ಅಡಪ್ಪ ಅವರ ಬಳ್ಳಾರಿ ಮನೆ– ಕಚೇರಿ, ರಾಜಶೇಖರ್ ಅವರ ವಿಜಯಪುರದಲ್ಲಿನ ಎರಡು ಮನೆ, ರವಿಕುಮಾರ್ ಅವರ ಗುಂಡ್ಲುಪೇಟೆ ಮತ್ತು ಮೈಸೂರು ಮನೆ, ಅಶ್ವತ್ಥಪ್ಪ ಅವರ ಕೋಲಾರದ ಮನೆಯನ್ನು ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದೆರಡು ದಿನಗಳಲ್ಲಿ ಶೋಧ ಕಾರ್ಯಾಚರಣೆ ಮುಗಿಸಿ ಅಧಿಕಾರಿಗಳ ಆಸ್ತಿ ವಿವರಗಳನ್ನು ಎಸಿಬಿ ಬಿಡುಗಡೆ ಮಾಡಲಿದೆ.