ಕಮಲತ್ತಾಳ್ ಅವರು ಕಳೆದ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಇಡ್ಲಿ ಅಂಗಡಿ ಬಾಗಿಲು ತೆರೆಯುವುದು ಬೆಳಿಗ್ಗೆ 6 ಗಂಟೆಗೆ. ಒಮ್ಮೆ ಬಾಗಿಲು ತೆರೆದ ನಂತರ ಮಧ್ಯಾಹ್ನದವರೆಗೆ ಅಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತದೆ. ಅವರಲ್ಲಿ ಇಡ್ಲಿ ಸವಿಯಲು ಬರುವವರಲ್ಲಿ ಹೆಚ್ಚಿನವರು ಬಡವರಾಗಿರುವ ಕಾರಣ, ಒಂದು ಇಡ್ಲಿಗೆ ₹ 1 ನಿಗದಿ ಮಾಡಲಾಗಿದೆ. ಕಮಲತ್ತಾಳ್ ಅವರು ಇಡ್ಲಿಯನ್ನು ಬೇಯಿಸುವುದು ಮಣ್ಣಿನ ಒಲೆ ಬಳಸಿ. ಅಷ್ಟೇ ಅಲ್ಲ, ಅವರು ತಮ್ಮ ಬಹುತೇಕ ಕೆಲಸಗಳನ್ನು ಯಂತ್ರಗಳನ್ನು ಬಳಸದೆಯೇ ಮಾಡುತ್ತಾರೆ.