<p>ಕೆ.ಆರ್.ಪುರ: ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಪ್ರಯುಕ್ತ ಮೇ 10,17,24 ಮತ್ತು 31 ರಂದು ‘ಮೇಳ’ (ಸಾಂಸ್ಕೃತಿಕ ಕಲೆಗಳ ಸಂಭ್ರಮ) ಆಯೋಜಿಸಲಾಗಿದೆ ಎಂದು ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ಅಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದರು.</p>.<p>ಮೇ 10 ರಂದು ಚಿತ್ರಕಲೆ, ಮೇ 17 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಮೇ 24ರಂದು ಮ್ಯಾರಥಾನ್ ಓಟ ಆಯೋಜಿಸಲಾಗಿದ್ದು, ಮೇ 31ರಂದು ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ 5ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಯಲ್ಲಿ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. 5 ಹಾಗೂ 10 ಕಿ.ಮೀ. ಮ್ಯಾರಥಾನ್ ಇರಲಿದೆ. ಚಿತ್ರಕಲೆ ಸ್ಪರ್ಧೆಗೆ ₹28 ಸಾವಿರ, ರಸಪ್ರಶ್ನೆಗೆ ₹30 ಸಾವಿರ, ಮ್ಯಾರಥಾನ್ ಸ್ಪರ್ಧೆ ₹25 ಸಾವಿರ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ₹22 ಸಾವಿರ ಬಹುಮಾನ ನೀಡಲಾಗುವುದು ಎಂದರು. ವಿಜೇತರಿಗೆ ಮೇ 31ರ ಸಂಜೆ 4 ಗಂಟೆಗೆ ಕಾಟಂನಲ್ಲೂರು ಬಳಿಯಿರುವ ಜನಪದರು ರಂಗ ಮಂದಿರದಲ್ಲಿ ನಡೆಯಲಿರುವ ‘ಮೇಳ’ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.</p>.<p>ಮಾಹಿತಿಗೆ ಮೊಬೈಲ್ 9845284848 ಮತ್ತು 8123021966ಗೆ ಸಂಪರ್ಕಿಸಬಹುದು.</p>.<p>ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಚಿನ್ನಸ್ವಾಮಿ, ದೇವರಾಜ್, ಆಸಿಫ್ ಅಕ್ರಮ್ ಹಾಗೂ ವಿಜಯನ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-4-209069967</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಆರ್.ಪುರ: ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಪ್ರಯುಕ್ತ ಮೇ 10,17,24 ಮತ್ತು 31 ರಂದು ‘ಮೇಳ’ (ಸಾಂಸ್ಕೃತಿಕ ಕಲೆಗಳ ಸಂಭ್ರಮ) ಆಯೋಜಿಸಲಾಗಿದೆ ಎಂದು ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ಅಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದರು.</p>.<p>ಮೇ 10 ರಂದು ಚಿತ್ರಕಲೆ, ಮೇ 17 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಮೇ 24ರಂದು ಮ್ಯಾರಥಾನ್ ಓಟ ಆಯೋಜಿಸಲಾಗಿದ್ದು, ಮೇ 31ರಂದು ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ 5ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಯಲ್ಲಿ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. 5 ಹಾಗೂ 10 ಕಿ.ಮೀ. ಮ್ಯಾರಥಾನ್ ಇರಲಿದೆ. ಚಿತ್ರಕಲೆ ಸ್ಪರ್ಧೆಗೆ ₹28 ಸಾವಿರ, ರಸಪ್ರಶ್ನೆಗೆ ₹30 ಸಾವಿರ, ಮ್ಯಾರಥಾನ್ ಸ್ಪರ್ಧೆ ₹25 ಸಾವಿರ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ₹22 ಸಾವಿರ ಬಹುಮಾನ ನೀಡಲಾಗುವುದು ಎಂದರು. ವಿಜೇತರಿಗೆ ಮೇ 31ರ ಸಂಜೆ 4 ಗಂಟೆಗೆ ಕಾಟಂನಲ್ಲೂರು ಬಳಿಯಿರುವ ಜನಪದರು ರಂಗ ಮಂದಿರದಲ್ಲಿ ನಡೆಯಲಿರುವ ‘ಮೇಳ’ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.</p>.<p>ಮಾಹಿತಿಗೆ ಮೊಬೈಲ್ 9845284848 ಮತ್ತು 8123021966ಗೆ ಸಂಪರ್ಕಿಸಬಹುದು.</p>.<p>ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಚಿನ್ನಸ್ವಾಮಿ, ದೇವರಾಜ್, ಆಸಿಫ್ ಅಕ್ರಮ್ ಹಾಗೂ ವಿಜಯನ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-4-209069967</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>