<p>ಅಳ್ನಾವರ: ರಜೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಯೋಜಕ ಮಹಾದೇವ ಸಾಗರೇಕರ ಹೇಳಿದರು.</p>.<p>ಇಲ್ಲಿನ ನೆಸ್ಟ್ ಕ್ರೀಯೆಟಿವ್ ಫೌಂಡೇಷನ್ ವತಿಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶನಿವಾರದಿಂದ ಆರಂಭವಾದ 9 ದಿನಗಳ ಕಾಲದ ಬೇಸಿಗೆ ಶಿಬಿರದಲ್ಲಿ ಭಾನುವಾರ ಯೋಗದ ಮಹತ್ವ ಕುರಿತು ಅವರು ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ ಯೋಗ ಉಪಯುಕ್ತ, ನಿತ್ಯ ಇದನ್ನು ಮಾಡುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.</p>.<p>ರಾಜು ಕರ್ಲೇಕರ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳ ಮಾನಸಿಕ ಆಧ್ಮಾತ್ಮಿಕ, ಶೈಕ್ಷಣಿಕ, ಸಾಮರ್ಥ ಹೆಚ್ಚಿಸಲು ತರಬೇತಿ ನೀಡಲಾಗುವುದು ಜತೆಗೆ ನೃತ್ಯ, ಕರಾಟೆ, ಗಣಿತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಪರಿಸರ ಅಧ್ಯಯನ ಮುಂತಾದ ಕೌಶಲಗಳನ್ನು ಉಣ ಬಡಿಸಲಾಗುವುದು ಇದರ ಲಾಭ ಮಕ್ಕಳು ಪಡೆದುಕೊಳ್ಳಿ ಎಂದು ಹೇಳಿದರು.</p>.<p>ಪಕೃತಿ ಮಡಿಲಿನ ಸುಂದರ ಪರಿಸರದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪೂರ್ಣಿಮಾ ಮುತ್ನಾಳ, ಎಸ್.ಡಿ. ದೇಗಾವಿಮಠ ಭಕ್ತಿ ಗೀತೆ ಹೇಳಿ ಕೊಟ್ಟರು.</p>.<p>ಎನ್.ಎಸ್. ಗರಗ ಚಿತ್ರಕಲೆ ಬರೆಯುವ ಕಲೆ ತಿಳಿಸಿದರು.</p>.<p>ಪುಂಡಲಿಕ ಪಾರ್ದಿ, ರಾಜು ಕರ್ಲೇಕರ, ನಾರಾಯಣ ಪಟೇಲ, ಅನ್ನಪೂರ್ಣ, ಮಹಾದೇವಿ ಹಿರೇಮಠ, ಸನ್ನೇರಿ, ಜಯಶ್ರೀ ಉಡುಪಿ, ಮಂಜುನಾಥ ಬೆಂಡಿಗೇರಿ, ಸನ್ನೇರ, ಸಚಿನ ಸಾಗರೇಕರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-24-818332874</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಳ್ನಾವರ: ರಜೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಯೋಜಕ ಮಹಾದೇವ ಸಾಗರೇಕರ ಹೇಳಿದರು.</p>.<p>ಇಲ್ಲಿನ ನೆಸ್ಟ್ ಕ್ರೀಯೆಟಿವ್ ಫೌಂಡೇಷನ್ ವತಿಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶನಿವಾರದಿಂದ ಆರಂಭವಾದ 9 ದಿನಗಳ ಕಾಲದ ಬೇಸಿಗೆ ಶಿಬಿರದಲ್ಲಿ ಭಾನುವಾರ ಯೋಗದ ಮಹತ್ವ ಕುರಿತು ಅವರು ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ ಯೋಗ ಉಪಯುಕ್ತ, ನಿತ್ಯ ಇದನ್ನು ಮಾಡುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.</p>.<p>ರಾಜು ಕರ್ಲೇಕರ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳ ಮಾನಸಿಕ ಆಧ್ಮಾತ್ಮಿಕ, ಶೈಕ್ಷಣಿಕ, ಸಾಮರ್ಥ ಹೆಚ್ಚಿಸಲು ತರಬೇತಿ ನೀಡಲಾಗುವುದು ಜತೆಗೆ ನೃತ್ಯ, ಕರಾಟೆ, ಗಣಿತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಪರಿಸರ ಅಧ್ಯಯನ ಮುಂತಾದ ಕೌಶಲಗಳನ್ನು ಉಣ ಬಡಿಸಲಾಗುವುದು ಇದರ ಲಾಭ ಮಕ್ಕಳು ಪಡೆದುಕೊಳ್ಳಿ ಎಂದು ಹೇಳಿದರು.</p>.<p>ಪಕೃತಿ ಮಡಿಲಿನ ಸುಂದರ ಪರಿಸರದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪೂರ್ಣಿಮಾ ಮುತ್ನಾಳ, ಎಸ್.ಡಿ. ದೇಗಾವಿಮಠ ಭಕ್ತಿ ಗೀತೆ ಹೇಳಿ ಕೊಟ್ಟರು.</p>.<p>ಎನ್.ಎಸ್. ಗರಗ ಚಿತ್ರಕಲೆ ಬರೆಯುವ ಕಲೆ ತಿಳಿಸಿದರು.</p>.<p>ಪುಂಡಲಿಕ ಪಾರ್ದಿ, ರಾಜು ಕರ್ಲೇಕರ, ನಾರಾಯಣ ಪಟೇಲ, ಅನ್ನಪೂರ್ಣ, ಮಹಾದೇವಿ ಹಿರೇಮಠ, ಸನ್ನೇರಿ, ಜಯಶ್ರೀ ಉಡುಪಿ, ಮಂಜುನಾಥ ಬೆಂಡಿಗೇರಿ, ಸನ್ನೇರ, ಸಚಿನ ಸಾಗರೇಕರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-24-818332874</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>