<p>ಹುಬ್ಬಳ್ಳಿ: ‘ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಅನಿವಾರ್ಯವಾಗಿದ್ದು, ಉದ್ಯೋಗಾಂಕ್ಷಿಗಳು ಉದ್ಯೋಗ ದೊರಕಿಸಿಕೊಡುವ ಸಂದರ್ಶನದ ಬಗ್ಗೆ ಉಪೇಕ್ಷೆ ಮಾಡಬಾರದು. ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಬೇಕು’ ಎಂದು ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೇರ ಹೇಳಿದರು.</p>.<p>ನಗರದ ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಪಡೆಯುವ ಹಂತ ಮುಗಿಸಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಜೀವನ ರೂಪಿಸಿಕೊಳ್ಳಲು ಅವಶ್ಯವಾದ ಉದ್ಯೋಗದತ್ತ ಗಮನಹರಿಸಬೇಕು’ ಎಂದರು.</p>.<p>‘ಸಂದರ್ಶನಕ್ಕೆ ಹಾಜರಾಗುವ ಮುಂಚೆ ಸಂಬಂಧಿಸಿದ ಉದ್ಯೋಗದ ಕುರಿತು ಸಾಧಕ– ಬಾಧಕಗಳ ಅಧ್ಯಯನ ನಡೆಸಬೇಕು. ಸಂದರ್ಶಕರ ಎದುರು ಮುಕ್ತವಾಗಿ ಮಾತನಾಡಬೇಕು. ವೃತ್ತಿ ಬದ್ಧತೆಯನ್ನು ತಿಳಿಸಬೇಕು’ ಎಂದು ಸಲಹೆ ನೀಡಿದರು.</p>.<p>ವಿಪ್ರೊ ಕಂಪೆನಿಯ ಮಿಥಿಲೇಶ ಅವರು, ‘ಯಾವುದೇ ಗುರಿ ಸಾಧಿಸಬೇಕಾದರೆ ಸತತ ಪರಿಶ್ರಮ ಮತ್ತು ಕಾರ್ಯದಕ್ಷತೆ ಹೊಂದಿರಬೇಕು. ಆಗ ಮಾತ್ರ ಜೀವನದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು. ಇದೇ ವೇಳೆ ಸಂದರ್ಶಕರ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.</p>.<p>ಮೇಳದಲ್ಲಿ ವಿವಿಧ ಕಂಪನಿಗಳ ಪ್ರಮುಖರು ಭಾಗವಹಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿದರು.</p>.<p>ಪ್ರಮುಖರಾದ ಜಗದೀಶ ಅಸುಂಡಿ, ರವಿ ಅಲಗೋಡಿ, ಮಂಜುನಾಥ ಯಾದವಾಡ, ಸುರೇಶ ಎಸ್.ಎಸ್., ವಿನೋದ ಹೂಲಿ, ಮಲ್ಲಿಕ್ ಧಾರವಾಡ, ಮನ್ಸೂರ ಅಲಿ ಫಿರಜಾದೆ, ಕಿರಣಕುಮಾರ್ ಮಂಟೂರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-24-1240484213</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಅನಿವಾರ್ಯವಾಗಿದ್ದು, ಉದ್ಯೋಗಾಂಕ್ಷಿಗಳು ಉದ್ಯೋಗ ದೊರಕಿಸಿಕೊಡುವ ಸಂದರ್ಶನದ ಬಗ್ಗೆ ಉಪೇಕ್ಷೆ ಮಾಡಬಾರದು. ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಬೇಕು’ ಎಂದು ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೇರ ಹೇಳಿದರು.</p>.<p>ನಗರದ ಟಿಪ್ಪು ಷಹೀದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಪಾಲಿಟೆಕ್ನಿಕ್) ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಪಡೆಯುವ ಹಂತ ಮುಗಿಸಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಜೀವನ ರೂಪಿಸಿಕೊಳ್ಳಲು ಅವಶ್ಯವಾದ ಉದ್ಯೋಗದತ್ತ ಗಮನಹರಿಸಬೇಕು’ ಎಂದರು.</p>.<p>‘ಸಂದರ್ಶನಕ್ಕೆ ಹಾಜರಾಗುವ ಮುಂಚೆ ಸಂಬಂಧಿಸಿದ ಉದ್ಯೋಗದ ಕುರಿತು ಸಾಧಕ– ಬಾಧಕಗಳ ಅಧ್ಯಯನ ನಡೆಸಬೇಕು. ಸಂದರ್ಶಕರ ಎದುರು ಮುಕ್ತವಾಗಿ ಮಾತನಾಡಬೇಕು. ವೃತ್ತಿ ಬದ್ಧತೆಯನ್ನು ತಿಳಿಸಬೇಕು’ ಎಂದು ಸಲಹೆ ನೀಡಿದರು.</p>.<p>ವಿಪ್ರೊ ಕಂಪೆನಿಯ ಮಿಥಿಲೇಶ ಅವರು, ‘ಯಾವುದೇ ಗುರಿ ಸಾಧಿಸಬೇಕಾದರೆ ಸತತ ಪರಿಶ್ರಮ ಮತ್ತು ಕಾರ್ಯದಕ್ಷತೆ ಹೊಂದಿರಬೇಕು. ಆಗ ಮಾತ್ರ ಜೀವನದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು. ಇದೇ ವೇಳೆ ಸಂದರ್ಶಕರ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು.</p>.<p>ಮೇಳದಲ್ಲಿ ವಿವಿಧ ಕಂಪನಿಗಳ ಪ್ರಮುಖರು ಭಾಗವಹಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿದರು.</p>.<p>ಪ್ರಮುಖರಾದ ಜಗದೀಶ ಅಸುಂಡಿ, ರವಿ ಅಲಗೋಡಿ, ಮಂಜುನಾಥ ಯಾದವಾಡ, ಸುರೇಶ ಎಸ್.ಎಸ್., ವಿನೋದ ಹೂಲಿ, ಮಲ್ಲಿಕ್ ಧಾರವಾಡ, ಮನ್ಸೂರ ಅಲಿ ಫಿರಜಾದೆ, ಕಿರಣಕುಮಾರ್ ಮಂಟೂರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-24-1240484213</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>