<p>ಬೈಲಹೊಂಗಲ: ನಗರ್ ಎ.ವಿ.ಢಮ್ಮಣಗಿ ವಿಜನ್ ಫೌಂಡೇಶನದ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಎನ್ಸಿಸಿ 28 ಕರ್ನಾಟಕ ಬಟಾಲಿಯನ್ (ಹುಬ್ಬಳ್ಳಿ) ವತಿಯಿಂದ 10 ದಿನಗಳ ವಾರ್ಷಿಕ ತರಬೇತಿ ಶಿಬಿರ (ಎಟಿಸಿ) ಆರಂಭಿಸಲಾಗಿದೆ.</p>.<p>ರಾಜ್ಯದ ಬೇರೆ, ಬೇರೆ 18 ಶಾಲೆ, ಕಾಲೇಜುಗಳಿಂದ ಜೂನಿಯರ್ ವಿಭಾಗದಲ್ಲಿ 8 ಹಾಗೂ 9 ನೇ ತರಗತಿ ಮತ್ತು ಸಿನಿಯರ್ ವಿಭಾಗದಲ್ಲಿ ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಸೇರಿದಂತೆ 600 ಎನ್.ಸಿ.ಸಿ. ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.</p>.<p>ಶಿಬಿರದಲ್ಲಿ ಯೋಗ ಮತ್ತು ದೈಹಿಕ ತರಬೇತಿ, ಡ್ರಿಲ್ ಮತ್ತು ಪರೇಡ್, ಶಸ್ತ್ರಾಸ್ತ್ರ ಬಳಕೆ ಮತ್ತು ಫೈರಿಂಗ್ ಅಭ್ಯಾಸ, ಮ್ಯಾಪ್ ರೀಡಿಂಗ್ ಮತ್ತು ಫೀಲ್ಡ ಕ್ರಾಫ್ಟ್, ಗುಂಪು ಚರ್ಚೆಗಳು ಮತ್ತು ನಾಯಕತ್ವ ತರಬೇತಿ, ಸಮಾಜ ಸೇವಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.</p>.<p>ಬೆಟಾಲಿಯನ್ ಮುಖ್ಯಸ್ಥ, ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಜಸದೀಪಸಿಂಗ್ ಅವರ ನೇತೃತ್ವದಲ್ಲಿ, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಕಪೀಲ್ ಕಶ್ಯಪ, ಎನ್.ಸಿ.ಸಿ.ಅಧಿಕಾರಿಗಳು ಶಿಬಿರದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಶಿಬಿರದ ಚಟುವಟಿಕೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-21-2136438376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೈಲಹೊಂಗಲ: ನಗರ್ ಎ.ವಿ.ಢಮ್ಮಣಗಿ ವಿಜನ್ ಫೌಂಡೇಶನದ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಎನ್ಸಿಸಿ 28 ಕರ್ನಾಟಕ ಬಟಾಲಿಯನ್ (ಹುಬ್ಬಳ್ಳಿ) ವತಿಯಿಂದ 10 ದಿನಗಳ ವಾರ್ಷಿಕ ತರಬೇತಿ ಶಿಬಿರ (ಎಟಿಸಿ) ಆರಂಭಿಸಲಾಗಿದೆ.</p>.<p>ರಾಜ್ಯದ ಬೇರೆ, ಬೇರೆ 18 ಶಾಲೆ, ಕಾಲೇಜುಗಳಿಂದ ಜೂನಿಯರ್ ವಿಭಾಗದಲ್ಲಿ 8 ಹಾಗೂ 9 ನೇ ತರಗತಿ ಮತ್ತು ಸಿನಿಯರ್ ವಿಭಾಗದಲ್ಲಿ ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಸೇರಿದಂತೆ 600 ಎನ್.ಸಿ.ಸಿ. ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.</p>.<p>ಶಿಬಿರದಲ್ಲಿ ಯೋಗ ಮತ್ತು ದೈಹಿಕ ತರಬೇತಿ, ಡ್ರಿಲ್ ಮತ್ತು ಪರೇಡ್, ಶಸ್ತ್ರಾಸ್ತ್ರ ಬಳಕೆ ಮತ್ತು ಫೈರಿಂಗ್ ಅಭ್ಯಾಸ, ಮ್ಯಾಪ್ ರೀಡಿಂಗ್ ಮತ್ತು ಫೀಲ್ಡ ಕ್ರಾಫ್ಟ್, ಗುಂಪು ಚರ್ಚೆಗಳು ಮತ್ತು ನಾಯಕತ್ವ ತರಬೇತಿ, ಸಮಾಜ ಸೇವಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.</p>.<p>ಬೆಟಾಲಿಯನ್ ಮುಖ್ಯಸ್ಥ, ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಜಸದೀಪಸಿಂಗ್ ಅವರ ನೇತೃತ್ವದಲ್ಲಿ, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಕಪೀಲ್ ಕಶ್ಯಪ, ಎನ್.ಸಿ.ಸಿ.ಅಧಿಕಾರಿಗಳು ಶಿಬಿರದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಶಿಬಿರದ ಚಟುವಟಿಕೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-21-2136438376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>