<p>ಸುರಪುರ: ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 100 ಗಂಟೆಗೂ ಹೆಚ್ಚುಕಾಲ ಹಮ್ಮಿಕೊಂಡಿದ್ದ ಯುವ ಉದ್ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೋಮವಾರ ಜರುಗಿತು.</p>.<p>ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ವತಿಯಿಂದ ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಉಪಕ್ರಮದ ಭಾಗವಾಗಿ ಯುವ ಉದ್ಯೋಗ ತರಬೇತಿ ಕಾರ್ಯಕ್ರಮ ಕಳೆದ ಮಾರ್ಚ್ 2 ರಂದು ಆರಂಭಗೊಂಡಿತ್ತು.</p>.<p>ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ಅಲ್ಲದ ಯುವಕರಿಗೆ ಕೌಶಲ ತರಬೇತಿ ಕೊಟ್ಟು ಅವರನ್ನು ಕಾರ್ಪೋರೇಟ್ ಜಗತ್ತಿಗೆ ಆತ್ಮವಿಶ್ವಾಸದಿಂದ ಪ್ರವೇಶಿಸಲು ಸಜ್ಜುಗೊಳಿಸುವುದು ತರಬೇತಿ ಕಾರ್ಯಕ್ರಮದ ಉದ್ದೇಶವಾಗಿತ್ತು.</p>.<p>ತರಬೇತಿ ಪಡೆದ 8 ಜನ ವಿದ್ಯಾರ್ಥಿಗಳಾದ ಮಹೇಶ, ಗಿರಿಜಾ ಪಾಟೀಲ, ಮಂಜುನಾಥ ಕಟ್ಟಿಮನಿ, ಹರ್ಷಿತಾ, ಸುಶೀಲಾ, ಸಂಗಮೇಶ, ಪ್ರಜೋತ್ ಮತ್ತು ನಯನ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶರಣಬಸಪ್ಪ ವಿ.ನಿಷ್ಠಿ ಮಾತನಾಡಿ, ‘ಇಂದು ತಾವೆಲ್ಲ ಪಡೆದುಕೊಂಡ ತರಬೇತಿ ಭವಿಷ್ಯದಲ್ಲಿ ನಿಮ್ಮ ಬದುಕನ್ನು ಉಜ್ವಲಗೊಳಿಸುವಲ್ಲಿ ಹೆಚ್ಚಿನ ಸಹಕಾರ ನೀಡಲಿದೆ. ತರಬೇತಿಯಲ್ಲಿ ಪಡೆದುಕೊಂಡ ಕೌಶಲ್ಯಗಳು ನಿಮ್ಮ ವೃತ್ತಿ ಬದುಕನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು’ ಎಂದು ಹೇಳಿದರು.</p>.<p>ಸಂಸ್ಥೆಯ ಕಾರ್ಯದರ್ಶಿ ಶಾಂತಲಾ ಎಸ್.ನಿಷ್ಠಿ, ಪ್ರಾಂಶುಪಾಲ ಶರಣಬಸಪ್ಪ ಸಾಲಿ, ವಿವಿಧ ವಿಭಾಗಗಳ ಉಪನ್ಯಾಸಕರಾದ ಮಂಜುನಾಥ ಯಾಳವಾರ, ಅಶೋಕ ಪಾಟೀಲ, ಶರಣಗೌಡ ಪಾಟೀಲ, ಶೃತಿಶ್ರೀ, ಅಶ್ವಿನಿ ಮಾಲಿಪಾಟೀಲ, ಈಶ್ವರರಾಜ ಪಾಟೀಲ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-30-277071896</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 100 ಗಂಟೆಗೂ ಹೆಚ್ಚುಕಾಲ ಹಮ್ಮಿಕೊಂಡಿದ್ದ ಯುವ ಉದ್ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೋಮವಾರ ಜರುಗಿತು.</p>.<p>ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ವತಿಯಿಂದ ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಉಪಕ್ರಮದ ಭಾಗವಾಗಿ ಯುವ ಉದ್ಯೋಗ ತರಬೇತಿ ಕಾರ್ಯಕ್ರಮ ಕಳೆದ ಮಾರ್ಚ್ 2 ರಂದು ಆರಂಭಗೊಂಡಿತ್ತು.</p>.<p>ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ಅಲ್ಲದ ಯುವಕರಿಗೆ ಕೌಶಲ ತರಬೇತಿ ಕೊಟ್ಟು ಅವರನ್ನು ಕಾರ್ಪೋರೇಟ್ ಜಗತ್ತಿಗೆ ಆತ್ಮವಿಶ್ವಾಸದಿಂದ ಪ್ರವೇಶಿಸಲು ಸಜ್ಜುಗೊಳಿಸುವುದು ತರಬೇತಿ ಕಾರ್ಯಕ್ರಮದ ಉದ್ದೇಶವಾಗಿತ್ತು.</p>.<p>ತರಬೇತಿ ಪಡೆದ 8 ಜನ ವಿದ್ಯಾರ್ಥಿಗಳಾದ ಮಹೇಶ, ಗಿರಿಜಾ ಪಾಟೀಲ, ಮಂಜುನಾಥ ಕಟ್ಟಿಮನಿ, ಹರ್ಷಿತಾ, ಸುಶೀಲಾ, ಸಂಗಮೇಶ, ಪ್ರಜೋತ್ ಮತ್ತು ನಯನ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶರಣಬಸಪ್ಪ ವಿ.ನಿಷ್ಠಿ ಮಾತನಾಡಿ, ‘ಇಂದು ತಾವೆಲ್ಲ ಪಡೆದುಕೊಂಡ ತರಬೇತಿ ಭವಿಷ್ಯದಲ್ಲಿ ನಿಮ್ಮ ಬದುಕನ್ನು ಉಜ್ವಲಗೊಳಿಸುವಲ್ಲಿ ಹೆಚ್ಚಿನ ಸಹಕಾರ ನೀಡಲಿದೆ. ತರಬೇತಿಯಲ್ಲಿ ಪಡೆದುಕೊಂಡ ಕೌಶಲ್ಯಗಳು ನಿಮ್ಮ ವೃತ್ತಿ ಬದುಕನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು’ ಎಂದು ಹೇಳಿದರು.</p>.<p>ಸಂಸ್ಥೆಯ ಕಾರ್ಯದರ್ಶಿ ಶಾಂತಲಾ ಎಸ್.ನಿಷ್ಠಿ, ಪ್ರಾಂಶುಪಾಲ ಶರಣಬಸಪ್ಪ ಸಾಲಿ, ವಿವಿಧ ವಿಭಾಗಗಳ ಉಪನ್ಯಾಸಕರಾದ ಮಂಜುನಾಥ ಯಾಳವಾರ, ಅಶೋಕ ಪಾಟೀಲ, ಶರಣಗೌಡ ಪಾಟೀಲ, ಶೃತಿಶ್ರೀ, ಅಶ್ವಿನಿ ಮಾಲಿಪಾಟೀಲ, ಈಶ್ವರರಾಜ ಪಾಟೀಲ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-30-277071896</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>