<p>ಬೆಳಗಾವಿ: ‘ಪ್ರಜಾಸತಾತ್ಮಕತೆಯಿಂದ ಇಂದಿನ ಪೀಳಿಗೆಗೆ ಅಕ್ಷರ ಭಾಗ್ಯ ಸಿಕ್ಕಿದೆ. ಪ್ರಜಾಸತಾತ್ಮಕತೆ ಎಂಬುದು ಕೇವಲ ಭಾಷಣದ ಭಾಗವಾಗದೆ, ವರ್ತಮಾನದ ವಿದ್ಯಮಾನವಾಗಬೇಕು’ ಎಂದು ವಿಮರ್ಶಕ ನಟರಾಜ್ ಬೂದಾಳು ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಬುದ್ಧನನ್ನು ಕೇವಲ ಧರ್ಮ ಸಂಸ್ಥಾಪಕನಾಗಿ ನೋಡಬಾರದು. ಬದಲಿಗೆ, ಈ ಲೋಕ ಹೇಗಿದೆಯೋ, ಹಾಗೆಯೇ ನೋಡಬೇಕು ಎಂದು ತೋರಿಸಿಕೊಟ್ಟ ವಿಜ್ಞಾನಿಯಾಗಿ ಕಾಣಬೇಕು’ ಎಂದರು.</p>.<p>‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜಯಂತಿಗಳ ವೇಳೆ ಭಾಷಣಕ್ಕೆ ಸೀಮಿತಗೊಳಿಸಬಾರದು. ಅವರ ಬದುಕಿನ ತಾತ್ವಿಕತೆಯನ್ನು ನಮ್ಮ ಬದುಕಿನುದ್ದಕ್ಕೂ ಅನುಸರಿಸಬೇಕು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳೇ ನಮ್ಮ ಜೀವನಕ್ಕೆ ಆಧಾರ. ಮೂವರು ಮಹನೀಯರು ಸಾಮಾಜಿಕ ವಿಜ್ಞಾನಿ ಮತ್ತು ಸಾಮಾಜಿಕ ದಾರ್ಶನಿಕರಾಗಿ, ಸಮಾಜಕ್ಕೆ ಅನುಪಮ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಹೇಳಿದರು.</p>.<p>ಕುಲಸಚಿವ ಸಂತೋಷ ಕಾಮಗೌಡ,‘ಬುದ್ಧ ಮತ್ತು ಬಸವಣ್ಣನ ಆಶಯಗಳನ್ನು ಅಂಬೇಡ್ಕರ್ ಮೂಲಕ ನಾವು ಸಂವಿಧಾನದಲ್ಲಿ ಓದಬಹುದು’ ಎಂದು ತಿಳಿಸಿದರು.</p>.<p>ಲತಾರಾಣಿ, ‘ಇಂದು ಯುವಜನರು ಸದೃಢ ದೇಹ ಮತ್ತು ಸ್ವಸ್ಥ ಮನಸ್ಸು ಬೆಳಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.</p>.<p>ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಅಶೋಕ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಂಯೋಜಕರಾದ ಮಹೇಶ ಕುಮಾರ ಎನ್., ಅಶ್ವಿನಿ ಜಾಮೂನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-21-1290209177</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ಪ್ರಜಾಸತಾತ್ಮಕತೆಯಿಂದ ಇಂದಿನ ಪೀಳಿಗೆಗೆ ಅಕ್ಷರ ಭಾಗ್ಯ ಸಿಕ್ಕಿದೆ. ಪ್ರಜಾಸತಾತ್ಮಕತೆ ಎಂಬುದು ಕೇವಲ ಭಾಷಣದ ಭಾಗವಾಗದೆ, ವರ್ತಮಾನದ ವಿದ್ಯಮಾನವಾಗಬೇಕು’ ಎಂದು ವಿಮರ್ಶಕ ನಟರಾಜ್ ಬೂದಾಳು ಹೇಳಿದರು.</p>.<p>ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಬುದ್ಧನನ್ನು ಕೇವಲ ಧರ್ಮ ಸಂಸ್ಥಾಪಕನಾಗಿ ನೋಡಬಾರದು. ಬದಲಿಗೆ, ಈ ಲೋಕ ಹೇಗಿದೆಯೋ, ಹಾಗೆಯೇ ನೋಡಬೇಕು ಎಂದು ತೋರಿಸಿಕೊಟ್ಟ ವಿಜ್ಞಾನಿಯಾಗಿ ಕಾಣಬೇಕು’ ಎಂದರು.</p>.<p>‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜಯಂತಿಗಳ ವೇಳೆ ಭಾಷಣಕ್ಕೆ ಸೀಮಿತಗೊಳಿಸಬಾರದು. ಅವರ ಬದುಕಿನ ತಾತ್ವಿಕತೆಯನ್ನು ನಮ್ಮ ಬದುಕಿನುದ್ದಕ್ಕೂ ಅನುಸರಿಸಬೇಕು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳೇ ನಮ್ಮ ಜೀವನಕ್ಕೆ ಆಧಾರ. ಮೂವರು ಮಹನೀಯರು ಸಾಮಾಜಿಕ ವಿಜ್ಞಾನಿ ಮತ್ತು ಸಾಮಾಜಿಕ ದಾರ್ಶನಿಕರಾಗಿ, ಸಮಾಜಕ್ಕೆ ಅನುಪಮ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಹೇಳಿದರು.</p>.<p>ಕುಲಸಚಿವ ಸಂತೋಷ ಕಾಮಗೌಡ,‘ಬುದ್ಧ ಮತ್ತು ಬಸವಣ್ಣನ ಆಶಯಗಳನ್ನು ಅಂಬೇಡ್ಕರ್ ಮೂಲಕ ನಾವು ಸಂವಿಧಾನದಲ್ಲಿ ಓದಬಹುದು’ ಎಂದು ತಿಳಿಸಿದರು.</p>.<p>ಲತಾರಾಣಿ, ‘ಇಂದು ಯುವಜನರು ಸದೃಢ ದೇಹ ಮತ್ತು ಸ್ವಸ್ಥ ಮನಸ್ಸು ಬೆಳಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.</p>.<p>ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಅಶೋಕ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಂಯೋಜಕರಾದ ಮಹೇಶ ಕುಮಾರ ಎನ್., ಅಶ್ವಿನಿ ಜಾಮೂನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-21-1290209177</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>