<p>ಜಗಳೂರು: ‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ರಂಗಕರ್ಮಿಗಳು, ಜಾನಪದ ಕಲಾವಿದರಿದ್ದು ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಕಲಾವಿದರಿಗೂ ಸಿಗಬೇಕು’ ಎಂದು ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪ್ರಸಾದ್ ಆಗ್ರಹಿಸಿದರು.</p>.<p>ಪಟ್ಟಣದ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಮ್ಮ ಸಂಘಟನೆಯಲ್ಲಿ ರಾಜ್ಯವ್ಯಾಪಿ 17,500 ಕಲಾವಿದರು ಸದಸ್ಯತ್ವ ಹೊಂದಿದ್ದಾರೆ. ಆನ್ಲೈನ್ ಅರ್ಜಿ ಆಹ್ವಾನದಿಂದ ಗ್ರಾಮೀಣ ಭಾಗದ ಮಹಿಳಾ ಕಲಾವಿದರು ವಂಚಿತರಾಗುತ್ತಿದ್ದು, ಸಂಘಟನೆಯನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಿ ಬಲಪಡಿಸಲಾಗು ವುದು. ಮುಂದಿನ ಬಜೆಟ್ನಲ್ಲಿ ಕಲಾವಿದರ ಭದ್ರತೆಗಾಗಿ ₹5,000 ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>‘ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹಿರಿಯ ಕಲಾವಿದರ ಜೀವನ ಭದ್ರತೆಗಾಗಿ ಸರ್ಕಾರ ಯೋಜನೆಯನ್ನು ರೂಪಿಸಬೇಕು’ ಎಂದು ಮಾಜಿ ಶಾಸಕ ಕೃಷ್ಣಾರೆಡ್ಡಿ ಒತ್ತಾಯಿಸಿದರು.</p>.<p>‘ಸವಲತ್ತುಗಳನ್ನು ಪಡೆಯ ಬೇಕಾದರೆ ಕಲಾವಿದರಲ್ಲಿ ಒಗ್ಗಟ್ಟು ಅಗತ್ಯವಿದೆ. ಕಲಾವಿದರ ಕುಂದು– ಕೊರತೆಗಳಿಗೆ ವಿಧಾನಸೌಧ ದಲ್ಲಿ ಧ್ವನಿಯಾಗುವ ಶಾಸಕರನ್ನು ಆಯ್ಕೆಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಅಭಿಪ್ರಾಯಪಟ್ಟರು.</p>.<p>ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್ ಮಾತನಾಡಿದರು. 21 ಸಾಧಕರಿಗೆ ಜಾನಪದ ಪ್ರಶಸ್ತಿ ಹಾಗೂ ಕರ್ನಾಟಕ ರಂಗ ಪದ್ಮಶ್ರೀ, ಕರ್ನಾಟಕ ಚಿತ್ರ ಪದ್ಮಶ್ರೀ ಬಿರುದು ಪ್ರದಾನ ಮಾಡಲಾಯಿತು.</p>.<p>ಹಿಪ್ಪರಗಿ ಮಠದ ಮಾತೃಶ್ರೀ ಅನುರಾಧೇಶ್ವರಿ ಅಮ್ಮ, ಮುಖಂಡರಾದ ಬಿಸ್ತುವಳ್ಳಿ ಬಾಬು, ರಾಜು ಗೌಡ, ಮರೇನಹಳ್ಳಿ ಕುಮಾರ, ಡಿ.ಕೆಂಪಣ್ಣ, ವೃಷಭೇಂದ್ರ, ಕುಮಾರ್, ಸುಮಾ, ಬಸವರಾಜ್, ಭಾರತಿ, ಭರತೇಶ್, ಶಾರದಮ್ಮ, ಸಂದೀಪ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-43-1157233996</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗಳೂರು: ‘ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ರಂಗಕರ್ಮಿಗಳು, ಜಾನಪದ ಕಲಾವಿದರಿದ್ದು ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಕಲಾವಿದರಿಗೂ ಸಿಗಬೇಕು’ ಎಂದು ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪ್ರಸಾದ್ ಆಗ್ರಹಿಸಿದರು.</p>.<p>ಪಟ್ಟಣದ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ನಮ್ಮ ಸಂಘಟನೆಯಲ್ಲಿ ರಾಜ್ಯವ್ಯಾಪಿ 17,500 ಕಲಾವಿದರು ಸದಸ್ಯತ್ವ ಹೊಂದಿದ್ದಾರೆ. ಆನ್ಲೈನ್ ಅರ್ಜಿ ಆಹ್ವಾನದಿಂದ ಗ್ರಾಮೀಣ ಭಾಗದ ಮಹಿಳಾ ಕಲಾವಿದರು ವಂಚಿತರಾಗುತ್ತಿದ್ದು, ಸಂಘಟನೆಯನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಿ ಬಲಪಡಿಸಲಾಗು ವುದು. ಮುಂದಿನ ಬಜೆಟ್ನಲ್ಲಿ ಕಲಾವಿದರ ಭದ್ರತೆಗಾಗಿ ₹5,000 ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>‘ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಹಿರಿಯ ಕಲಾವಿದರ ಜೀವನ ಭದ್ರತೆಗಾಗಿ ಸರ್ಕಾರ ಯೋಜನೆಯನ್ನು ರೂಪಿಸಬೇಕು’ ಎಂದು ಮಾಜಿ ಶಾಸಕ ಕೃಷ್ಣಾರೆಡ್ಡಿ ಒತ್ತಾಯಿಸಿದರು.</p>.<p>‘ಸವಲತ್ತುಗಳನ್ನು ಪಡೆಯ ಬೇಕಾದರೆ ಕಲಾವಿದರಲ್ಲಿ ಒಗ್ಗಟ್ಟು ಅಗತ್ಯವಿದೆ. ಕಲಾವಿದರ ಕುಂದು– ಕೊರತೆಗಳಿಗೆ ವಿಧಾನಸೌಧ ದಲ್ಲಿ ಧ್ವನಿಯಾಗುವ ಶಾಸಕರನ್ನು ಆಯ್ಕೆಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಅಭಿಪ್ರಾಯಪಟ್ಟರು.</p>.<p>ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್ ಮಾತನಾಡಿದರು. 21 ಸಾಧಕರಿಗೆ ಜಾನಪದ ಪ್ರಶಸ್ತಿ ಹಾಗೂ ಕರ್ನಾಟಕ ರಂಗ ಪದ್ಮಶ್ರೀ, ಕರ್ನಾಟಕ ಚಿತ್ರ ಪದ್ಮಶ್ರೀ ಬಿರುದು ಪ್ರದಾನ ಮಾಡಲಾಯಿತು.</p>.<p>ಹಿಪ್ಪರಗಿ ಮಠದ ಮಾತೃಶ್ರೀ ಅನುರಾಧೇಶ್ವರಿ ಅಮ್ಮ, ಮುಖಂಡರಾದ ಬಿಸ್ತುವಳ್ಳಿ ಬಾಬು, ರಾಜು ಗೌಡ, ಮರೇನಹಳ್ಳಿ ಕುಮಾರ, ಡಿ.ಕೆಂಪಣ್ಣ, ವೃಷಭೇಂದ್ರ, ಕುಮಾರ್, ಸುಮಾ, ಬಸವರಾಜ್, ಭಾರತಿ, ಭರತೇಶ್, ಶಾರದಮ್ಮ, ಸಂದೀಪ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-43-1157233996</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>