಹಂಪಣ್ಣನ ಮೇಲಿತ್ತು. ₹ 2.50 ಲಕ್ಷಕ್ಕೆ ಕೊಲೆ ಮಾಡಲು ಒಪ್ಪಿಕೊಂಡರು. ರಾತ್ರಿ ವೇಳೆ ಬೈಕ್ಗಳಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ತಮ್ಮ ಸ್ವಗ್ರಾಮಗಳಿಗೆ ತೆರಳಿ ತಾವು ಏನೂ ಮಾಡಿಲ್ಲ ಎಂಬಂತ ಸಹಜವಾಗಿದ್ದರು. ವಶಕ್ಕೆ ಪಡೆಯಲು ತೆರಳಿದ್ದಾಗ ತಾವೇನೂ ಮಾಡಿಲ್ಲ ಎಂದು ವಾದಿಸಿದ್ದರು. ವಿಚಾರಣೆಗೆ ಒಳಪಡಿಸಿದಾಗ ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.</p>.<h2> ‘ಮೊಬೈಲ್ನಲ್ಲಿ ಶಾಕಿಂಗ್ ಡೀಟೇಲ್ಸ್’</h2><p> ‘ಕೊಲೆಯಾದ ಹಂಪಣ್ಣ ಅವರ ಫೋನ್ ಕಾಲ್ ವಾಟ್ಸ್ಆ್ಯಪ್ ಚಾಟ್ ಹಾಗೂ ಮೊಬೈಲ್ ಪರಿಶೀಲಿಸಿದಾಗ ಶಾಕಿಂಗ್ ಡೀಟೇಲ್ಸ್ ಕಂಡುಬಂದಿದೆ. ಬೇರೆ ಊರಿನ ಹೆಣ್ಣು ಮಕ್ಕಳ ಜೊತೆಗೆ ಅಕ್ರಮ ಸಂಬಂಧದಲ್ಲಿ ಇದ್ದರು ಎಂಬುದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ‘ಹಂಪಣ್ಣ ಅವರ ಮಗ ಹತ್ತಿ ಬಿಡಿಸಲು ಹೊಲಕ್ಕೆ ಬರುತ್ತಿದ್ದ ಆಂಧ್ರಪ್ರದೇಶದ ಮೂಲದವರಿಗೆ ಹಣ ಕೊಟ್ಟು ಕೊಲೆ ಮಾಡಿಸಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಈಗ ಐವರನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಬೇರೆಯವರ ಪಾತ್ರ ಬಗ್ಗೆಯೂ ತನಿಖೆ ಮಾಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಆಸ್ತಿ ವಿಚಾರವಾಗಿ ಸಿಟ್ಟಾದ ಪುತ್ರ, ಆಂಧ್ರಪ್ರದೇಶ ಮೂಲದವರಿಂದ ತನ್ನ ತಂದೆಯನ್ನು ಕೊಲ್ಲಿಸಿ, ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಕೊಲೆ ಪ್ರಕರಣ ದಾಖಲಿಸಿದ ಮಗ ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆರೋಪಿಗಳೂ ಪೊಲೀಸರ ಅತಿಥಿಯಾಗಿದ್ದಾರೆ.</p>.<p>ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದಲ್ಲಿ ಮಾರ್ಚ್ 11ರ ರಾತ್ರಿ ನಡೆದ ಹಂಪಣ್ಣ ಸಜ್ಜನ್ (76) ಕೊಲೆ ಪ್ರಕರಣವನ್ನು ಭೇದಿಸಿದ್ದ ವಡಗೇರಾ ಠಾಣೆಯ ಪೊಲೀಸರು, ಕೊಲೆಯಾದ ಹಂಪಣ್ಣ ಅವರ ಮಗ ನರಸರೆಡ್ಡಿ ಸಜ್ಜನ್, ಸುಪಾರಿ ಪಡೆದು ಕೊಲೆಗೈದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಚಮರ್ರಿ ನಿವಾಸಿಗಳಾದ ರಮೇಶ ನರಸಪ್ಪ, ಜಿ.ವೀರೇಶ ಮುರಕಪ್ಪ, ಕೃಷ್ಣ ತಿಕ್ಕಯ್ಯ ಹಾಗೂ ಎಂ.ವೀರೇಶ ಉರಕುಂದಿ ಬಂಧಿತರಾಗಿದ್ದಾರೆ.</p>.<p>ಹಂಪಣ್ಣ ಅವರು ತಮ್ಮ ಆಸ್ತಿಯನ್ನು ಮೂವರು ಮಕ್ಕಳಿಗೆ ಪಾಲು ಮಾಡಿ, ತನ್ನ ಬಳಿ 12 ಎಕರೆ ಜಮೀನು ಇರಿಸಿಕೊಂಡು ಹೊಲದಲ್ಲಿನ ಮನೆಯಲ್ಲಿ ಒಂಟಿಯಾಗಿದ್ದರು. 10 ವರ್ಷಗ ಹಿಂದೆಯೇ ಹಂಪಣ್ಣ ಅವರ ಪತ್ನಿಯೂ ಮೃತಪಟ್ಟಿದ್ದರಿಂದ ತಾನೇ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.</p>.<p>ಮಾರ್ಚ್ 11ರ ರಾತ್ರಿ ಹೊಲದಲ್ಲಿನ ಮನೆಯಲ್ಲಿ ಹಂಪಣ್ಣ ಒಂಟಿಯಾಗಿ ಇದ್ದಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದರು. ಕುತ್ತಿಗೆಯನ್ನು ಬಿಗಿದು, ಗುಪ್ತಾಂಗಕ್ಕೆ ಬಲವಾಗಿ ಹೊಡೆದು, ತೊಡೆಗಳಿಗೂ ಗಾಯಗೊಳಿಸಿ ಕೊಲೆ ಮಾಡಿದ್ದರು. ಶವವನ್ನು ಮೊದಲ ಬಾರಿ ನೋಡಿದ್ದ ಆತನ ಮಗ ನರಸರೆಡ್ಡಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಆಸ್ತಿಯ ವಿಚಾರವಾಗಿ ಕೊಲೆ ಮಾಡಿದ್ದಾಗಿ ಶಂಕೆ ಬಂತು. ಎಲ್ಲ ಆಯಾಮಗಳಿಂದಲೂ ವಿಚಾರಣೆ ನಡೆಸಿದರು. ಮಹಿಳೆಯರೊಂದಿಗೆ ಅನುಚಿತ ವರ್ತನೆ, ಕುಡಿತದಂತಹ ಚಾಳಿಯೂ ಹಂಪಣ್ಣನಿಗೆ ಇತ್ತು. ಹೀಗಾಗಿ, 6 ಎಕರೆ ಜಮೀನನ್ನು ₹ 2 ಲಕ್ಷಕ್ಕೆ ಮಾರಾಟ ಮಾಡಿದ್ದ. ಇದಕ್ಕೆ ವಿರೋಧಿಸಿ, ಆತನ ಮಕ್ಕಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಮಹಿಳೆಯರೊಂದಿಗಿನ ಅನುಚಿತ ವರ್ತನೆ ಬಗ್ಗೆಯೂ ಕುಟುಂಬಸ್ಥರಲ್ಲಿ ಅಸಮಾಧಾನವಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>‘ಕೊಲೆ ಪ್ರಕರಣದ ನಡೆದ ಬಳಿಕ ಆತನ ಮಕ್ಕಳು ಸಹಜವಾಗಿಯೇ ಇದ್ದರು. ಆದರೆ, ಮೊದಲ ಶವ ನೋಡಿ ದೂರು ನೀಡಿದ್ದ ನರಸರೆಡ್ಡಿ ಮೇಲೆ ಸಂಶಯ ಬಂದಿತ್ತು. ಯಾವತ್ತೂ ಜಮೀನಿನಲ್ಲಿನ ತಂದೆಯ ಮನೆಗೆ ಹೋಗದವ ಕೊಲೆ ನಡೆದ ದಿನ ಬೆಳಿಗ್ಗೆಯೇ ತೆರಳಿದ್ದ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾಗ ತಾನೇ ಆಂಧ್ರಪ್ರದೇಶ ಮೂಲದ ನಾಲ್ವರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಕೊಲೆಗು ಮುನ್ನ ಫೋನ್ನಲ್ಲಿ ಸಂಪರ್ಕದಲ್ಲಿದ್ದ’ ಎಂದು ಮಾಹಿತಿ ಹಂಚಿಕೊಂಡರು.</p>.<p>ಡಿವೈಎಸ್ಪಿ ಸುರೇಶ್ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ್ ವಿ.ಮೂಲಿಮನಿ, ಪಿಎಸ್ಐ ಮಹೆಬೂಬ್ ಅಲಿ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.</p>.<h2> ಸುಪಾರಿ ಜತೆಗೆ ಹಳೇ ವೈಷಮ್ಯದ ನಂಟು! </h2><p>ಕೊಲೆಗೈದ ಆಂಧ್ರಪ್ರದೇಶ ಮೂಲದ ನಾಲ್ವರು ಆರೋಪಿಗಳು ಈ ಹಿಂದೆ ಹತ್ತಿ ಬಿಡಿಸಲು ಕುಟುಂಬ ಸಮೇತರಾಗಿ ಹಂಪಣ್ಣನ ಜಮೀನಿನ ಕೆಲಸಕ್ಕಾಗಿ ಬಂದಿದ್ದರು. ಆಗ ಮಹಿಳೆಯರೊಂದಿಗೆ ಹಂಪಣ್ಣ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಗಲಾಟೆಯೂ ನಡೆದಿತ್ತು. ನರಸರೆಡ್ಡಿ ಫೋನ್ ಮೂಲಕ ಸಂಪರ್ಕಿಸಿ ಆ ನಾಲ್ವರಿಗೆ ₹ 2.50 ಲಕ್ಷಕ್ಕೆಸುಪಾರಿ ಕೊಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೂಲಿ ಕೆಲಸ ವಾಹನ ಚಾಲನೆ ಮಾಡುತ್ತಿದ್ದ ಆರೋಪಿಗಳಾದ ರಮೇಶ ಜಿ.ವೀರೇಶ ಕೃಷ್ಣ ಹಾಗೂ ಎಂ.ವೀರೇಶಗೆ ಹಣದ ಅವಶ್ಯಕತೆ ಇತ್ತು. ಜೊತೆಗೆ ಹಳೇ ಸಿಟ್ಟು ಸಹ ಹಂಪಣ್ಣನ ಮೇಲಿತ್ತು. ₹ 2.50 ಲಕ್ಷಕ್ಕೆ ಕೊಲೆ ಮಾಡಲು ಒಪ್ಪಿಕೊಂಡರು. ರಾತ್ರಿ ವೇಳೆ ಬೈಕ್ಗಳಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ತಮ್ಮ ಸ್ವಗ್ರಾಮಗಳಿಗೆ ತೆರಳಿ ತಾವು ಏನೂ ಮಾಡಿಲ್ಲ ಎಂಬಂತ ಸಹಜವಾಗಿದ್ದರು. ವಶಕ್ಕೆ ಪಡೆಯಲು ತೆರಳಿದ್ದಾಗ ತಾವೇನೂ ಮಾಡಿಲ್ಲ ಎಂದು ವಾದಿಸಿದ್ದರು. ವಿಚಾರಣೆಗೆ ಒಳಪಡಿಸಿದಾಗ ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.</p>.<h2> ‘ಮೊಬೈಲ್ನಲ್ಲಿ ಶಾಕಿಂಗ್ ಡೀಟೇಲ್ಸ್’</h2><p> ‘ಕೊಲೆಯಾದ ಹಂಪಣ್ಣ ಅವರ ಫೋನ್ ಕಾಲ್ ವಾಟ್ಸ್ಆ್ಯಪ್ ಚಾಟ್ ಹಾಗೂ ಮೊಬೈಲ್ ಪರಿಶೀಲಿಸಿದಾಗ ಶಾಕಿಂಗ್ ಡೀಟೇಲ್ಸ್ ಕಂಡುಬಂದಿದೆ. ಬೇರೆ ಊರಿನ ಹೆಣ್ಣು ಮಕ್ಕಳ ಜೊತೆಗೆ ಅಕ್ರಮ ಸಂಬಂಧದಲ್ಲಿ ಇದ್ದರು ಎಂಬುದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ‘ಹಂಪಣ್ಣ ಅವರ ಮಗ ಹತ್ತಿ ಬಿಡಿಸಲು ಹೊಲಕ್ಕೆ ಬರುತ್ತಿದ್ದ ಆಂಧ್ರಪ್ರದೇಶದ ಮೂಲದವರಿಗೆ ಹಣ ಕೊಟ್ಟು ಕೊಲೆ ಮಾಡಿಸಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಈಗ ಐವರನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಬೇರೆಯವರ ಪಾತ್ರ ಬಗ್ಗೆಯೂ ತನಿಖೆ ಮಾಡಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>