<p>ಬೆಂಗಳೂರು: ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬರುವ ಆಗಸ್ಟ್ನಲ್ಲಿ ‘ಉದ್ಯೋಗ ಮೇಳ’ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ತಿಳಿಸಿದ್ದಾರೆ.</p>.<p>ವಿಕಾಸಸೌಧದಲ್ಲಿ ಅಸಿಸ್ಟೆಕ್ ಫೌಂಡೇಶನ್ನ (ಎಟಿಎಫ್) ‘ಆದಿದ್ವಾರ’ ಆ್ಯಪ್ಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಅಂಗವಿಕಲರು ಯಾರಿಗೂ ಕಡಿಮೆ ಇಲ್ಲ. ಇತರ ಎಲ್ಲರಂತೆ ಅವರು ಪ್ರತಿಭಾವಂತರು. ಆದ್ದರಿಂದ ಖಾಸಗಿ ವಲಯದ ಕಂಪನಿ ಗಳು ಉದ್ಯೋಗಗಳಿಗೆ ನೇಮಕಮಾಡಿಕೊಳ್ಳುವಾಗ ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ನೀಡಬೇಕು ಮತ್ತು ಸಮಾನವಾಗಿ ನಡೆಸಿ ಕೊಳ್ಳಬೇಕು’ ಎಂದು ಹೇಳಿದರು.</p>.<p>ಅಂಗವಿಕಲರಿಗೆ ಉದ್ಯೋಗಾವ ಕಾಶವನ್ನು ಕಲ್ಪಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ಆಧರಿಸಿ ‘ಆದಿದ್ವಾರ’ ಆ್ಯಪ್ ರೂಪಿಸಲಾಗಿದೆ. ವಿಶೇಷವಾಗಿ ಉದ್ಯೋಗ ಅವಕಾಶಗಳು, ಇಂಟರ್ನ್ಶಿಪ್ ಮತ್ತು ಕೌಶಲ ಕಾರ್ಯಕ್ರಮಗಳ ಬಗ್ಗೆ ಆ್ಯಪ್ನಲ್ಲಿ ಮಾಹಿತಿ ಸಿಗಲಿದೆ. ಉದ್ಯೋಗ ದಾತರಿಗೂ ಕೂಡ ಪ್ರತಿಭಾನ್ವಿತ ಅಭ್ಯರ್ಥಿಗಳ ಮಾಹಿತಿ ಸಿಗಲಿದೆ.</p>.<p>ಇದೇ ಸಂದರ್ಭದಲ್ಲಿ ಸಚಿವ ಶರಣ ಪ್ರಕಾಶ್ ಅವರು ಆಗಸ್ಟ್ ತಿಂಗಳಲ್ಲಿ ನಡೆಯುವ ಉದ್ಯೋಗ ಮೇಳದ ಲೋಗೊ ಬಿಡುಗಡೆ ಮಾಡಿದರು. ಉದ್ಯೋಗ ಮೇಳದಲ್ಲಿ ಐಟಿ, ರಿಟೇಲ್, ಉತ್ಪಾದನಾ ವಲಯ,ಬಿಎಫ್ಎಸ್ಐ, ಆತಿಥ್ಯ ಸೇರಿ ವಿವಿಧ ಸೇವೆಗಳ ಕ್ಷೇತ್ರಗಳವರು ಭಾಗವಹಿಸಲಿದ್ದಾರೆ. 21 ಬಗೆಯ ವೈಕಲ್ಯ ಹೊಂದಿದ 3,000 ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-218137389</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬರುವ ಆಗಸ್ಟ್ನಲ್ಲಿ ‘ಉದ್ಯೋಗ ಮೇಳ’ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ತಿಳಿಸಿದ್ದಾರೆ.</p>.<p>ವಿಕಾಸಸೌಧದಲ್ಲಿ ಅಸಿಸ್ಟೆಕ್ ಫೌಂಡೇಶನ್ನ (ಎಟಿಎಫ್) ‘ಆದಿದ್ವಾರ’ ಆ್ಯಪ್ಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಅಂಗವಿಕಲರು ಯಾರಿಗೂ ಕಡಿಮೆ ಇಲ್ಲ. ಇತರ ಎಲ್ಲರಂತೆ ಅವರು ಪ್ರತಿಭಾವಂತರು. ಆದ್ದರಿಂದ ಖಾಸಗಿ ವಲಯದ ಕಂಪನಿ ಗಳು ಉದ್ಯೋಗಗಳಿಗೆ ನೇಮಕಮಾಡಿಕೊಳ್ಳುವಾಗ ಅಂಗವಿಕಲರಿಗೆ ಸಮಾನ ಅವಕಾಶಗಳನ್ನು ನೀಡಬೇಕು ಮತ್ತು ಸಮಾನವಾಗಿ ನಡೆಸಿ ಕೊಳ್ಳಬೇಕು’ ಎಂದು ಹೇಳಿದರು.</p>.<p>ಅಂಗವಿಕಲರಿಗೆ ಉದ್ಯೋಗಾವ ಕಾಶವನ್ನು ಕಲ್ಪಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ಆಧರಿಸಿ ‘ಆದಿದ್ವಾರ’ ಆ್ಯಪ್ ರೂಪಿಸಲಾಗಿದೆ. ವಿಶೇಷವಾಗಿ ಉದ್ಯೋಗ ಅವಕಾಶಗಳು, ಇಂಟರ್ನ್ಶಿಪ್ ಮತ್ತು ಕೌಶಲ ಕಾರ್ಯಕ್ರಮಗಳ ಬಗ್ಗೆ ಆ್ಯಪ್ನಲ್ಲಿ ಮಾಹಿತಿ ಸಿಗಲಿದೆ. ಉದ್ಯೋಗ ದಾತರಿಗೂ ಕೂಡ ಪ್ರತಿಭಾನ್ವಿತ ಅಭ್ಯರ್ಥಿಗಳ ಮಾಹಿತಿ ಸಿಗಲಿದೆ.</p>.<p>ಇದೇ ಸಂದರ್ಭದಲ್ಲಿ ಸಚಿವ ಶರಣ ಪ್ರಕಾಶ್ ಅವರು ಆಗಸ್ಟ್ ತಿಂಗಳಲ್ಲಿ ನಡೆಯುವ ಉದ್ಯೋಗ ಮೇಳದ ಲೋಗೊ ಬಿಡುಗಡೆ ಮಾಡಿದರು. ಉದ್ಯೋಗ ಮೇಳದಲ್ಲಿ ಐಟಿ, ರಿಟೇಲ್, ಉತ್ಪಾದನಾ ವಲಯ,ಬಿಎಫ್ಎಸ್ಐ, ಆತಿಥ್ಯ ಸೇರಿ ವಿವಿಧ ಸೇವೆಗಳ ಕ್ಷೇತ್ರಗಳವರು ಭಾಗವಹಿಸಲಿದ್ದಾರೆ. 21 ಬಗೆಯ ವೈಕಲ್ಯ ಹೊಂದಿದ 3,000 ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-218137389</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>