<p>ಬಳ್ಳಾರಿ: ‘ನವ ಮಾಧ್ಯಮಗಳು ಸತ್ಯ, ಪ್ರಾಮಾಣಿಕತೆಯ ಕಡೆ ಗಮನ ಹರಿಸಬೇಕು. ದಿಟ್ಟತನ ಮತ್ತು ಸಾಮಾಜಿಕ ಕಳಕಳಿಯಿಂದ ಅವು ಕರ್ತವ್ಯ ನಿರ್ವಹಿಸಬೇಕು’ ಎಂದು ಹಿರಿಯ ಲೇಖಕ ಜಿ. ಪಿ. ಬಸವರಾಜ ಹೇಳಿದರು.</p>.<p>ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಗಂ ಟ್ರಸ್ಟ್ ಹಾಗೂ ಕನ್ನಡ ಸ್ನಾತಕ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಂತರ ವಿಭಾಗೀಯ ಉಪನ್ಯಾಸ ಸರಣಿಯಲ್ಲಿ ‘ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ಮಾಧ್ಯಮಗಳಲ್ಲಿ ಹಿರಿಯ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವಾಗ ಅವರ ಬಗೆಗೆ ಸಂಪೂರ್ಣ ಮಾಹಿತಿ ಹೊಂದಿರಬೇಕಲ್ಲದೆ ಸೌಜನ್ಯ, ಗೌರವಗಳೊಂದಿಗಿನ ನಡೆ ಬಹಳ ಮುಖ್ಯ. ಜೋರು ಮಾತನಾಡುವ, ಅಹಂಕಾರವನ್ನು ಪ್ರದರ್ಶಿಸುವ, ಹೆದರಿಸಿ ಕೇಳುವ ಬಗೆ ಉಚಿತವಾದುದಲ್ಲ’ ಎಂದರು.</p>.<p>ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ಮಾತನಾಡಿ, ‘ಯುವ ಸಮುದಾಯ ಬದುಕಿನ ಒತ್ತಡ, ತಲ್ಲಣ, ತಳಮಳಗಳನ್ನು ಅಕ್ಷರರೂಪಕ್ಕೆ ಇಳಿಸಲು ಮುಂದಾಗಬೇಕು’ ಎಂದರು.</p>.<p>ಸಂಗಮ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ‘ಹೊಸ ತಲೆಮಾರಿಗೆ ಸಾಹಿತ್ಯ ಸಂಸ್ಕೃತಿ ಬಗೆಗೆ ಅಭಿರುಚಿ ಮೂಡಿಸುತ್ತಲೇ ಹೊಸ ವಿಚಾರಗಳನ್ನು ದಾಟಿಸುವ ಆಲೋಚನೆ ನಮ್ಮ ಟ್ರಸ್ಟಿಗೆ ಇದೆ’ ಎಂದರು.</p>.<p>ಪ್ರಾಂಶುಪಾಲ ಪ್ರಹ್ಲಾದ್ ಚೌದ್ರಿ, ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಕೆ.ಬಸವರಾಜ, ಹುಚ್ಚೂಸಾಬ್ ಸಂಡೂರು, ಲೇಖಕ ವೀರೇಂದ್ರ ರಾವಿಹಾಳು, ನಾಗರಾಜ ಬಸರಕೋಡು, ಸಹಾಯಕ ಪ್ರಾಧ್ಯಾಪಕರಾದ ಬಿ ರಾಮಸ್ವಾಮಿ, ಪ್ರವೀಣಕುಮಾರ್ ಎಂ. ಎನ್, ಲಿಂಗಪ್ಪ, ಮಮತಾ, ಅತಿಥಿ ಉಪನ್ಯಾಸಕರಾದ ಆರ್.ಶ್ರೀನಿವಾಸ್, ಸುಜಾತ, ತಿಪ್ಪೇರುದ್ರ, ಕುಮಾರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-25-1642170006</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ‘ನವ ಮಾಧ್ಯಮಗಳು ಸತ್ಯ, ಪ್ರಾಮಾಣಿಕತೆಯ ಕಡೆ ಗಮನ ಹರಿಸಬೇಕು. ದಿಟ್ಟತನ ಮತ್ತು ಸಾಮಾಜಿಕ ಕಳಕಳಿಯಿಂದ ಅವು ಕರ್ತವ್ಯ ನಿರ್ವಹಿಸಬೇಕು’ ಎಂದು ಹಿರಿಯ ಲೇಖಕ ಜಿ. ಪಿ. ಬಸವರಾಜ ಹೇಳಿದರು.</p>.<p>ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಗಂ ಟ್ರಸ್ಟ್ ಹಾಗೂ ಕನ್ನಡ ಸ್ನಾತಕ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಂತರ ವಿಭಾಗೀಯ ಉಪನ್ಯಾಸ ಸರಣಿಯಲ್ಲಿ ‘ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ಮಾಧ್ಯಮಗಳಲ್ಲಿ ಹಿರಿಯ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವಾಗ ಅವರ ಬಗೆಗೆ ಸಂಪೂರ್ಣ ಮಾಹಿತಿ ಹೊಂದಿರಬೇಕಲ್ಲದೆ ಸೌಜನ್ಯ, ಗೌರವಗಳೊಂದಿಗಿನ ನಡೆ ಬಹಳ ಮುಖ್ಯ. ಜೋರು ಮಾತನಾಡುವ, ಅಹಂಕಾರವನ್ನು ಪ್ರದರ್ಶಿಸುವ, ಹೆದರಿಸಿ ಕೇಳುವ ಬಗೆ ಉಚಿತವಾದುದಲ್ಲ’ ಎಂದರು.</p>.<p>ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ಮಾತನಾಡಿ, ‘ಯುವ ಸಮುದಾಯ ಬದುಕಿನ ಒತ್ತಡ, ತಲ್ಲಣ, ತಳಮಳಗಳನ್ನು ಅಕ್ಷರರೂಪಕ್ಕೆ ಇಳಿಸಲು ಮುಂದಾಗಬೇಕು’ ಎಂದರು.</p>.<p>ಸಂಗಮ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ‘ಹೊಸ ತಲೆಮಾರಿಗೆ ಸಾಹಿತ್ಯ ಸಂಸ್ಕೃತಿ ಬಗೆಗೆ ಅಭಿರುಚಿ ಮೂಡಿಸುತ್ತಲೇ ಹೊಸ ವಿಚಾರಗಳನ್ನು ದಾಟಿಸುವ ಆಲೋಚನೆ ನಮ್ಮ ಟ್ರಸ್ಟಿಗೆ ಇದೆ’ ಎಂದರು.</p>.<p>ಪ್ರಾಂಶುಪಾಲ ಪ್ರಹ್ಲಾದ್ ಚೌದ್ರಿ, ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಕೆ.ಬಸವರಾಜ, ಹುಚ್ಚೂಸಾಬ್ ಸಂಡೂರು, ಲೇಖಕ ವೀರೇಂದ್ರ ರಾವಿಹಾಳು, ನಾಗರಾಜ ಬಸರಕೋಡು, ಸಹಾಯಕ ಪ್ರಾಧ್ಯಾಪಕರಾದ ಬಿ ರಾಮಸ್ವಾಮಿ, ಪ್ರವೀಣಕುಮಾರ್ ಎಂ. ಎನ್, ಲಿಂಗಪ್ಪ, ಮಮತಾ, ಅತಿಥಿ ಉಪನ್ಯಾಸಕರಾದ ಆರ್.ಶ್ರೀನಿವಾಸ್, ಸುಜಾತ, ತಿಪ್ಪೇರುದ್ರ, ಕುಮಾರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260512-25-1642170006</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>