<p>ಅಳ್ನಾವರ: ‘ಮಹಿಳೆಯರಲ್ಲಿ ವಿಶಿಷ್ಟ ಶಕ್ತಿ ಅಡಗಿದೆ. ಶಾಂತಿ, ಸಹನೆಯ ಪ್ರತೀಕವಾದ ಮಹಿಳೆ ಎಲ್ಲ ರಂಗದಲ್ಲಿ ಮುಂದೆ ಬರಬೇಕು’ ಎಂದು ಸಿದ್ಧಾಯಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗ ರೇವಣಕರ ಹೇಳಿದರು.</p>.<p>ರೇವಣಕರ ಸಭಾಭವನದಲ್ಲಿ ಈಚೆಗೆ ಸಿದ್ಧಾಯಿ ಕೆಡಿಟ್ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಮಹಿಳಾ ದಿಗ್ಗಜರ ಜೀವನ ಚರಿತ್ರೆ ಓದಬೇಕು, ಸಮಾಜದಲ್ಲಿ ನಡೆಯುವ ಲವ್ ಜಿಹಾದ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.</p>.<p>ಕಸ್ತೂಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಲಾಡ್ ಉಪನ್ಯಾಸ ನೀಡಿ, ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆದು ಪ್ರತಿ ಕ್ಷೇತ್ರದಲ್ಲಿ ಸೇವೆ ಮಾಡಲು ಮುಂದೆ ಬರಬೇಕು ಎಂದರು. ಸಾಮಾಜಿಕ ಚಿಂತಕ ಮಹಾದೇವ ಸಾಗರೇಕರ, ಸವಿತಾ ಮುರಗೋಡ, ಗಂಗಾ ಮಾತನಾಡಿದರು.</p>.<p>ಸಹಕಾರಿಯ ಉಪಾಧ್ಯಕ್ಷ ನಾರಾಯಣ ಪಟೇಲ, ನಿರ್ದೇಶಕರಾದ ಪರಶುರಾಮ ಗಾವಡೆ, ಮದನ್ ಹಿಂಡಸಗೇರಿ, ಬ್ರಹ್ಮಾನಂದ ಬೈಕೇರಿಕರ, ನಿತೇಶ ರೇವಣಕರ, ದತ್ತಾ ನಿಟ್ಟೂರಕರ, ಶುಭಂ ಗಾವಡೆ, ಸಾಧನಾ ಕಿನಾರೆ, ಸ್ವಾತಿ ಬೀಡಿಕರ, ಚಂದ್ರಬಾಗಾ ಪವಾರ ಇದ್ದರು.</p>.<p>ಸುನಿತಾ ಪೆಜೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶ ಪೇಡ್ನೇಕರ, ಮಂಜುನಾಥ ನಂದಿಹಳ್ಳಿ, ಕವಿತಾ ರಾಂದೇವಾಡಿ, ಸುನಿತಾ ಬಡಸ್ಕರ್, ಮೂಕಾಂಬಿಕಾ ಬರಗುಂಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-24-908154395</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಳ್ನಾವರ: ‘ಮಹಿಳೆಯರಲ್ಲಿ ವಿಶಿಷ್ಟ ಶಕ್ತಿ ಅಡಗಿದೆ. ಶಾಂತಿ, ಸಹನೆಯ ಪ್ರತೀಕವಾದ ಮಹಿಳೆ ಎಲ್ಲ ರಂಗದಲ್ಲಿ ಮುಂದೆ ಬರಬೇಕು’ ಎಂದು ಸಿದ್ಧಾಯಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗ ರೇವಣಕರ ಹೇಳಿದರು.</p>.<p>ರೇವಣಕರ ಸಭಾಭವನದಲ್ಲಿ ಈಚೆಗೆ ಸಿದ್ಧಾಯಿ ಕೆಡಿಟ್ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಮಹಿಳಾ ದಿಗ್ಗಜರ ಜೀವನ ಚರಿತ್ರೆ ಓದಬೇಕು, ಸಮಾಜದಲ್ಲಿ ನಡೆಯುವ ಲವ್ ಜಿಹಾದ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.</p>.<p>ಕಸ್ತೂಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಲಾಡ್ ಉಪನ್ಯಾಸ ನೀಡಿ, ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆದು ಪ್ರತಿ ಕ್ಷೇತ್ರದಲ್ಲಿ ಸೇವೆ ಮಾಡಲು ಮುಂದೆ ಬರಬೇಕು ಎಂದರು. ಸಾಮಾಜಿಕ ಚಿಂತಕ ಮಹಾದೇವ ಸಾಗರೇಕರ, ಸವಿತಾ ಮುರಗೋಡ, ಗಂಗಾ ಮಾತನಾಡಿದರು.</p>.<p>ಸಹಕಾರಿಯ ಉಪಾಧ್ಯಕ್ಷ ನಾರಾಯಣ ಪಟೇಲ, ನಿರ್ದೇಶಕರಾದ ಪರಶುರಾಮ ಗಾವಡೆ, ಮದನ್ ಹಿಂಡಸಗೇರಿ, ಬ್ರಹ್ಮಾನಂದ ಬೈಕೇರಿಕರ, ನಿತೇಶ ರೇವಣಕರ, ದತ್ತಾ ನಿಟ್ಟೂರಕರ, ಶುಭಂ ಗಾವಡೆ, ಸಾಧನಾ ಕಿನಾರೆ, ಸ್ವಾತಿ ಬೀಡಿಕರ, ಚಂದ್ರಬಾಗಾ ಪವಾರ ಇದ್ದರು.</p>.<p>ಸುನಿತಾ ಪೆಜೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶ ಪೇಡ್ನೇಕರ, ಮಂಜುನಾಥ ನಂದಿಹಳ್ಳಿ, ಕವಿತಾ ರಾಂದೇವಾಡಿ, ಸುನಿತಾ ಬಡಸ್ಕರ್, ಮೂಕಾಂಬಿಕಾ ಬರಗುಂಡಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260407-24-908154395</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>